<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-4309049398760149221</id><updated>2011-09-14T11:06:46.197-04:00</updated><category term='ಕಾಡು ಕಾಡ್ತು'/><category term='ಅಶ್ವತ್ಥ ಕಟ್ಟೆ'/><category term='ಮೌನ ದನಿ'/><category term='ತೆರೆದ ಕಣ್ಣು'/><category term='Soul search'/><category term='ಕಾಲದ ಅಲ್ಬಂನಿಂದ ಹೆಕ್ಕಿ ತೆಗೆದ ಚಿತ್ರಗಳು'/><title type='text'>ಕಾನ ದನಿ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://kaanadani.blogspot.com/feeds/posts/default'/><link rel='self' type='application/atom+xml' href='http://www.blogger.com/feeds/4309049398760149221/posts/default?max-results=100'/><link rel='alternate' type='text/html' href='http://kaanadani.blogspot.com/'/><link rel='hub' href='http://pubsubhubbub.appspot.com/'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><generator version='7.00' uri='http://www.blogger.com'>Blogger</generator><openSearch:totalResults>20</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-4309049398760149221.post-5340745551776913522</id><published>2011-08-26T08:25:00.002-04:00</published><updated>2011-08-26T08:25:31.659-04:00</updated><category scheme='http://www.blogger.com/atom/ns#' term='Soul search'/><title type='text'>Remembering the Giant Friends</title><content type='html'>&lt;br /&gt;A few days ago, I visited the Sarasota Botanical Garden with my family and friends. It was just a weekend getaway, a sort of picnic as per the plan. You know..., venture into a new place which won't cost you up much on gas, just relax, at the same time entertain the kid(s)... kind of outing.&lt;br /&gt;It turned out be really an enthralling experience. Stirred up bundles of memories of the botany classes I attended 'once upon a time'. The classifications, 'binomial nomenclature', taxanomy, field trip, herbarium, the lab work.... ah, all those beautiful ways of associating with the nature which I had almost forgotten. Right from the ambiance- the green house and specialised gardens, gently tied placard on each plant with the scientific name on it, large green ferns with tiny spores on their back, radiantly colored archids, spiny cacti and the duplicitous insectivorous plants.... each thing dug and brushed up the memories buried under the weight of time. &lt;br /&gt;My friendship with the plants developed when I was very young and progressed gradually. As a little girl, I lived with parents in a remote village. Our farm house was surrounded by thick forest from three sides. Only in the front, there was little open space, a small lake and paddy fields beyond it. Again where the fields ended, trees lined up like giant soldiers in dark brown uniform and huge green hats, guarding the mysterious darkness behind them. Though I never attempted to cross the lake and fields to reach or explore those dark woods, the green cover neighbouring our farm was like my playground. Whenever my father would go out there to gather bamboo or wood for farmwork, I would join him. He knew of my interest in the plant life. He was equally interested and knowledgable too. He would tell me the name of every plant/tree, their special qualities, some fun facts related to them and things like that. He explained me that bamboos bloom only once in 60 years and soon afterwards, perish completely. He showed me that 'misri' beehives can mostly be found in the hollow of 'Flame of the forest' (Butea monosperma) trees. He taught me that beleric (Terminalia bellirica) nuts can dull your senses, the jackfruit wood (Artocarpus heterophyllus) is so durable that a boat made of it can be in water for over a hundred years without any damage, when matti (Terminalia tomentosa) blooms the whole forest smells like honey.... and many more interesting things which I would have never known otherwise. &lt;br /&gt;There was a time when I would find solace in the company of plants. During my elementary school years, I had to live in my grandmother's house. I missed my parents very much. If I were hurt physically or emotionally, feeling lonely or neglected, I would simply go out to the plants and comfort myself. A stroke on the brown barks would divert my attention from aching body towards rough, scaly surface of it. While the leathery softness of the green leaves would act as an ice pack, their sometimes earthy; sometimes pungent and occesionaly sweet smell would calm me down. Whether cultivated or wild, soothingly beautiful flowers would always fill me with hope. The way fruits, seeds, sprouts grow from a tiny spot to a well defined shape would always feed my imagination. Whether a small plant or a huge tree, it would always lend me support to lean on and ears to share my secrets. &lt;br /&gt;After I joined a residential school, all my association with the forest and plant life took a backseat. Though the barren landscape around my school was a constant reminder of what I was missing, I had no choice but to live with it. Later college offered me better choices. When I chose Botany for graduation studies, my highschool Maths teacher was very disappointed. 'What are you doing with your life? How will Botany ever help you achieve anything?' - he reacted angrily. 'I don't know the exact answer for this Sir, but I can not learn a subject very well if everything I do is based on a 'suppose' or 'if' or any imaginary theorem. I should be able to see, touch and feel the things I study. I am sure at least that is possible in Botany'- I replied calmly to him. &lt;br /&gt;Indeed, I had made a good choice. I enjoyed every hour of my graduate studies. I could relate the theoretical knowledge with the my childhood observations. I could repeat my practical experiments at home. I did even amuse my parents occasionally with the scientific names and classifications or specialities of the crops they were growing. I was able to better understand and reason many of the natural processes happening around  me. At the end, I came up with good grades too!&lt;br /&gt;But when it came to career choice, my passion for writing scored over the plants. I joined journalism. Buried my head in the world of letters. As I shifted my base to a concrete jungle from a real jungle and started inhaling the exhaust gases rather than fresh air, my interaction with the plants became scarce. I was so taken by the loud but alluring charm of the city life that unknowingly I dissociated myself from my silent friends. Then I got married, had a child and got really busy in life. Family, society, travel... things came along to keep me occupied. Still, occasionally when I would go to my parent's place or go out with my family for a picnic (like this time), I would just sit quite for a while and cherish the memories.&lt;br /&gt;Memories of those gaint friends who consoled me, who shared their leaves-fruits and flowers with me to play, who swung me to sleep and at times tolerated to be at the receiving end of my frustration or angst.. And amused me, surprised me, educated me about a hidden world behind those green and brown colors. I am happy that I studied Botany... I am happy that I visited botanical garden.&lt;br /&gt;&lt;br /&gt;-Rekha Hegde.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-5340745551776913522?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/5340745551776913522/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2011/08/remembering-giant-friends.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/5340745551776913522'/><link rel='self' type='application/atom+xml' href='http://www.blogger.com/feeds/4309049398760149221/posts/default/5340745551776913522'/><link rel='alternate' type='text/html' href='http://kaanadani.blogspot.com/2011/08/remembering-giant-friends.html' title='Remembering the Giant Friends'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-2653372369027278555</id><published>2011-08-26T08:22:00.001-04:00</published><updated>2011-08-26T08:28:26.501-04:00</updated><category scheme='http://www.blogger.com/atom/ns#' term='Soul search'/><title type='text'>Lost privileges</title><content type='html'>The other day, my girlfriends from our small Indian community here were talking about feeling 'homesick'. They were remembering the things which are easy to get and are of better quality in India.  &lt;br /&gt;'Oh, I miss the street food, the savory snacks, chats and sweets. I used to eat those every evening. My native is famous for those', said one.&lt;br /&gt;'Me too, but what I miss more are movies. I used to watch first day, first show of my favorite star's movies', sighed another.&lt;br /&gt;'I miss the herbal cosmetics. What I get here are very expensive, and they don't suit to my skin.' complained the third one. &lt;br /&gt;....... and so on went the conversation. Food, cosmetics, movies... everyone had something special about their city which they were very fond of and for which they could not find a replacement here. It made them feel 'homesick'. &lt;br /&gt;All these conversations pinched my heart too. Afterall, I was also nostalgic about so many things, though my taste was different than that of my friends. Being born and brought up in country, I could not go after street food or movies and things like that during my growing up days. Instead I had many other wonderful things which my village life offered me and which I would look forward to all the time. As I walked back home that day after our conversation ended, I was also walking through my memories. Then I decided to make a list of all those lost privileges of mine.&lt;br /&gt;Some are...&lt;br /&gt;* the warm freshness of the sun dried cloths.&lt;br /&gt;* mild sweetness of the semi ripe guava right out of the tree.&lt;br /&gt;* sight of a peacock dancing on the slopes of green hills in the morning sun.&lt;br /&gt;* running to the mango grove after a storm to collect the fallen (but good n tasty) mangoes.&lt;br /&gt;* picking young rice grains from the green pacicle of paddy plant and sucking the sweet juice from it.&lt;br /&gt;* splitting the ripe jackfruit with bare hands, taking out the fleshy bulbs without getting sticky and savouring the sweet juice as the bulb melts in mouth.&lt;br /&gt;* leisurely stroll in the rice fields in the evening sun, often daydreaming.&lt;br /&gt;* squishing a honeycomb and licking every bit of honey that comes out of it.&lt;br /&gt;* wearing the divinely smelling jasmine flowers on hair.&lt;br /&gt;* guzzling the fresh coconut water (whether tender or ripe) on hot sunny days.&lt;br /&gt;* swinging carelessly on a banyan prop root.&lt;br /&gt;...... &lt;br /&gt;Even if I go back and live in my village now, I can not relive those moments. I may be able to enjoy some of them, but not all, for sure. Time and age have built a wall of so called 'maturity' between me and my once dearest pleasures. Now they can be best remembered as bygone privileges that make me 'homesick'. That's all!&lt;br /&gt;&lt;br /&gt;-Rekha Hegde.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-2653372369027278555?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/2653372369027278555/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2011/08/lost-privileges.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/2653372369027278555'/><link rel='self' type='application/atom+xml' href='http://www.blogger.com/feeds/4309049398760149221/posts/default/2653372369027278555'/><link rel='alternate' type='text/html' href='http://kaanadani.blogspot.com/2011/08/lost-privileges.html' title='Lost privileges'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>2</thr:total><georss:featurename>Oldsmar, FL, USA</georss:featurename><georss:point>28.0341847 -82.66509919999999</georss:point><georss:box>27.9932057 -82.69703569999999 28.0751637 -82.63316269999999</georss:box></entry><entry><id>tag:blogger.com,1999:blog-4309049398760149221.post-6656262565073826565</id><published>2009-08-21T11:45:00.001-04:00</published><updated>2009-08-21T12:00:31.734-04:00</updated><category scheme='http://www.blogger.com/atom/ns#' term='ಅಶ್ವತ್ಥ ಕಟ್ಟೆ'/><title type='text'>'ಚಂದೋ'ಪನಿಷತ್ತು</title><content type='html'>'ಹಾ, ನೈಸ್', 'ವೋವ್, ಸೋ ಸಾಫ್ಟ್'..... ಕೈಗೆ ಸಿಕ್ಕಿದ ವಸ್ತುಗಳನ್ನೆಲ್ಲಾ ಮಗ ಒಂದೊಂದಾಗಿ ಕೆನ್ನೆಗೆ ಒತ್ತಿ ನೋಡುತ್ತಿದ್ದಾನೆ. ಅವನ ಕಡ್ಲಿ ಬೇರ್, ಟೆಡ್ಡಿ ಬೇರ್, ರಾಕಿ ಎಂಬ ಉದ್ದ ಕಿವಿಯ ನಾಯಿ, ಶಾಮು ದ ಕಿಲ್ಲರ್ ವೇಲ್, ಥಾಮಸ್ ದ ಟ್ಯಾಂಕ್ ಎಂಜಿನ್ ಚಿತ್ರ ಇರುವ ಚಾದರ...... ಪ್ರತಿಯೊಂದಕ್ಕೂ ಧಾರಾಳ ಮೆಚ್ಚುಗೆ ಹರಿದು ಬರುತ್ತಿದೆ. 'ಅಮ್ಮಾ, ನಂಗೀ ಕಾರು ತುಂಬಾ ಇಷ್ಟ', 'ಈ ಬುಕ್ ಚೆನ್ನಾಗಿದ್ದು', 'ಟ್ರೇನ್ ಎಷ್ಟು ಫಾಸ್ಟ್ ಹೋಗ್ತು ನೋಡು' ಬಣ್ಣನೆ ಮುಗಿಯುವುದೇ ಇಲ್ಲ. &lt;br /&gt;ಮಜ ಎಂದರೆ ಯಾವ ಆಟಿಗೆಯನ್ನು ತೋರಿಸಿದರೂ 'ಅದು ಚೆಂದಿದ್ದು, ಚೆನ್ನಾಗಿದ್ದು' ಎಂದೇ ಉತ್ತರ ಬರುವುದು. ಡಾಲರ್ ಸ್ಟೋರಿನ ಒಂದು ಡಾಲರ್ ವಸ್ತುವಿಗೂ ಇಪ್ಪತ್ತೈದು ನುಂಗಿದ ಬ್ರಾಂಡೆಡ್ ಆಟಿಗೆಗೂ ಒಡೆಯನ ಪ್ರೀತಿಯಲ್ಲಿ ಭೇದ ಇಲ್ಲ. ಊಟದ ಬಟ್ಟಲ ಪಕ್ಕ ಪೇರಿಸಿಟ್ಟುಕೊಳ್ಳುವಾಗ, ಹಾಸಿಗೆಯಂಚಿಗೆ ಸಾಲಾಗಿಟ್ಟು 'ಟ್ರಾಫಿಕ್ ಜಾಂ' ಮಾಡುವಾಗ, ಗೆಳೆಯರ ಜೊತೆ ಹಂಚಿಕೊಳ್ಳುವಾಗ ಎಲ್ಲೂ ಅದಕ್ಕೆ ಹೆಚ್ಚಿನ ಮರ್ಯಾದೆ, ಇದಕ್ಕೆ ಕಮ್ಮಿ ಎಂಬುದಿಲ್ಲ. ಎಲ್ಲವೂ ಚಂದ, ಎಲ್ಲವೂ 'ನೈಸ್'!&lt;br /&gt;ಮಗನ ಆಟ ಮನದ ಪುಟಗಳಲ್ಲಿ ದಾಖಲಾಗುತ್ತಿದ್ದಂತೆ ಹಳೆಯದೊಂದು ಪುಟ ತಾನಾಗಿ ತೆರೆದುಕೊಳ್ಳುತ್ತಿದೆ. ಕಾಲೇಜು ದಿನಗಳಲ್ಲಿ ದಾಖಲಾಗಿದ್ದು ಅದು.&lt;br /&gt;"ಅಪ್ಪಾ, ನನ್ನ ರೂಮ್ ಮೇಟು, ಅದ್ರ ಫ್ರೆಂಡ್ಸೆಲ್ಲಾ ನನ್ನ ನೋಡಿ ನಗಾಡ್ತ."&lt;br /&gt;"ಎಂಥಕ್ಕೆ ತಂಗಿ?" &lt;br /&gt;"ನಂಗೆ ಟೇಸ್ಟೇ ಇಲ್ಯಡ. 'ನೀ ಎಂಥ ನೋಡಿದ್ರೂ ಚಂದ ಕಾಣ್ತು ಹೇಳ್ತೆ. ನಿಂಗೆ ಗುಲಾಬಿನೂ ಚಂದ ಕಾಣ್ತು, ಮಲ್ಲಿಗೆನೂ ಚೊಲೊ ಕಾಣ್ತು. ರಾಜಕುಮಾರನೂ ಚೊಲೊ ಹೇಳ್ತೆ, ಅನಂತನಾಗನೂ ಇಷ್ಟ ಹೇಳ್ತೆ. ಕತ್ಲೆ ಕತ್ಲೆ ಆರ್ಟ್ ಸಿನೆಮಾನೂ ಚೊಲೊ ಇದ್ದು ಹೇಳ್ತೆ, 'ದಿಲ್ ತೋ ಪಾಗಲ್ ಹೈ'ನೂ ಚೊಲೊ ಇದ್ದು ಹೇಳ್ತೆ.....' ಹೇಳೆಲ್ಲಾ ಚಾಳಿಸ್ತ. ಎಂಥಾರೂ 'ಚೆನ್ನಾಗಿದ್ದು' ಅಂದ್ರೆ, 'ನಿಂಗೆ ಚೆನ್ನಾಗಿ ಕಾಣದೋದ್ದು ಯಾವುದು ಇದ್ದು' ಹೇಳಿ ನಗಾಡ್ತ......" ಅಪ್ಪನೆದುರು ದುಃಖ ತೋಡಿಕೊಂಡಿದ್ದೆ ಒಂದು ದಿನ.&lt;br /&gt;"ಅದಕ್ಕೆಲ್ಲಾ ಬೇಜಾರು ಮಾಡಿಕ್ಯಳಡ ತಂಗಿ. ನಿಂಗೆ ಎಲ್ಲಾ ವಸ್ತುನಲ್ಲೂ ಏನಾದ್ರೂ ಚಂದ ಕಾಣ್ತು ಅಂದ್ರೆ ಅದು ನಿನ್ನ ಒಳ್ಳೆಯತನ ತೋರಿಸ್ತು. ನಿನ್ನ ಮುಗ್ಧತೆ ತೋರಿಸ್ತು. ಅವೆರಡೂ ಜೀವನಕ್ಕೆ ಅತಿ ಅವಶ್ಯ ಗುಣ. ನೀ ಹೀಂಗೆ ಇರು' ಅಪ್ಪ ಬೆನ್ನು ತಟ್ಟಿ ಧೈರ್ಯ ತುಂಬಿದ್ದ.&lt;br /&gt;ಇವತ್ತಿಗೂ ನನಗೆ ವಿಮರ್ಶೆ ಮಾಡಲು ಬರುವುದಿಲ್ಲ. ಆದರೆ ನೋಡುವ ನೂರರಲ್ಲಿ ತೊಂಭತ್ತು ಖಂಡಿತ ಚೆನ್ನಾಗಿ ಕಾಣುತ್ತವೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-6656262565073826565?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/6656262565073826565/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/08/blog-post.html#comment-form' title='7 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/6656262565073826565'/><link rel='self' type='application/atom+xml' href='http://www.blogger.com/feeds/4309049398760149221/posts/default/6656262565073826565'/><link rel='alternate' type='text/html' href='http://kaanadani.blogspot.com/2009/08/blog-post.html' title='&apos;ಚಂದೋ&apos;ಪನಿಷತ್ತು'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>7</thr:total></entry><entry><id>tag:blogger.com,1999:blog-4309049398760149221.post-2147541601259509931</id><published>2009-07-30T16:14:00.002-04:00</published><updated>2009-07-30T16:23:49.442-04:00</updated><title type='text'>ಕ್ಷಮೆ ಇರಲಿ</title><content type='html'>ಪ್ರಿಯ ಸ್ನೇಹಿತರೇ,&lt;br /&gt;ಬಹಳ ದಿನಗಳಿಂದ ಬಳಸದೇ 'ಪೆನ್ನು' ಧೂಳು ಹಿಡಿದಿತ್ತು. ಒಳಗಣ ಶಾಯಿಯೂ ಒಣಗಿ ಗಟ್ಟಿಯಾಗಿತ್ತು. ರಾಶಿ ಸೋಮಾರಿತನ, ಒಂಚೂರು ಸಿನಿಕತನ, ಮೇಲಿಂದ ಮುತ್ತಿಕೊಂಡ ಗೊಂದಲದ ಬಿಂಜಲುಬಲೆ.... ನಿಜ ಹೇಳಬೇಕೆಂದರೆ ನನ್ನ ಬಳಿ 'ಪೆನ್ನು' ಇರುವುದೇ ಮರೆತು ಹೋಗಿತ್ತು. ಇವತ್ತೇಕೋ ನೆನಪಾಯಿತು. ಎತ್ತಿ ತೊಳೆದು, ಶಾಯಿ ತುಂಬುತ್ತಿದ್ದೇನೆ. ಈ ಬಾರಿ ಯಾವ '....ತನ'ದ ಗಾಳಿಯೂ ಅದನ್ನು ಒಣಗಗೊಡದಿರಲಿ ಎಂಬುದೊಂದು ಹಾರೈಕೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-2147541601259509931?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/2147541601259509931/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/07/blog-post_30.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/2147541601259509931'/><link rel='self' type='application/atom+xml' href='http://www.blogger.com/feeds/4309049398760149221/posts/default/2147541601259509931'/><link rel='alternate' type='text/html' href='http://kaanadani.blogspot.com/2009/07/blog-post_30.html' title='ಕ್ಷಮೆ ಇರಲಿ'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>1</thr:total></entry><entry><id>tag:blogger.com,1999:blog-4309049398760149221.post-4417375101355421067</id><published>2009-07-30T15:58:00.001-04:00</published><updated>2009-07-30T16:13:43.897-04:00</updated><category scheme='http://www.blogger.com/atom/ns#' term='ಕಾಲದ ಅಲ್ಬಂನಿಂದ ಹೆಕ್ಕಿ ತೆಗೆದ ಚಿತ್ರಗಳು'/><title type='text'>ಶೆಟ್ಟಣ್ಯಾರ ಯಲ್ಲವ್ವ ಎಂಬೋ 'ಕಾಡವ್ವ'</title><content type='html'>ಹನುಮಾಪುರದ ಹೆಂಗಸರು ಎಂದಾಕ್ಷಣ ಎಲ್ಲರಿಗಿಂತ ಮೊದಲು ನನ್ನ ಕಣ್ಣಿಗೆ ಕಟ್ಟುವುದು ಯಲ್ಲವ್ವನ ಚಿತ್ರ. ದೇವಗುಂಡಿ ಕೆರೆಯ ಕೆಳಭಾಗದಲ್ಲಿ ಏರಿಗೆ ತಾಗಿ ನಮ್ಮ ಜಮೀನು ಇದ್ದರೆ, ಮೇಲುಭಾಗದಲ್ಲಿ ಕೆರೆಗೆ ಹೊಂದಿಕೊಂಡೇ ಶೆಟ್ಟಣ್ಯಾರ ಹೊಲ ಇತ್ತು. ಆತನ ಪತ್ನಿಯೇ ಯಲ್ಲವ್ವ. ನಾನು ಬಲ್ಲಂದಿನಿಂದಲೇ ಆಕೆ ಅರೆಮುದುಕಿ ಮತ್ತು ವಿಧವೆ. ಮಾಸಿದ ದಡಿ ಸೀರೆ, ಕಸೆ ರವಿಕೆ, ಅಗಲ ಬಾಯಲ್ಲಿ ಯಾವಾಗಲೂ ಕವಳ ತುಂಬಿಕೊಂಡು ಇರುತ್ತಿದ್ದ ಆಕೆ ಪಟ್ಟಗೆ ತಲೆ ಬಾಚಿದ್ದನ್ನು ನಾನೆಂದೂ ನೋಡಿರಲಿಲ್ಲ. ಕುತ್ತಿಗೆಯೊಳಗೆ ಸ್ಪ್ರಿಂಗ್ ಇದ್ದು, ಯಾವುದೋ ಅದೃಶ್ಯ ಕೈ ಅದನ್ನು ಸದಾಕಾಲ ತಟ್ಟುತ್ತಿರುತ್ತದೆಯೇನೋ ಎಂಬಂತೆ ಆಕೆಯ ತಲೆ ಯಾವಾಗಲೂ ಅತ್ತಿಂದಿತ್ತ ಅಲುಗಾಡುತ್ತಲೇ ಇರುತ್ತಿತ್ತು. &lt;br /&gt;ಯಲ್ಲವ್ವನಿಗೆ ನಾನು, ಅಣ್ಣ-ಅಕ್ಕ ಇಟ್ಟ ಹೆಸರು 'ಕಾಡವ್ವ'. ಇನ್ನೂ ಸರಗೋಲು ದಾಟುವ ಮೊದಲೇ 'ಅಮ್ಮಾರೆ, ಈಟು ಮಜ್ಜಿಗೀ ಕೊಡ್ರಿ' ಎನ್ನುತ್ತಲೇ ಆಕೆ ಮುಂದಡಿ ಇಡುತ್ತಿದ್ದಳು. ಎಡಹೊತ್ತಿನಲ್ಲಿ ನಾವೇನಾದರೂ ದೋಸೆ ತಿನ್ನುವುದು ಕಂಡಿತೋ- 'ಅಮ್ಮಾರೆ, ನನ್ಗೂ ದ್ವಾಸಿ ಕೊಡ್ರಿ', ಎಣ್ಣೆಯ ಪರಿಮಳ ಬಂತೋ- 'ಏನೋ ಕಜ್ಜಾಯ ಮಾಡಾಕ್ಹತ್ತೀರಲ್ಲ, ಇತ್ತಾಗ ಒಂದೀಟು ಇಡ್ರಿ', 'ಒಂಚೂರು ಉಪ್ಪಿನಕಾಯಿ ನೀಡ್ರಿ', 'ಬಾಳಿಹಣ್ಣು ಕೊಡ್ರಿ', 'ಮಾವಿನ್ ಹಣ್ಣು ಕೊಡ್ರಿ.........' ಪಟ್ಟಿ ಹನುಮಂತನ ಬಾಲದಂತೆ ಬೆಳೆದು ಹನುಮಾಪುರ ಮುಟ್ಟುತ್ತಿತ್ತು. 'ಯಲ್ಲವ್ವ, ನಿನ್ನ ಹೀಂಗೇ ಬಿಟ್ರೆ ನಾಳೆ ಸೀರೆ ಕೊಡ್ರಿ, ಸರ-ಬಳೆ ಕೊಡ್ರಿ ಹೇಳ್ಲಿಕ್ಕೆ ಶುರು ಮಾಡ್ತೀಯೆ' ಅಮ್ಮ ಟೀಕಿಸುತ್ತಿದ್ದಳು. 'ಹೂನ್ರೀ ಮತ್ತ, ಆಟೊಂದು ಸೀರಿ ಅದಾವಲ್ಲ, ಒಂದ್ ಕೊಡ್ರಿ ನನಗ, ನಿಮ್ ಹೆಸರ ಹೇಳಿ ಉಟಗೊಂತೀನಿ' ಪಟ್ಟಂತ ಉತ್ತರ ಬರುತ್ತಿತ್ತು. &lt;br /&gt;ಹಿತ್ತಲಲ್ಲಿ ಅಮ್ಮ, ಗೌರತ್ತಿಗೆ ಕಷ್ಟಪಟ್ಟು ಬೆಳೆದ ತರಕಾರಿಗಳ ಮೇಲೆ ಯಲ್ಲವ್ವ ಇಷ್ಟಪಟ್ಟು ಕಣ್ಣು ಹಾಯಿಸುತ್ತಿದ್ದಳು. ಯಥಾ ಪ್ರಕಾರ 'ಅಮ್ಮಾರ, ಒಂದು ಯೆರಡು ಸೌತೀಕಾಯಿ ಕೊಡ್ರಿ, ಹೀರಿಕಾಯಿ ಕೊಡ್ರಿ, ಕುಂಬಳಕಾಯಿ ಕೊಡ್ರಿ....' ಎಂಬ ಪಲ್ಲವಿ ಯಲ್ಲವ್ವನಿಂದ. ಬೇಸಿಗೆಯ ಒಂದು ಮಧ್ಯಾಹ್ನ. ಅಮ್ಮ, ಗೌರತ್ತಿಗೆ ಭಾರದ ಕೊಡಗಳಲ್ಲಿ ನೀರು ಎತ್ತಿಕೊಂಡು ಬಂದು ಹರಿವೆ, ಗೋಳಿ ಸೊಪ್ಪಿನ ಕಣಗಳಿಗೆ, ಮೂಲಂಗಿ, ಬೀಟ್ರೂಟ್ ಓಳಿಗಳಿಗೆ ನೀರು ಹಾಯಿಸುತ್ತಿದ್ದರು. ನೀರುಣಿಸುವುದನ್ನು ಮುಗಿಸಿ ಮನೆಗೆ ಮರಳುವ ಮುನ್ನ ಸಂಜೆಯ ಅಡಿಗೆಗೆಂದು ಒಂದಷ್ಟು ಕೆಂಪು ಹರಿವೆ ಸೊಪ್ಪು ಮುರಿಯತೊಡಗಿದರು. ಅದೇ ಸಮಯಕ್ಕೆ ಸರಿಯಾಗಿ ಯಲ್ಲವ್ವನ ಸವಾರಿ ಆಗಮಿಸಿತು. 'ಅಮ್ಮಾರು ಏನ್ ಮಾಡಾಕ್ಹತ್ತೀರಿ' ಆಕೆ ಕೇಳಿದಳು. ಅಮ್ಮ ತಲೆ ಎತ್ತದೇ ಜಾಣಗಿವುಡು ತೋರಿದಳು. ಯಲ್ಲವ್ವ ಬಿಡಬೇಕಲ್ಲ, 'ಹರಿವಿ ಸೊಪ್ಪು ಕೀಳಾಕ್ಹತ್ತೀರಲ್ಲ' ಎಂದಳು. ಗೌರತ್ತಿಗೆ ಮುಗುಮ್ಮಾಗಿ 'ಹೂಂ' ಎಂದಳು. 'ನಮ್ಗೂ ಒಂದೀಟು ಸೊಪ್ಪು ಕೊಡ್ರೀ, ಏನು ನೀವೊಬ್ಬರೇ ತಿಂತೀರೇನು' ಭಿಡೆ ಇಲ್ಲದ ಯಲ್ಲವ್ವ ಬೇಡಿಕೆಯ ಜೊತೆಗೆ ಆಕ್ಷೇಪವನ್ನು ಎದುರಿಟ್ಟಳು. 'ಪಕ್ಕಾ ಇದೀಯೇ ನೀನು. ನಮ್ಮನೆ ಗದ್ದೇಲಿ, ನಾವು ಬೀಜ ಹಾಕಿ, ನೀರು ಹೊತ್ತು ಬೆಳೀತೇವೆ. ನೀ ಬಂದ್ಕಂಡು ದೊಡ್ಡದಾಗಿ 'ನೀವೊಬ್ರೇ ತಿಂತೀರೇನು' ಹೇಳಿ ಬಿಡ್ತೀಯೇ. ಯಾವತ್ತಾದರೂ ಒಂದು ಕೊಡ ನೀರು ಎತ್ತಿ ಹಾಕಿದೀಯ?' ಅಮ್ಮ ದಬಾಯಿಸಿದಳು. 'ಅಯ್ಯ, ಅದಕ್ಯಾಕ ಹಂಗ್ ಅಂತೀರಿ ಅಮ್ಮಾರೆ, ನಿಮಗ ಗಿಡ ಹಚ್ಚದ್ ಗೊತ್ತೈತಿ, ಹಚ್ಚತೀರಿ, ನಮಗ ಗೊತ್ತಿಲ್ಲ, ಹಚ್ಚಂಗಿಲ್ಲ. ನೀವ್ ಬೆಳಿದೀರಿ, ಅದಕ್ಕ ಕೇಳಾಕ್ಹತ್ತೀನಿ, ಇಲ್ಲಂದ್ರ ಕೇಳತಿದ್ದೆನೇನು?'- ಯಲ್ಲವ್ವನ ತರ್ಕ ಇದು.&lt;br /&gt;ಯಲ್ಲವ್ವ ಶಕ್ತಿ ಇದ್ದ ಕಾಲದಲ್ಲಿ ಹೊಲಕ್ಕೆ ಆಗಾಗ ಬರುತ್ತಿದ್ದಳು. ಬಂದಾಗೆಲ್ಲ ಬಿಂದಿಗೆ ಹಿಡಕೊಂಡು ನೀರಿಗಾಗಿ ನಮ್ಮನೆಗೆ ಬರುತ್ತಿದ್ದಳು. ಒಂದು ಬಿಂದಿಗೆ ನೀರಿಗೆಂದು ಬಂದವಳು ಮಜ್ಜಿಗೆ, ಅದೂ ಇದೂ ಎನ್ನುತ್ತ ಒಂಬತ್ತು ಬೇಡಿಕೆ ಇಡುತ್ತಿದ್ದಳು. ಕರೆವು ಇಲ್ಲದ ಕಾಲದಲ್ಲಿ, ಅದೂ ನಾವು ಮಕ್ಕಳೆಲ್ಲ ರಜೆಗೆ ಬಂದಿರುವಾಗ ಯಾರಾದರೂ ಮಜ್ಜಿಗೆ ಎನ್ನುತ್ತ ಬಂದರೆ ಅಮ್ಮನ ತಲೆ ಕಾಯುತ್ತಿತ್ತು. ಅಪರೂಪಕ್ಕೆ ಬಂದರೆ ಅಡ್ಡಿ ಇಲ್ಲ, ಯೋಗಕ್ಷೇಮ ವಿಚಾರಿಸಿ ಅಷ್ಟೋ ಇಷ್ಟೋ ಮಜ್ಜಿಗೆ ಕೊಡುತ್ತಿದ್ದಳು. ಆದರೆ ಎರಡೆರಡು ದಿನಕ್ಕೊಮ್ಮೆ ಬರುವವರ ಮೇಲೆ ಆ ಅನುಕಂಪ ಇರುತ್ತಿರಲಿಲ್ಲ. ನಾವೋ, ಮಜ್ಜಿಗೆ ಇಲ್ಲದೇ ಊಟ ಅಪೂರ್ಣ ಎಂಬಂಥ ಬ್ರಾಹ್ಮಣರು, ಜೊತೆಗೆ ಯಾವುದೋ ಬೇನೆಯ ಹೆಸರು ತೆಗೆದುಕೊಂಡು, ಒಂದು ಚೊಂಬು ಹಿಡಿದುಕೊಂಡು ಬರುವ ಊರ ಜನ, ಮೇಲಿಂದ ಯಲ್ಲವ್ವನಂಥ ರೆಗ್ಯುಲರ್ 'ಗಿರಾಕಿ'ಗಳು... ಯಲ್ಲವ್ವ ಇನ್ನೂ 'ಅಮ್ಮಾರೆ, ಮ' ಎನ್ನುತ್ತಿದ್ದಂತೆಯೇ ಅಮ್ಮ 'ಮಜ್ಜಿಗೆ ಇಲ್ಲಾ' ಎಂದು ಸರ್ರಂತ ಸಿಡುಕುತ್ತಿದ್ದಳು. &lt;br /&gt;ನಿಜ ಹೇಳಬೇಕೆಂದರೆ ಯಲ್ಲವ್ವನಿಗೆ ಏನು ಬಯ್ದರೂ ವೇಸ್ಟೇ. ಅಮ್ಮನ ಪ್ರಖರ ಆಕ್ಷೇಪ-ಬಯ್ಗುಳಗಳೂ ಯಲ್ಲವ್ವನ ಸುತ್ತ ದಪ್ಪಗೆ ಬೆಳೆದಿದ್ದ 'ನಿರ್ಭಿಡೆ'ಯ ಪ್ರಭಾವಲಯಕ್ಕೆ ಡಿಕ್ಕಿ ಹೊಡೆಯುತ್ತಲೇ ಕಣ್ಣು ಮಂಜಾಗಿ ಮಕಾಡೆ ಬೀಳುತ್ತಿದ್ದವು. ಮೇಲಾಗಿ ಅಮ್ಮನ ನಿಷ್ಠುರತೆಗೊಂದು ಮಿತಿ ಇತ್ತು. ಆ ಮಿತಿಯನ್ನು ದಾಟದಂತೆ ಆಕೆಯ ಅಪ್ಪಯ್ಯ ಹೇಳಿಕೊಟ್ಟ ಆಚಾರ ಕಾವಲು ಕಾಯುತ್ತಿತ್ತು. ಶಾಸ್ತ್ರ ನಿಪುಣನಾಗಿದ್ದ ಅಜ್ಜ, ಅಮ್ಮ ಮದುವೆಯಾಗಿ ಬರುವಾಗ ಹೇಳಿದ್ದನಂತೆ- 'ಮಗಳೇ, ಬಾಯಾರಿ ಬಂದವರಿಗೆ ಯಾವತ್ತೂ ಕೈ ತಿರುಗಿಸಡಾ. ಅದರಲ್ಲೂ ಯಾರಾದರೂ ಮಜ್ಜಿಗೆ ಕೇಳಿ ಬಂದರೆ ಇಲ್ಲೆ ಅನ್ನಡಾ. ಒಂದೇ ಲೋಟದಷ್ಟು ಇದ್ದರೆ ಅದಕ್ಕೆ ಇನ್ನೊಂದು ಲೋಟ ನೀರು ಸೇರಿಸಿ ನೀರು ಮಜ್ಜಿಗೆಯಾದರೂ ಕೊಡು, ಆದರೆ ಇಲ್ಲೆ ಹೇಳಿ ಕಳಿಸಡಾ. ಮೇಲಾಗಿ ಮಜ್ಜಿಗೆಯನ್ನು ಯಾವತ್ತೂ ದಾನವಾಗಿ ಕೊಡವೇ ಹೊರತು ಅದಕ್ಕೆ ದುಡ್ಡು ತಗಳಡಾ.' ಅಪ್ಪಯ್ಯ ಒಪ್ಪುವಂತೆ ನಡೆದುಕೊಂಡು ಬಂದವಳು ಅಮ್ಮ. ಅಮ್ಮಾರು ಕೊಟ್ಟೇ ಕೊಡುತ್ತಾರೆ ಎಂಬ ಭರವಸೆ ಈ ಖಾಯಂ ಗಿರಾಕಿಗಳಿಗೂ ಇರುತ್ತಿತ್ತು. ಹಾಗಾಗಿ ಅವರೂ ಜಪ್ಪಯ್ಯ ಎನ್ನದೇ ಅಲ್ಲೇ ಕುಳಿತಿರುತ್ತಿದ್ದರು. ಅಮ್ಮ ಸಿಡಿಮಿಡಿಗುಡುತ್ತಲೇ ಯಲ್ಲವ್ವನೆದುರು ಒಂದು ಗಿಂಡಿಯಲ್ಲಿ ಮಜ್ಜಿಗೆ ತಂದಿಟ್ಟು, 'ಇಲ್ಲೇ ಕುಡಕಂಡು ಹೋಗಬೇಕು. ಮನೆಗೆ ಒಯ್ತೇನೆ ಅಂದ್ರೆ ಇಲ್ಲಾ ನೋಡು' ಎನ್ನುತ್ತಿದ್ದಳು. ಯಲ್ಲವ್ವ ಕವಳದ ಕೆಂಪು ಮೆತ್ತಿದ್ದ ಬಾಯನ್ನು ಕೆನ್ನೆ ಕಾಣದಷ್ಟು ಅಗಲಕ್ಕೆ ಹರಡಿಕೊಂಡು ಮಜ್ಜಿಗೆ ಒಳಗಿಳಿಸುತ್ತಿದ್ದಳು.&lt;br /&gt;ಈ ಎಲ್ಲ ಮಜ್ಜಿಗೆ-ಮೃಷ್ಟಾನ್ನಗಳ ಋಣವನ್ನು ಯಲ್ಲವ್ವ ಮರೆಯುತ್ತಿರಲಿಲ್ಲ. ಆದರೆ ತೀರಾ ಬಡವಳಾಗಿದ್ದ ಆಕೆಯ ಬಳಿ ತಿರುಗಿ ನೀಡುವಂಥದ್ದೇನೂ ಇರಲಿಲ್ಲ. ಅಂಥ ಯಾವುದೇ ಋಣಸಂದಾಯದ ನಿರೀಕ್ಷೆಯಾಗಲಿ, ಅಗತ್ಯವಾಗಲಿ ಅಪ್ಪ-ಅಮ್ಮನಿಗೆ ಇರಲೂ ಇಲ್ಲ. ಆದರೂ ಯಲ್ಲವ್ವ ವರ್ಷಕ್ಕೊಮ್ಮೆ ಅಂಥದ್ದೊಂದು ಪ್ರಯತ್ನ ಮಾಡುತ್ತಿದ್ದಳು. ಆಗ ನಮ್ಮ ಮನೆಯಲ್ಲಿನ್ನೂ ಒಳ್ಳೆಯ ಹಲಸು-ಬಕ್ಕೆಯ ಮರ ಇರಲಿಲ್ಲ. ಯಲ್ಲವ್ವನ ಮನೆಯಲ್ಲಿ ಒಂದು ಚಂದ್ರ ಹಲಸಿನ ಮರವಿತ್ತು. ವರ್ಷಕ್ಕೆ ಹದಿನೈದು ಇಪ್ಪತ್ತು ಕಾಯಿ ಬರುತ್ತಿತ್ತು ಅದರಲ್ಲಿ. ನಾವು ರಜಕ್ಕೆ ಬಂದ ಆ ಸಮಯದಲ್ಲಿ ಯಲ್ಲವ್ವ ಮುದ್ದಾಂ ಒಂದು ಕಾಯನ್ನು ನಮ್ಮ ಮನೆಗೆ ಕಳಿಸುತ್ತಿದ್ದಳು. ಅಪರೂಪದ ಆ ಕಾಯಿ ಹಣ್ಣಾಗುವುದನ್ನೇ ಕಾಯುತ್ತಿದ್ದ ನಾನು, ಅಣ್ಣ-ಅಕ್ಕ ಅಂತೂ ಆ ಸಮಯ ಬಂದಾಗ ಜೇನು ಜಿನುಗುವ ಆ ಕೆಂಪು ತೊಳೆಗಳನ್ನು ಮಹಾ ಮೆಚ್ಚಿನಿಂದ ತಿನ್ನುತ್ತಿದ್ದೆವು. &lt;br /&gt;ಇಬ್ಬರು ಗಂಡುಮಕ್ಕಳು ಮತ್ತು ಸಾಲಾಗಿ ಏಳು ಹೆಣ್ಣು ಮಕ್ಕಳು ಯಲ್ಲವ್ವನಿಗೆ. ಅವರಲ್ಲೊಬ್ಬಾಕೆ ಲಕ್ಷಣವಾಗಿದ್ದ, ಚುರುಕಿನ ಯುವತಿ ಹನುಮಂತಿ. ಅದು ಹೇಗೋ ಆಕೆಗೂ, ಮಳಗಿ ಫಕ್ಕೀರಪ್ಪನ ಮಗ ತಿರುಪತಿಗೂ ಸ್ನೇಹ ಬೆಳೆಯಿತು, ಪ್ರೇಮ ಬಲಿಯಿತು. ಮನೆಯವರಿಗೆ ತಿಳಿದರೆ ಭಾರಿ ರಾದ್ಧಾಂತವಾದೀತೆಂದು ಅವರು ಹೊಲಕ್ಕೆ ಬಂದಾಗಲೆಲ್ಲ ಪರಸ್ಪರ ಭೇಟಿ ಮಾಡಿ ಹರೆಯದ ಆ ಹುರುಪಿನ ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದರು. &lt;br /&gt;ಒಮ್ಮೆ ನಮ್ಮ ಮನೆಯಲ್ಲಿ ಕೂಲಿ ಕೆಲಸಕ್ಕೆಂದು ಹನುಮಂತಿ, ಆಕೆಯ ತಂಗಿ ಗಿರಿಜೆ ಬಂದಿದ್ದರು. ಸಂಜೆಯ ಹೊತ್ತು, ಕಣದಲ್ಲಿ ತೂರಿ ಉಳಿದ ಜೊಳ್ಳಿನೊಂದಿಗೆ ಬೆರೆತಿದ್ದ ಭತ್ತದ ಕಾಳುಗಳನ್ನು ಬೇರ್ಪಡಿಸಿ ಚೀಲ ತುಂಬುತ್ತಿದ್ದರು ಅವರು. ಅದೇ ಸಮಯಕ್ಕೆ, ತನ್ನ ಹೊಲದಲ್ಲಿ ಕಮತ ಮುಗಿಸಿ ಕೆರೆಯ ಏರಿಯ ಗುಂಟ ಮನೆಗೆ ಮರಳುತ್ತಿದ್ದ ತಿರುಪತಿ ಇವರನ್ನು ಕಂಡಿದ್ದೇ ಇತ್ತ ಬಂದ. ಇಬ್ಬರೂ ಮಾತುಕತೆಯಲ್ಲಿ ತೊಡಗಿಕೊಂಡರು. ಮನೆಯ ಬಳಿ ಆಡಿಕೊಂಡಿದ್ದ ನಾನು, ಅಣ್ಣ-ಅಕ್ಕ ಇದನ್ನು ಕಂಡಿದ್ದೇ ಅಲ್ಲೇ ಮಾವಿನ ಮರವೊಂದರ ಅಡಿ ಕುಳಿತು ಗಮನಿಸತೊಡಗಿದೆವು. ಆಗ ಅಣ್ಣನಿಗಿನ್ನೂ ಹನ್ನೊಂದು ವರ್ಷ, ಅಕ್ಕನಿಗೆ ಒಂಭತ್ತಾದರೆ ನನಗೆ ಏಳು. ಯಾರಾದರೂ ಪ್ರೇಮಿಸುತ್ತಾರೆ ಎಂಬುದು ಗೊತ್ತಾದರೆ ನಮಗೆ ಭಾರಿ ಕಿಡಿಗೇಡಿ ಕುತೂಹಲ ಆಗ. ಹನುಮಂತಿ-ತಿರುಪತಿಯ ವಿಷಯ ನಮಗೆ ಹೇಗೋ ತಿಳಿದಿತ್ತು. ಆಗ ಭಾರಿ ಚಾಲ್ತಿಯಲ್ಲಿದ್ದ ರಾಜಕುಮಾರನ 'ಜ್ವಾಲಾಮುಖಿ' ಚಿತ್ರದ 'ಹೇಳುವುದು ಒಂದು, ಮಾಡುವುದು ಇನ್ನೊಂದು' ಹಾಡಿನ ಒಂದು ಸಾಲು ಆಧರಿಸಿ, 'ಹನುಮಂತಿ ಪತಿ ತಿರುಪತಿ ಶ್ರೀ ವೆಂಕಟಾಚಲಪತಿ' ಎಂದು ಹಾಡು ಬೇರೆ ಕಟ್ಟಿದ್ದೆವು. &lt;br /&gt;ಆ ದಿನವೂ ಅವರಿಬ್ಬರೂ ಮಾತನಾಡುತ್ತಿರಬೇಕಾದರೆ, ನಾವು ಮೂವರೂ ಸಣ್ಣ ದನಿಯಲ್ಲಿ ಮತ್ತದೇ ಹಾಡು ಶುರು ಹಚ್ಚಿಕೊಂಡೆವು. ನಮ್ಮ ದನಿ ಅವರನ್ನು ತಲುಪದೆಂಬ ವಿಶ್ವಾಸ ನಮಗಿತ್ತು. ಆದರೆ ಅಲ್ಲೇ ಉರುವಲು ಕಟ್ಟಿಗೆ ಗುಡ್ಡೆಗೆ ಬರುವ ಅಮ್ಮನಿಗೆ ಅದು ಕೇಳಬಹುದು ಎಂದು ನಾವು ಕನಸು ಮನಸ್ಸಿನಲ್ಲೂ ಅಂದುಕೊಂಡಿರಲಿಲ್ಲ. ಛೋಟುದ್ದದ ನಾವು ಇನ್ನೊಬ್ಬರ ಪ್ರೇಮ ಪ್ರಕರಣವನ್ನು ಗಮನಿಸುವಷ್ಟು ಮುಂದುವರೆದಿದ್ದೇವೆ ಎಂಬುದು ಗೊತ್ತಾಗುತ್ತಲೇ ಕಿಡಿಕಿಡಿಯಾದ ಅಮ್ಮ, ಕಟ್ಟಿಗೆ ಗುಡ್ಡೆಯಿಂದ ಸಪೂರನೆಯ ಕೋಲು ಸೆಳಕೊಂಡವಳೇ ಮೈಮರೆತು ನೋಡುತ್ತಿದ್ದ ನಮ್ಮ ಬೆನ್ನು ಕೆಂಪೇರಿಸಿದಳು. ಅಷ್ಟು ಸಾಲದೆಂಬಂತೆ ಸೀದಾ ಆ ಯುವ ಪ್ರೇಮಿಗಳ ಬಳಿ ಹೋಗಿ, 'ಕೆಲಸಕ್ಕೆ ಹೇಳಿ ಬಂದ್ಕಂಡು ಇಂಥದ್ದೇ ಮಾಡ್ತೀರ ನೀವು, ಇಂಥದ್ದೇನಿದ್ರೂ ನಮ್ಮನೆ ಕಂಪೌಂಡ್ ಹೊರಗೆ ಇಟ್ಗಳಿ. ಇನ್ನೊಂದ್ಸಲ ಇಲ್ಲಿ ಬಂದು ಹೀಂಗೆ ಮಾಡಿದ್ರೆ ಮತ್ತೆ ಇತ್ಲಾಗೆ ಕಾಲು ಹಾಕ್ಲಿಕ್ಕೆ ಬಿಡದಿಲ್ಲ, ಹುಷಾರ್' ಎಂದು ಜೋರು ಮಾಡಿದಳು. &lt;br /&gt;ಮುಂದೆ ಕೆಲವೇ ತಿಂಗಳಲ್ಲಿ ಭಾರಿ ಗಲಾಟೆಗಳ ನಡುವೆ ಅವರಿಬ್ಬರ ಮದುವೆ ನಡೆಯಿತು. ಎರಡೂ ಕಡೆಯವರ ಗಟ್ಟಿ ವಿರೋಧವಿದ್ದುದರಿಂದ ಮೊದಲ ಒಂದೆರಡು ವರ್ಷ ಬಹಳ ಕಷ್ಟ ಅನುಭವಿಸಿದರು ಇಬ್ಬರೂ. ಆದರೆ ಈಗ ಸುಮಾರು ಇಪ್ಪತ್ತು-ಇಪ್ಪತ್ತೆರಡು ವರ್ಷಗಳ ನಂತರ ನೋಡಿದರೆ ನಮ್ಮೂರಿನ ಭಾರಿ ಯಶಸ್ವಿ ಜೋಡಿ ಈ ತಿರುಪತಿ-ಹನುಮಂತಿ. ಪರಸ್ಪರ ಅಪಾರ ಪ್ರೀತಿ, ವಿಶ್ವಾಸ, ಗೌರವವಿಟ್ಟುಕೊಂಡು ಬಾಳುವ ಜೊತೆಗೆ ರಟ್ಟೆ ಮುರಿದು ರೊಟ್ಟಿ ತಿನ್ನುತ್ತ ಬದುಕು ಹಸನು ಮಾಡಿಕೊಂಡಿರುವ ಈ ದಂಪತಿ, ಮದುವೆ ಮಾಡಿಕೊಂಡು ಹೊಸ ಬದುಕು ಕಟ್ಟಿಕೊಳ್ಳಬೇಕೆನ್ನುವವರಿಗೆಲ್ಲ ಆದರ್ಶವೇ ಸೈ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-4417375101355421067?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/4417375101355421067/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/07/blog-post.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/4417375101355421067'/><link rel='self' type='application/atom+xml' href='http://www.blogger.com/feeds/4309049398760149221/posts/default/4417375101355421067'/><link rel='alternate' type='text/html' href='http://kaanadani.blogspot.com/2009/07/blog-post.html' title='ಶೆಟ್ಟಣ್ಯಾರ ಯಲ್ಲವ್ವ ಎಂಬೋ &apos;ಕಾಡವ್ವ&apos;'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>1</thr:total></entry><entry><id>tag:blogger.com,1999:blog-4309049398760149221.post-7665635824804835511</id><published>2009-03-09T00:45:00.007-04:00</published><updated>2009-03-09T02:21:21.178-04:00</updated><category scheme='http://www.blogger.com/atom/ns#' term='ಮೌನ ದನಿ'/><title type='text'>ಜೀವ ನದಿ</title><content type='html'>ಅಂತರ್ರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ನನ್ನ ಜೀವನದ ಬಹುಮುಖ್ಯ ಅಂಗವಾದ ಒಬ್ಬ ಮಹಿಳೆಯ ಕುರಿತು ಈ ಬರೆಹ:&lt;br /&gt;ಆಕೆ ನನ್ನ ಅಮ್ಮಮ್ಮ. ಹೆಸರಿಗೆ ಅಮ್ಮಮ್ಮನಾದರೂ ವಾಸ್ತವದಲ್ಲಿ ಅಪ್ಪನ ಅಮ್ಮ. ಅಚ್ಚ ಬಿಳಿ ಬಣ್ಣ, ಗುಂಡಗಿನ ಗಿಡ್ಡ ದೇಹ, ಬೋಳಿಸಿದ ತಲೆ, ಗುಳಿ ಬಿದ್ದ ಕಣ್ಣುಗಳು, ನೆರಿಗೆಗಟ್ಟಿದ ಮುಖ-ಮೈ, ಸೊಂಟಕ್ಕೆ ಬಿಗಿಯಾಗಿ ಸುತ್ತಿದ ಕೆಂಪು ಅಥವಾ ಅದರ ಆಚೀಚಿನ ಬಣ್ಣಗಳ ಹತ್ತಿ ಸೀರೆ, ರವಿಕೆ... ಅಮ್ಮಮ್ಮನ ಬಾಹ್ಯ ರೂಪ ಇದು. ನಾನು ಹುಟ್ಟಿದಾಗಿನಿಂದ ನೋಡುತ್ತಿರುವ ರೂಪವೂ ಹೌದು. ಇತ್ತೀಚಿನ ವರ್ಷಗಳಲ್ಲಿ ಸುಕ್ಕು ಹೆಚ್ಚಿದೆ, ಕಣ್ಣು-ಕಿವಿ ಕೊಂಚ ಮಂಜು-ಮಂದ ಆಗಿವೆ, ಮುದಿವಯಸ್ಸು ತನ್ನ ಅಸ್ತಿತ್ವವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ ಎಂಬುದನ್ನು ಬಿಟ್ಟರೆ, ಒಟ್ಟಾರೆಯಾಗಿ ಅಮ್ಮಮ್ಮನ ಅಪೀಯರೆನ್ಸ್ ಬಹಳೇನೂ ಬದಲಾಗಿಲ್ಲ.&lt;br /&gt;ದೇಹ ಹಣ್ಣಾಗಿದ್ದರೂ ಅಮ್ಮಮ್ಮನ ಮನಸ್ಸು ಇನ್ನೂ ಹಸಿರು. ಅಲ್ಲಿ ಪ್ರೀತಿ-ವಾತ್ಸಲ್ಯ, ಕಾಳಜಿ, ಅಂತಃಕರಣ (ಅವಳ ಭಾಷೆಯಲ್ಲಿ ತನುಕರಣೆ), ಮನೆಮಕ್ಕಳು, ಮೊಮ್ಮಕ್ಕಳ ಮೇಲಿನ ಮೋಹಗಳ ಚಿಲುಮೆ ಸದಾ ಚಿಮ್ಮುತ್ತದೆ. ಮನೆಗೆ ಬಂದ ಅತಿಥಿಗಳ ಊಟೋಪಚಾರ ಸರಿಯಾಗಿ ಆಗುತ್ತಿದೆಯೋ ಇಲ್ಲವೋ ಎಂಬ ಸಂದೇಹವೂ ಬರುತ್ತದೆ. ತೊಂಬತ್ತೆಂಟರ ಅಮ್ಮಮ್ಮ ಈಗಲೂ ಊಟದ ಪಂಕ್ತಿಯಲ್ಲಿ ಅಡ್ಡಾಡಿ ಖುದ್ದಾಗಿ ಅತಿಥಿಗಳನ್ನು ವಿಚಾರಿಸಿಕೊಂಡು ಬರುತ್ತಾಳೆ.&lt;br /&gt;ಅಪ್ಪ-ಅಮ್ಮ  ಜಮೀನು ನೋಡಿಕೊಂಡಿದ್ದ ಊರಿನಲ್ಲಿ ಸರಿಯಾದ ಶಾಲೆ ಇಲ್ಲದ ಕಾರಣ ಅಣ್ಣ, ಅಕ್ಕ, ನಾನು ಚಿಕ್ಕವಯಸ್ಸಿನಲ್ಲಿಯೇ ಅವರನ್ನು ಬಿಟ್ಟು ದೊಡ್ಡಪ್ಪ-ದೊಡ್ಡಮ್ಮಂದಿರೊಂದಿಗೆ ಅಮ್ಮಮ್ಮ ವಾಸಿಸುತ್ತಿದ್ದ ಬಾಳೇಸರ ಸೇರಿಕೊಂಡಿದ್ದೆವು. ತಂದೆ-ತಾಯಿಂದ ದೂರವಿದ್ದ ನಮಗೆ ಅಮ್ಮಮ್ಮನೇ ಎಲ್ಲ ಆಗಿದ್ದವಳು. ಸ್ನಾನ ಮಾಡಿಸಿ, ಬಟ್ಟೆ ತೊಳೆದು ಒಣಗಿಸುವುದರೊಂದಿಗೆ ಶಾಲೆಯಿಂದ ಬರುತ್ತಲೂ ತಿಂಡಿ-ಆಸರಿಗೆ ಒದಗಿಸುವುದು, ನಾವು ಸರಿಯಾಗಿ ಓದಿ-ಬರೆಯುತ್ತೇವೋ ಇಲ್ಲವೋ ಎಂಬ ಬಗ್ಗೆ ನಿಗಾ ಇಡುವುದು, ಸಣ್ಣಪುಟ್ಟ ಜಗಳ-ಹೊಡೆದಾಟ ನಡೆಸಿದರೆ ಮಧ್ಯಸ್ಥಿಕೆ ವಹಿಸಿ ಬಿಡಿಸುವುದು, ಕೊನೆಗೆ ರಾತ್ರಿ ಮಲಗುವಾಗ ಬಂದು ಹಾಸಿಗೆ ಬಿಡಿಸಿ, ಕುಡುವಿಕೊಟ್ಟು ಹೋಗುವವರೆಗೆ ಅಮ್ಮಮ್ಮ ನಮಗೆಲ್ಲ ಸೇವೆ ಮಾಡುತ್ತಿದ್ದಳು. ನಾವು ದೊಡ್ಡವರಾಗುತ್ತಿದ್ದಂತೆ ಇವೆಲ್ಲ ಕೆಲಸ  ಖುದ್ದು ಮಾಡಿಕೊಳ್ಳಲು ಕಲಿಸಿದ್ದೂ ಅವಳೇ. &lt;br /&gt;ಚಿಕ್ಕ ವಯಸ್ಸಿನಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡು ಅಜ್ಜಿಮನೆಯ ಆಶ್ರಯಕ್ಕೆ ಬಂದಿದ್ದ ಅಮ್ಮಮ್ಮನಿಗೆ ಓದು ಬರೆಹ ಕಲಿಯಲಾಗಿರಲಿಲ್ಲ. ಇದೊಂದು ಕೊರಗು ಆಕೆಯಲ್ಲಿ ಯಾವತ್ತೂ ಉಳಿದಿತ್ತು. ಹಾಗಾಗಿ ಓದುವ ಮಕ್ಕಳನ್ನು ಅವಳು ಬಹಳವಾಗಿ ಪ್ರೀತಿಸುತ್ತಾಳೆ. ನಮ್ಮ ಶಾಲಾ ದಿನಗಳಲ್ಲಿ ಶನಿವಾರ, ಭಾನುವಾರ ಬಂತೆಂದರೆ ಆಕೆಗೆ ಪಾಠ ಓದಿ ಹೇಳುವ ಕೆಲಸ ನಮ್ಮದು. ತಾನು ಅಡಿಕೆ ಸುಲಿಯುತ್ತಲೋ, ಅಕ್ಕಿ ಬೀಸುತ್ತಲೋ, ಇನ್ನಾವುದೇ ಕೆಲಸ ಮಾಡುತ್ತಲಿರುವಲ್ಲಿ ನಮ್ಮನ್ನು ಕರೆಸಿಕೊಳ್ಳುತ್ತಿದ್ದ ಅಮ್ಮಮ್ಮ ಕನ್ನಡ ಪಠ್ಯದ ಯಾವುದಾದರೂ ಒಂದು ಪಾಠ ಓದಿ ಹೇಳಲು ಆದೇಶ ನೀಡುತ್ತಿದ್ದಳು. ಪೌರಾಣಿಕ ಪಾಠಕ್ಕೆ ಆದ್ಯತೆ. ಇಲ್ಲವಾದರೆ ಯಾವುದೂ ಸರಿ. ಪದ್ಯಗಳನ್ನೂ ರಾಗವಾಗಿ ಓದಿ ಹೇಳಬೇಕಿತ್ತು. ಅದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದರೆ ಆಕೆಗೆ ಇಮ್ಮಡಿ ಸಂತಸ. ಒಂದು ವಿಷಯ ತಿಳಿದುಕೊಂಡಿದ್ದಕ್ಕೆ, ಇನ್ನೊಂದು ತನ್ನ ಮೊಮ್ಮಕ್ಕಳಿಗೆ ಚಂದ ಮಾಡಿ ಓದಲು ಬರುತ್ತದಲ್ಲ ಎಂಬ ಹೆಮ್ಮೆಗೆ. ಮುಂದೆ ನಾವೆಲ್ಲ ಹೈಸ್ಕೂಲು, ಕಾಲೇಜು ಸೇರಿದ ಮೇಲೆ 'ಇಂಗ್ಲೀಷಲ್ಲಿ ಮಾತಾಡಿ' ಎಂದು ಪ್ರೋತ್ಸಾಹಿಸುತ್ತಿದ್ದಳು. 'ಅಮ್ಮಮ್ಮ ನಿಂಗದೆಲ್ಲ ಅರ್ಥ ಆಗ್ತಿಲ್ಲೆ' ಎಂದರೆ, 'ಅಡ್ಡಿ ಇಲ್ಲೆ, ನಿಂಗ ಮಾತಾಡಿದ್ನ ಕೇಳಿರೂ ಯಂಗದೇ ಸಂತೋಷ' ಎನ್ನುತ್ತಿದ್ದಳಾಕೆ. &lt;br /&gt;ಓದು ಬರದಿದ್ದರೂ ಅಮ್ಮಮ್ಮ  ಲೆಕ್ಕದಲ್ಲಿ ಭಾರಿ ಜಾಣೆ. ಮಗ್ಗಿ, ಕಾಲು, ಅರ್ಧ, ಮುಕ್ಕಾಲು ಎಲ್ಲ ಆಕೆಗೆ ಕಂಠಪಾಠ. ನಾಣ್ಯ, ನೋಟುಗಳನ್ನೆಲ್ಲ ಚಿತ್ರ ನೋಡಿಯೇ ಗುರುತಿಸುತ್ತಿದ್ದಳು. ಒಬ್ಬಂಟಿಯಾಗಿ ಬಸ್ ಪ್ರಯಾಣ ಮಾಡುವಷ್ಟು ಧೈರ್ಯವೂ ಇತ್ತು. ಸಂಪ್ರದಾಯದ ಹಾಡುಗಳು, ಗಾದೆಗಳಂತೂ ಸಾವಿರದ ಲೆಕ್ಕದಲ್ಲಿ ಗೊತ್ತು. ಯಾರಾದರೂ ಒಂದು ಹೊಸ ಹಾಡು ಹೇಳಿದರೆ ಒಂದು ಸಲ ಕೇಳುತ್ತಲೇ ಪೂರ್ತಿ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಅವಳದ್ದು. ಬರೆಹ ಕಲಿಯದ ಆಕೆಯ ಕೊರಗು ಕೊನೆಯವರೆಗೂ ಇರಬಾರದೆಂದು ನಾನು ಆಕೆಗೆ ಸುಮಾರು ಎಂಬತ್ತನಾಲ್ಕು ವರ್ಷವಿದ್ದಾಗ 'ಅ,ಆ,ಇ,ಈ' ಹೇಳಿಕೊಟ್ಟಿದ್ದೆ. ಆಗ ನನಗೆ ಶಾಲಾ ರಜೆ, ಅಮ್ಮಮ್ಮನೂ ನನ್ನಪ್ಪ-ಅಮ್ಮ ಇದ್ದ ಹನುಮಾಪುರಕ್ಕೆ ಬಂದುಳಿದಿದ್ದಳು. ಅಕ್ಷರಾಭ್ಯಾಸ ಮಾಡುವ ಖುಷಿಯಲ್ಲಿ ಅಮ್ಮಮ್ಮ ಕನ್ನಡಾಕ್ಷರಗಳನ್ನು ತಿದ್ದಿದ್ದೇ ತಿದ್ದಿದ್ದು. ಎರಡು ಮೂರು ದಿನಗಳಲ್ಲಿ 'ಅಂ, ಅಃ'ವರೆಗೆ ಕಲಿತಳು. 'ಗೌರಿ' ಎಂದು ತನ್ನ ಹೆಸರು ಬರೆಯಲೂ ಕಲಿತಳು. ಅಪ್ಪ-ಅಮ್ಮನ ಪ್ರೋತ್ಸಾಹವೂ ಇದ್ದಿದ್ದರಿಂದ ಅಲ್ಲಿ ಇದ್ದಷ್ಟು ದಿನ ಸಮಯ ಸಿಕ್ಕಾಗಲೆಲ್ಲ ಕಲಿತಷ್ಟನ್ನು ಬರೆಯುತ್ತಲೇ ಇದ್ದಳು. ಆದರೆ ಬಾಳೇಸರಕ್ಕೆ ವಾಪಸ್ ಬಂದ ಮೇಲೆ ಪ್ರೋತ್ಸಾಹ, ಅವಕಾಶ, ಸಮಯ ಯಾವವೂ ಸಿಗದೇ ಅಮ್ಮಮ್ಮನ ಅಕ್ಷರಾಭ್ಯಾಸ ಅಘನಾಶಿನಿಯಲ್ಲಿ ಕೊಚ್ಚಿ ಹೋಯಿತು.&lt;br /&gt;ದೂರದೂರುಗಳಿಂದ ಬಾಳೇಸರ ಶಾಲೆಗೆ ಬರುತ್ತಿದ್ದ ಹಲವಾರು ಮಕ್ಕಳಿಗೆ ನಮ್ಮನೆಯಲ್ಲಿ ಮಧ್ಯಾಹ್ನದ ಊಟ ಹಾಕುವುದು ಅಜ್ಜನ ಕಾಲದಿಂದಲೇ ಇದ್ದ ಪದ್ಧತಿಯಂತೆ. ಅದು ಶುರುವಾಗಿದ್ದು, ಇನ್ನೂ ನಡೆದುಕೊಂಡು ಬರುತ್ತಿರುವುದು ಅಮ್ಮಮ್ಮನ ಒತ್ತಾಸೆಯಿಂದಲೇ. ಮನೆಯ ಸೊಸೆಯರು ಎಷ್ಟೇ ಬಡಿಸಿದರೂ, 'ಪಾಪ, ಶಾಲೆಗೆ ಹೋಪ ಹುಡ್ರು, ಸರಿಯಾಗಿ ತಿನ್ನವು' ಎಂದು ಅಮ್ಮಮ್ಮ ತಾನೇ ಬಂದು ಮತ್ತಷ್ಟು ತುಪ್ಪ ಹಾಕುವುದು, ಕಜ್ಜಾಯ ಬಡಿಸಿಹೋಗುವುದು ಯಾವತ್ತೂ ಇದ್ದದ್ದೇ. ನಾವು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ, ಮಧ್ಯಾಹ್ನ ಊಟ ಮುಗಿಸಿ ಹೊರಡುವಾಗ ಯಾರಿಗೂ ಗೊತ್ತಾಗದಂತೆ ಒಂದರೆಡು ಚಕ್ಕುಲಿಯನ್ನೋ, ಅತ್ರಾಸ, ಅಂಬೊಡೆಯನ್ನೋ ಕೈಗಿಟ್ಟು ಸದ್ದಿಲ್ಲದೇ ತೆರಳುತ್ತಿದ್ದ ಅಮ್ಮಮ್ಮನ ಚಿತ್ರ ಇಂದಿಗೂ ಕಣ್ಣು ಕಟ್ಟುತ್ತದೆ.&lt;br /&gt;ಅಜ್ಜ ಕೂಡ ಅಮ್ಮಮ್ಮನಂತೆ ಎಳವೆಯಲ್ಲೇ ತಂದೆ-ತಾಯಿಯನ್ನು ಕಳೆದುಕೊಂಡಿದ್ದಂತೆ. ಮದುವೆಯಾಗುವಾಗ ಇಬ್ಬರಿಗೂ ಚಿಕ್ಕವಯಸ್ಸು. ಕೆಲವೇ ಸಮಯದಲ್ಲಿ ಮನೆಯ ಹಿರಿಯಲು ಇವರನ್ನು ಬರಿಗೈಯಲ್ಲಿ ಮನೆಯಿಂದ ಹೊರ ಹಾಕಿದರಂತೆ. ಆಮೇಲೆ ನಾಲ್ಕು ಜನ ದೊಡ್ಡವರು ಮಧ್ಯಸ್ಥಿಕೆ ನಡೆಸಿ ಬಾಳೇಸರದಲ್ಲೊಂದು ತುಂಡು ಜಮೀನು ಖರೀದಿಸಲು ಸಹಾಯ ಮಾಡಿದ್ದರಂತೆ. ಹೀಗೆ ಏನೂ ಇಲ್ಲದೆಯೇ ಪಾಳು ಬಿದ್ದ ತೋಟ ನಂಬಿ ಸಂಸಾರ ಶುರು ಮಾಡಿದ ಅಜ್ಜನಿಗೆ ಸಮನಾಗಿ ನಿಂತು ಮನೆಯ ಹೊರಗೆ, ಒಳಗೆ ದುಡಿದವಳು ಅಮ್ಮಮ್ಮ. ಶಾಂತ ಸ್ವಭಾವದ ನಿಧಾನಸ್ಥ, ಭಾವುಕ, ಕಾವ್ಯಜೀವಿ ಅಜ್ಜನಿಗೆ ಭಾರಿ ಚುರುಕಿನ, ಚಟುವಟಿಕೆಯ, ವಾಸ್ತವವಾದಿ, ಗಡಸು ಹೆಂಡತಿ ಅಮ್ಮಮ್ಮ. ಅಜ್ಜ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿ ಜೈಲು ಸೇರಿದಾಗ ಮನೆಯನ್ನು ನಡೆಸಿದವಳು ಅವಳು. ಅಂತೂ ಇಬ್ಬರು ಹೊಂದಿ ದುಡಿದು ಮನೆಯನ್ನು ಬೆಳೆಸಿದರು. ನಾಲ್ವರು ಗಂಡು ಮಕ್ಕಳು, ಇಬ್ಬರು ಹೆಣ್ಣುಮಕ್ಕಳು. ದೊಡ್ಡಪ್ಪಂದಿರಿಗೆ, ಅತ್ತೆಯರಿಗೆ ಮದುವೆಯೂ ಆಯಿತು. ಇನ್ನೊಬ್ಬ ದೊಡ್ಡಪ್ಪ, ನನ್ನಪ್ಪ ಇನ್ನೂ ಓದುತ್ತಿರುವಾಗಲೇ ಅಜ್ಜ ಕ್ಯಾನ್ಸರಿನಿಂದ ತೀರಿ ಹೋದರು. ಅಮ್ಮಮ್ಮ ಆಗಿನ ಸಂಪ್ರದಾಯದಂತೆ ತಲೆ ಬೋಳಿಸಿಕೊಂಡು, ಕೆಂಪಿನ ಛಾಯೆಗಳ ಸೀರೆಯುಡುವ ವಿಧವೆಯಾದಳು.&lt;br /&gt; ಬಾಹ್ಯರೂಪಕ್ಕೆ ಮಡಿ ಹೆಂಗಸಾಗಿ ಕಂಡರೂ ಅಂತರಂಗದಲ್ಲಿ ಅಮ್ಮಮ್ಮ ತನ್ನ ಸೊಸೆಯಂದಿರಿಗಿಂತಲೂ ಹೆಚ್ಚು ಮಾಡರ್ನ್. ಮೊಮ್ಮಕ್ಕಳ ಮದುವೆ ವಿಷಯದಲ್ಲಿ 'ನಿಂಗ ಪ್ರೀತಿ ಮಾಡಿ ಬೇರೆ ಜಾತಿಯವರನ್ನು ಮದುವೆ ಆದರೂ ಅಡ್ಡಿಲ್ಲೆ, ಆದರೆ ಮದುವೆ ಆದಂವ ನಿಂಗಳನ್ನ ಯಾವತ್ತೂ ಗೌರವದಿಂದ, ಪ್ರೀತಿಯಿಂದ ಕಾಣವು. ಸಂಸಾರವನ್ನ ಸಮರ್ಥವಾಗಿ ನಡೆಸಿಕ್ಯಂಡು ಹೋಪಷ್ಟು ಗಟ್ಟಿ ಇರವು' ಎಂದವಳು ಅವಳು. ಮೊಮ್ಮಕ್ಕಳಲ್ಲಿ ಹುಡುಗಿಯರೆಲ್ಲ ಚೆನ್ನಾಗಿ ಓದಿ, ನೌಕರಿ ಮಾಡಬೇಕೆಂಬುದು ಅವರ ಮಹದಾಸೆ. ಒಬ್ಬಂಟಿಯಾಗಿ ಪರವೂರಿಗೆ ವಿದ್ಯಾಭ್ಯಾಸಕ್ಕೆ, ನೌಕರಿಗೆ ಹೊರಟು ನಿಂತಾಗ ಬೆನ್ನು ತಟ್ಟಿ ಕಳುಹಿಸಿದ್ದಳು. ಸ್ವಾತಂತ್ರ್ಯ ಹೋರಾಟಗಾರರ ಮಾಸಾಶನ ತರಲು ಸಿದ್ದಾಪುರಕ್ಕೆ ಹೋದಾಗಲೆಲ್ಲ ಅಲ್ಲಿನ ಬ್ಯಾಂಕುಗಳಲ್ಲಿ, ಕಚೇರಿಗಳಲ್ಲಿ ಕೆಲಸ ಮಾಡುವ ಮಹಿಳೆಯರನ್ನು ನೋಡಿ ಬರುತ್ತಿದ್ದ ಅಮ್ಮಮ್ಮ  'ತಂಗಿ, ನಿಂಗಳೂ ಎಲ್ಲ ಇಂಥಾ ನೌಕರಿಗೆ ಸೇರಿ. ಕೆಲಸನೂ ಮಾಡಲಾಗ್ತು, ಮಕ್ಕಳನ್ನು ಬೆಳಸಿ ಸಂಸಾರ ನೋಡಿಕ್ಯಂಬಲೂ ಆಗ್ತು' ಎಂದು ಹುರುಪು ತುಂಬುತ್ತಿದ್ದಳು. ಈಗಲೂ ಸಹ, ಪತ್ರಿಕೆಗಳಲ್ಲಿ ಪ್ರಕಟವಾಗುವ ನನ್ನ ಲೇಖನಗಳನ್ನು ಅಪ್ಪ ಅವಳೆದುರು ಓದಿ ಹೇಳುತ್ತಿದ್ದರೆ, 'ತನ್ನ ಮೊಮ್ಮಗಳು ಬರೆದದ್ದು' ಎಂದು ಅವಳಿಗಾಗುವ ಹೆಮ್ಮೆ ಅಲ್ಪಸ್ವಲ್ಪದಲ್ಲ.&lt;br /&gt;ದೈಹಿಕವಾಗಿಯೂ ಅಮ್ಮಮ್ಮ ಗಟ್ಟಿ ಜೀವಿ. ತನ್ನೆಲ್ಲ ಕೆಲಸಗಳನ್ನು ತಾನೇ ಮಾಡಿಕೊಂಡು ಬರುವ ಜೊತೆಗೆ ಅಡುಗೆಯಲ್ಲಿ, ಮನೆವಾರ್ತೆಯಲ್ಲಿ ಸಹಾಯ ಮಾಡುವುದು ಆಕೆ ಸುಮಾರು ಎಂಬತ್ತೈದು ವರ್ಷಗಳವರೆಗೂ ನಡೆಸಿಕೊಂಡು ಬಂದ ನಿತ್ಯ ಕರ್ಮ. ಆದರೆ ಕಳೆದೊಂದು ದಶಕದಲ್ಲಿ ಇಬ್ಬರು ಗಂಡು ಮಕ್ಕಳು, ಒಬ್ಬ ಅಳಿಯನನ್ನು ಕಳೆದುಕೊಂಡಿದ್ದು ಅಮ್ಮಮ್ಮನಿಗೆ ಏಕಾಏಕಿ ಮುದಿತನ ತಂದಿತು. ಈಗೆರಡು ವರ್ಷಗಳಿಂದ ಮರೆವು ಜಾಸ್ತಿ. ಹಿಂದಿನ ದಿನಗಳಾಗಲಿ, ಹಿಂದೆ ಕಲಿತ ಹಾಡು ಹಸೆ ಲೆಕ್ಕ, ಹಳೆಯ ನೆಂಟರು ಯಾರೂ ಆಕೆಗೆ ಮರೆತಿಲ್ಲ. ಆದರೆ  ದಿನ ನಿತ್ಯದ ಬದುಕಿನ ಚಿಕ್ಕಪುಟ್ಟ ಸಂಗತಿಗಳು ನೆನಪಿರುವುದಿಲ್ಲ. ಆದರೂ ಬಾಯಿ ರುಚಿ ಇಲ್ಲ, ಪಿಸುಗುಟ್ಟಿದರೆ ಕೇಳುವುದಿಲ್ಲ, ಕಣ್ಣು ಸ್ಪಷ್ಟವಾಗಿ ಕಾಣುವುದಿಲ್ಲ ಎಂಬ ವೃದ್ಧಾಪ್ಯದ ಸಮಸ್ಯೆಗಳನ್ನು ಹೊರತುಪಡಿಸಿದರೆ ಇಂದಿಗೂ ಆಕೆಗೆ ಯಾವುದೇ ರೋಗ ಇಲ್ಲ. ತನ್ನ ಕೆಲಸಗಳಿಗೆ ಯಾರನ್ನೂ ಆಕೆ ಅವಲಂಬಿಸಿಲ್ಲ.&lt;br /&gt;ನಮ್ಮ ಕುಟುಂಬದ ಸಮಷ್ಟಿ ಶಕ್ತಿಯಾಗಿ, ಜೀವ ನದಿಯಾಗಿ ನಿಂತ ಅಮ್ಮಮ್ಮ ಬದುಕಿದಷ್ಟು ದಿನ ನೆಮ್ಮದಿಯಿಂದಿರಲಿ, ಇಷ್ಟೇ ಗಟ್ಟಿ ಇರಲಿ. ಅಮ್ಮಮ್ಮನ ಚೇತನ ಕಿರಿಯರಿಗೆಲ್ಲ ಬೆಳಕಾಗಿರಲಿ ಎಂಬುದು ನನ್ನ ಪ್ರೀತಿಯ ಹಾರೈಕೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-7665635824804835511?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/7665635824804835511/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/03/blog-post.html#comment-form' title='5 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/7665635824804835511'/><link rel='self' type='application/atom+xml' href='http://www.blogger.com/feeds/4309049398760149221/posts/default/7665635824804835511'/><link rel='alternate' type='text/html' href='http://kaanadani.blogspot.com/2009/03/blog-post.html' title='ಜೀವ ನದಿ'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>5</thr:total></entry><entry><id>tag:blogger.com,1999:blog-4309049398760149221.post-3190942414259606871</id><published>2009-02-10T23:47:00.003-05:00</published><updated>2009-02-11T00:36:37.356-05:00</updated><category scheme='http://www.blogger.com/atom/ns#' term='ಅಶ್ವತ್ಥ ಕಟ್ಟೆ'/><title type='text'>'ಸುಧಾ'ಪಾನದ ಸುದ್ದಿ</title><content type='html'>ಇತ್ತೀಚೆಗೆ ಊರಿಗೆ ಹೋದಾಗ ಅಕಸ್ಮಾತ್ತಾಗಿ ಒಂದಿಷ್ಟು ಹಳೆಯ 'ಸುಧಾ'ಗಳ ರಾಶಿ ಕಣ್ಣಿಗೆ ಬಿತ್ತು. ಮಾಡುತ್ತಿದ್ದ ಕೆಲಸ ಕೈ ಬಿಟ್ಟು ಹಾಗೆಯೇ ಓದಲು ಕುಳಿತುಕೊಂಡೆ. ಒಂದೆರಡು ಪುಟ ತಿರುವುತ್ತಿದ್ದಂತೆಯೇ ನಾನೇ ಕಳೆದುಹೋಗಿದ್ದೆ. ಒಂದೊಂದು ಬಿಡಿ ಪತ್ರಿಕೆಯೂ ಒಂದು ನಿಧಿಯಂತೆ. ವೈವಿಧ್ಯಮಯ ನೆನಪುಗಳ ಮೂಟೆಯಂತೆ. ಕುಡಿದಷ್ಟೂ ಇನ್ನೂ ಬೇಕೆನ್ನಿಸುವ, ಮತ್ತು ಹತ್ತಿಸುವ ರಸಪಾಕದಂತೆ ಅನ್ನಿಸತೊಡಗಿತ್ತು. &lt;br /&gt; 'ಸುಧಾ' ಜೊತೆಗಿನ ನನ್ನ ನಂಟು ನನಗೊಂದು ಮೂರು-ಮೂರೂವರೆ ವರ್ಷವಾಗಿದ್ದಾಗಲೇ ಶುರುವಾಗಿತ್ತು. ಅಪ್ಪನ ಮೂಲಮನೆ 'ಬಾಳೇಸರ'ದಲ್ಲಿ 'ಸುಧಾ' ತರಿಸುತ್ತಿದ್ದರು. ಊರಿಗೆ ಹೋದಾಗೆಲ್ಲ ಅಪ್ಪ ಹಳೆ ಪತ್ರಿಕೆಗಳನ್ನು ಹಿಡಿದುಕೊಂಡು ನಾವಿರುತ್ತಿದ್ದ ಹನುಮಾಪುರಕ್ಕೆ ತರುತ್ತಿದ್ದ. ರಾತ್ರಿ ಊಟವಾದ ಮೇಲೆ ಚಿಮಣಿ ದೀಪದ ಬೆಳಕಿನಲ್ಲಿ ಅಪ್ಪ-ಅಮ್ಮ ಓದಲು ಶುರು ಮಾಡಿದರೆ ನಾನೂ ಪಕ್ಕದಲ್ಲೊಂದು 'ಸುಧಾ' ಹಿಡಿದು ಕುಳಿತುಕೊಳ್ಳುತ್ತಿದ್ದೆ. ಅಕ್ಷರ ಬರದಿದ್ದರೂ ಚಿತ್ರ ನೋಡುವ ಹಂಬಲ. ಅದರಲ್ಲೂ ಪುಟಾಣಿ ಪುಟ್ಟಿ, ವಿಕ್ರಮ್, ಫ್ಯಾಂಟಮ್ ಕಾರ್ಟೂನುಗಳನ್ನು ನೋಡಿ, ನನಗೆ ತಿಳಿದಂತೆ ಅರ್ಥೈಸಿಕೊಳ್ಳುತ್ತಿದ್ದೆ. ಆಮೇಲೆ ಸರಸರ ಓದಲು ಬರೆಯಲು ಕಲಿತಿದ್ದೇ 'ಸುಧಾ'ದಲ್ಲಿನ ಕಾರ್ಟೂನು, ಮಕ್ಕಳ ಕಥೆ ಓದಬೇಕೆಂಬ ಆಸೆಯಿಂದ. &lt;br /&gt; ಮುಂದೆ ಶಾಲೆಗೆ ಸೇರಲೆಂದು ಬಾಳೇಸರಕ್ಕೆ ಬಂದುಳಿದ ಮೇಲಂತೂ ತೂಕಡಿಸುವವಳಿಗೆ ಹಾಸಿಗೆ ಹಾಸಿಕೊಟ್ಟಂತಾಗಿತ್ತು. ಪ್ರತಿ ಗುರುವಾರ 'ಸುಧಾ' ಬಂತೆಂದರೆ ಮನೆಯಲ್ಲಿದ್ದ ಇತರ ಮಕ್ಕಳ ಜೊತೆ ಜಗಳ ಮಾಡಿಯಾದರೂ ನಾನೇ ಮೊದಲು ಅದನ್ನು ಓದಬೇಕು. ಮೊದಲು ಓದಲು ಅವಕಾಶವಾಗಲಿಲ್ಲವೆಂದರೆ ನನಗಾಗುತ್ತಿದ್ದ ವ್ಯಥೆ, ಅವಮಾನ ಅಷ್ಟಿಷ್ಟಲ್ಲ.&lt;br /&gt; ಅಷ್ಟೊತ್ತಿಗಾಗಲೇ ಮಕ್ಕಳಿಗೆ ಮೀಸಲಾದ ಅಂಕಣಗಳನ್ನೆಲ್ಲಾ ಓದಿ ಅರಗಿಸಿಕೊಳ್ಳುವಷ್ಟು ಪರಿಣಿತಿ ಪಡೆದಿದ್ದ ನಾನು ನನ್ನಷ್ಟಕ್ಕೇ 'ದೊಡ್ಡವರ ಸರಕಿ'ಗೆ ಪ್ರೊಮೋಷನ್ ಕೊಟ್ಟುಕೊಂಡಿದ್ದೆ. ದೊಡ್ಡವರ ಸರಕೆಂದರೆ ಕಥೆ, ಧಾರಾವಾಹಿಗಳು. ಚಿಕ್ಕಮಕ್ಕಳೆಲ್ಲಾ ಧಾರಾವಾಹಿ ಓದಬಾರದು, ದೊಡ್ಡವರ ಮಾತ್ರ ಓದಬೇಕು ಎಂಬುದು ನಮ್ಮ ಮನೆಯಲ್ಲಿದ್ದ ಹಿರಿಯ ಹುಡುಗರು ಅಂದರೆ ನನ್ನ ದೊಡ್ಡಪ್ಪಂದಿರ ಮಕ್ಕಳು ಹಾಕಿದ್ದ ನಿಯಮ. ಅವರು ಬೇಡ ಎಂದಷ್ಟೂ ನನಗೆ ಅದರಲ್ಲೇನೋ ಇದೆ, ನಾನದನ್ನು ಓದಲೇಬೇಕೆಂಬ ಕುತೂಹಲ. ಅವರೆಲ್ಲ ಕೆಳಗೆ ಬರೆಯುವುದರಲ್ಲಿ, ಓದು ಆಟಗಳಲ್ಲಿ ಮಗ್ನರಾಗಿದ್ದಾಗಿದ್ದಾಗ ನಾನು ಕದ್ದು ಮೆತ್ತಿಗೆ ಹೋಗಿ 'ಸುಧಾ' ಧಾರಾವಾಹಿಗಳ ಪುಟ ತೆರೆಯುತ್ತಿದ್ದೆ. ಒಂದೇ ಉಸಿರಿನಲ್ಲಿ ಆ ವಾರದ ಇಡೀ ಕಂತು ಮುಗಿಸುತ್ತಿದ್ದೆ. ಮಧ್ಯದಲ್ಲಿ ಯಾರಾದರೂ ಬಂದರೆ ಸಿಕ್ಕಿ ಹಾಕಿಕೊಳ್ಳಬಾರದೆಂಬ ಉದ್ದೇಶದಿಂದ ಮಧ್ಯದ ಒಂದು ಬೆರಳನ್ನು ಯಾವಾಗಲೂ ಮಕ್ಕಳ ಪುಟದಲ್ಲಿ ಇರಿಸಿಕೊಳ್ಳುತ್ತಿದ್ದೆ. ಮೆತ್ತಿನ ಏಣಿಯನ್ನು ಯಾರಾದರೂ ಹತ್ತಿ ಬರುವ ಸದ್ದಾಗುತ್ತಲೇ ಟಕ್ಕಂತ ಇದನ್ನು ಮುಚ್ಚಿ ಆ ಪುಟಕ್ಕೆ ದೃಷ್ಟಿ ವರ್ಗಾಯಿಸುತ್ತಿದ್ದೆ. ಆದರೆ ಅಕ್ಕ-ಅಣ್ಣಂದಿರಿಗೆ ನಾನು ಧಾರಾವಾಹಿ ಓದುತ್ತೇನೆಂದು ಸದಾ ಸಂಶಯ. ಏಕ್ದಂ ಎಲ್ಲೆಲ್ಲಿಂದಲೋ ಪ್ರತ್ಯಕ್ಷರಾಗಿ, 'ನೀನು ಧಾರ್ವಾಯಿ ಓದ್ತಾ ಇದ್ದಿದ್ದೆ ಹದಾ' ಎಂದು ಅಟ್ಯಾಕ್ ಮಾಡುತ್ತಿದ್ದರು. 'ಇಲ್ಲೇ ಇಲ್ಲ' ಎಂದು ನಾನೂ ಪಟ್ಟು ಬಿಡದೇ ವಾದಿಸುತ್ತಿದ್ದೆ. &lt;br /&gt; ಆ 'ದೊಡ್ಡವರ' ವ್ಯಾಪ್ತಿಯಲ್ಲಿ ಆರನೇ ತರಗತಿಯಲ್ಲಿದ್ದ ನಮ್ಮ ದೊಡ್ಡಪ್ಪನ ಮಗಳೂ ಬರುತ್ತಿದ್ದಳು. ಶಾಲೆಗೆ ಹೋಗುವಾಗ ನಮ್ಮನ್ನೆಲ್ಲಾ ಲೀಡ್ ಮಾಡುತ್ತಿದ್ದ ಹಿರಿಯಕ್ಕ ಅವಳು. ಮಧ್ಯ ದಾರಿಯಲ್ಲಿ ಅವಳದೇ ತರಗತಿಯ ಸ್ನೇಹಿತೆಯೊಬ್ಬಳು, ಇನ್ನೊಂದೆರಡು ಜನ ಚಿಕ್ಕ ಹುಡುಗರ ಜೊತೆ ನಮ್ಮನ್ನು ಸೇರಿಕೊಳ್ಳುತ್ತಿದ್ದಳು. ದಿನಾ ದಾರಿ ತುಂಬ ಅವರಿಬ್ಬರೂ 'ಸುಧಾ'ದಲ್ಲಿ ಓದಿದ್ದನ್ನು ಚರ್ಚಿಸುತ್ತಾ ಸಾಗುತ್ತಿದ್ದರು. &lt;br /&gt; ಒಮ್ಮೆ  ಲೇಖಕಿ ವಿದ್ಯುಲ್ಲತಾ ಅವರ 'ರಥಸಪ್ತಮಿ' ಧಾರಾವಾಹಿ ಬರಲಾರಂಭಿಸಿತ್ತು. ಇವರಿಬ್ಬರೂ ಹೊಸ ಧಾರಾವಾಹಿ ಬಗ್ಗೆ ಮಾತುಕತೆ ಆರಂಭಿಸಿದರು. ಏನು ಮಾಡಿದರೂ ಧಾರಾವಾಹಿ ನಾಯಕಿಯ ಹೊಸ ರೀತಿಯ ಹೆಸರು ಇವರಿಗೆ ನೆನಪಿಗೇ ಬರುತ್ತಿಲ್ಲ. 'ಆ ನಾಯಕಿ ಹೆಸರೆಂಥಾ ಆತೇ', 'ಎಂಥೋ ಹೊಸಾ ಹೆಸರು, ಎಂಥಾ ಮಾಡಿರೂ ನೆನಪೇ ಆಗ್ತಿಲ್ಲೆ' ಎಂದು ಇಬ್ಬರೂ ಪರದಾಡಲಾರಂಭಿಸಿದರು. ಹಿಂದೆಯೇ ಬರುತ್ತಿದ್ದ ನನಗೆ ಇವರ ಪೇಚಾಟ ನೋಡಲಾಗಲಿಲ್ಲ. 'ಅಯ್ಯೋ, ಅದ್ರ ಹೆಸರು ಸಮುದ್ಯತಾ' ಎಂದೇ ಹೇಳೇಬಿಟ್ಟೆ. 'ಹಾಂ ಹಾಂ ಸಮುದ್ಯತಾ' ಎಂದು ಇಬ್ಬರೂ ತಲೆದೂಗಿದರೂ, ಮರುಕ್ಷಣ ನಮ್ಮಕ್ಕ 'ನಿಂಗೆ ಹ್ಯಾಂಗೆ ಗೊತ್ತಿದ್ದು ಅದು' ಎಂದು ನನ್ನತ್ತ ದೊಡ್ಡ ಕಣ್ಣು ಬಿಟ್ಟಳು. ತಪ್ಪಿನ ಅರಿವಾದ ನಾನು ಎಂಜಲು ನುಂಗುತ್ತ, 'ಅದಾ, ಅದು ನೀನೇ ಆವತ್ತು ಹೇಳ್ತಾ ಇದ್ದಿದ್ದೆ' ಎಂದೇನೋ ಓಳು ಬಿಟ್ಟು ಪರಾರಿಯಾದೆ.&lt;br /&gt;ಇನ್ನೊಮ್ಮೆ 'ಶಾರದೆ' ಅವರ 'ಕವಲೊಡೆದ ದಾರಿ' ಧಾರಾವಾಹಿಯ ಚರ್ಚೆ. ನಾಯಕ-ನಾಯಕಿಯ ಸಂಸಾರದಲ್ಲಿ ಮೂರನೇ ಹೆಂಗಸಿನ ಪ್ರವೇಶವಾಗಿತ್ತು. ಯಥಾಪ್ರಕಾರ ನಮ್ಮಕ್ಕ-ಅವಳ ಗೆಳತಿಗೆ ಆ ಪಾತ್ರದ ಹೆಸರು ನೆನಪಾಗುತ್ತಿಲ್ಲ. ಹಿಂದಿನ ಸಲದಂತಾಗಬಾರದೆಂದು ನಾನೂ ತಡೆದುಕೊಳ್ಳುವಷ್ಟು ತಡೆದುಕೊಂಡೆ. ಐದು ನಿಮಷವಾದರೂ ಇವರಿಗೆ ನೆನಪೇ ಆಗುತ್ತಿಲ್ಲ. ನೋಡಿ ನೋಡಿ ನನಗೂ ಸಾಕಾಯಿತು. 'ಅದರ ಹೆಸರು ಮೀನಾ ಹೇಳಿ' ಬಾಯ್ತಪ್ಪಿ ಹೇಳಿ ನಾಲಿಗೆ ಕಚ್ಚಿಕೊಳ್ಳುವಷ್ಟರಲ್ಲಿ ನಮ್ಮಕ್ಕ ನನ್ನನ್ನು ಹಿಡಿದಾಗಿತ್ತು. 'ಹೌದಾ, ನೀ ಧಾರ್ವಾಯಿ ಓದ್ತೆ. ಓದ್ತ್ನಿಲ್ಲೆ ಹೇಳಿ ಸುಳ್ಳು ಹೇಳ್ತೆ' ಎಂದು ಅಕ್ಕೋರ ಮಾದರಿಯಲ್ಲಿ ತಲೆ ಹಾಕಲಾರಂಭಿಸಿದಳು. ಈಗ ತಪ್ಪಿಸಿಕೊಳ್ಳುವಂತೆಯೇ ಇರಲಿಲ್ಲ. 'ಇಲ್ಲೆ, ಇಡೀ ಧಾರ್ವಾಯಿ ಓದಿದ್ನಿಲ್ಲೆ, ಇಲ್ಲಿಯವರೆಗೆ... ಹೇಳಿ ಇರ್ತಲೆ, ಅದ್ನ ಮಾತ್ರೆ ಓದಿದ್ದಿ' ಎಂದೆ. ಅವಳಿಗೆ ನಂಬಿಕೆ ಬರಲಿಲ್ಲ. ಆದರೆ ಅಷ್ಟರಲ್ಲಿ ಶಾಲೆ ಹತ್ತಿರ ಬಂದಿತ್ತು, ನಾನು ಬಚಾವಾದೆ.&lt;br /&gt;ಎಳವೆಯಲ್ಲಿ ಓದಿನ ರುಚಿ ಹತ್ತಿಸಿದ 'ಸುಧಾ', ಆಮೇಲೆ ಜೊತೆಗೂಡಿದ ಹಳೆ 'ಕಸ್ತೂರಿ'ಗಳ ಸಖ್ಯದ ಕಥೆ ತುಂಬಾ ದೊಡ್ಡದಿದೆ. ಊರಿಂದ ತಂದಿದ್ದ  ಹಳೆ ಪತ್ರಿಕೆಯೊಂದನ್ನು ನೋಡುತ್ತಿದ್ದಂತೆ ಎಲ್ಲ ನೆನಪಾಗುತ್ತಿದೆ ಇಂದು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-3190942414259606871?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/3190942414259606871/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/02/blog-post.html#comment-form' title='8 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/3190942414259606871'/><link rel='self' type='application/atom+xml' href='http://www.blogger.com/feeds/4309049398760149221/posts/default/3190942414259606871'/><link rel='alternate' type='text/html' href='http://kaanadani.blogspot.com/2009/02/blog-post.html' title='&apos;ಸುಧಾ&apos;ಪಾನದ ಸುದ್ದಿ'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>8</thr:total></entry><entry><id>tag:blogger.com,1999:blog-4309049398760149221.post-5191006437164881634</id><published>2009-01-22T05:51:00.002-05:00</published><updated>2009-08-21T12:05:50.972-04:00</updated><category scheme='http://www.blogger.com/atom/ns#' term='ಕಾಡು ಕಾಡ್ತು'/><title type='text'>ಅರೆರೆ.... ಚಿಗರೆ!!</title><content type='html'>ಅಡವಿ, ವನ್ಯಪ್ರಾಣಿಗಳು ಎಂದಾಕ್ಷಣ ನನ್ನ ಕಣ್ಣೆದುರು ಮೂಡುತ್ತಿದ್ದ ಆಕಾರಗಳು ಎರಡು: ಒಂದು ಹುಲಿ, ಇನ್ನೊಂದು ಜಿಂಕೆ (ನಮ್ಮೂರಿನ ಭಾಷೆಯಲ್ಲಿ ಚಿಗರೆ).&lt;br /&gt;ಈ ಪೈಕಿ ಮೊದಲನೆಯದು ಕಾಡಿನ ವಿಚಾರವಾಗಿ ಎದೆಯಾಳದಲ್ಲೊಂದು ಮರಗಟ್ಟಿಸುವ ಭಯವನ್ನು ಹುದುಗಿಸಿಟ್ಟಿದ್ದರೆ, ಎರಡನೆಯದು ಬೆಚ್ಚನೆಯ ಆಕರ್ಷಣೆಯನ್ನು ಚೌಕಟ್ಟು ಕಟ್ಟಿ ಕೂಡ್ರಿಸಿತ್ತು. ಅದರ ಮಿರಿಮಿರಿ ಮಿಂಚುವ ಚಂದದ ಚುಕ್ಕೆಭರಿತ ಚರ್ಮ, ಕವಲು ಕವಲಾದ ಕೋಡುಗಳು, ಪಿಳಿ ಪಿಳಿ ಕಣ್ಣುಗಳು, ಛಂಗನೇ ನೆಗೆದು ಓಡುವ ಪರಿ... ಅದರ ಬಗೆಗೊಂದು ಮಧುರವಾದ ಪ್ರೀತಿಯನ್ನು ಹುಟ್ಟು ಹಾಕಿದ್ದವು.&lt;br /&gt;ಮನೆ ಸುತ್ತಲ ಕಾಡಿನಲ್ಲಿ ಹರಿಣಗಳು ಹೇರಳವಾಗಿದ್ದ ಕಾಲ ಅದು. ಚಕ್ಕಡಿ ಗಾಡಿ ಕಟ್ಟಿಕೊಂಡು ಕಾಡಿನೊಳಗೆ ಕಟ್ಟಿಗೆ ಹೇರಲೋ, ಗಳು ತರಲೋ ಹೊರಟಾಗ ಇದ್ದಕ್ಕಿದ್ದಂತೆ ಜಿಂಕೆಗಳ ದರ್ಶನವಾಗುತ್ತಿತ್ತು. ಸಾಮಾನ್ಯವಾಗಿ ಹಿಂಡಿನಲ್ಲೇ ಕಾಣಿಸಿಕೊಳ್ಳುತ್ತಿದ್ದ ಅವು ಆಗಾಗ ನಾಯಿಗಳಿಂದ, ಬೆನ್ನಟ್ಟಿದ ಬೇಟೆಗಾರರಿಂದ ತಪ್ಪಿಸಿಕೊಳ್ಳಲೆಂದು ನಮ್ಮ ಕಂಪೌಂಡ್ನೊಳಗೆ ನುಗ್ಗಿ ಬರುತ್ತಿದ್ದುದುಂಟು. ಇದ್ದಕ್ಕಿದ್ದಂತೆ ಶೂನ್ಯದೊಳಗಿನಿಂದ ಪ್ರತ್ಯಕ್ಷವಾದಂತೆ ಕಂಡ ಜಿಂಕೆಯನ್ನು ನೋಡಿ ನಾವು 'ಅರೆ! ಚಿಗರೆ!! ಇಲ್ ಬಾ, ಅಲ್ನೋಡು' ಎನ್ನುವುದರೊಳಗಾಗಿ ಅವು ಮಾಯವಾಗಿರುತ್ತಿದ್ದವು. ಆದರೂ 'ನಮ್ಮನೆಗೆ ಚಿಗರೆ ಬಂದಿತ್ತು' ಎಂಬುದೊಂದು ಪುಳಕ ವರ್ಷಗಟ್ಟಲೇ ನಮ್ಮಲ್ಲಿ ಉಳಿದಿರುತ್ತಿತ್ತು.&lt;br /&gt;ಶೌಚಾಲಯ ಇಲ್ಲದ ಆ ದಿನಗಳಲ್ಲಿ ತಂಬಿಗೆ ತಗೊಂಡು ಕಾಡಿಗೆ ಹೋದಾಗ ಎಷ್ಟೋ ಬಾರಿ ಜಿಂಕೆಗಳು ಕಾಣುತ್ತಿದ್ದುದುಂಟು. ಮನೇಲಿ ಯಾರಾದ್ರೂ ಒಬ್ಬರಿಗೆ ಅವು ಕಂಡವೆಂದರೆ ಬಂದು ಹೇಳಿದಾಕ್ಷಣ ಮತ್ತಿಬ್ಬರು ಆ ಕಡೆಗೆ ಓಡುತ್ತಿದ್ದೆವು. ಆದರೆ ಒಮ್ಮೆ ಮನುಷ್ಯರನ್ನು ಕಂಡ ಅವು ನಮ್ಮ ಸ್ವಾಗತಕ್ಕೆ ಕಾದಿರಬೇಕಲ್ಲ!&lt;br /&gt;ಜಿಂಕೆಗಳಿಗೆ ಎತ್ತಿನ ಕೊರಳಿನ ಗಂಟೆಗಳ, ಗೆಜ್ಜೆಸರಗಳ ನಾದ ಬಲು ಇಷ್ಟ ಎಂಬುದು ಅಪ್ಪ ಅನುಭವದಿಂದ ಕಂಡುಕೊಂಡಿದ್ದ ಸತ್ಯ. ಒಮ್ಮೆ ಗೆಜ್ಜೆಸರ ಕಟ್ಟಿದ್ದ ಎತ್ತುಗಳನ್ನು ಹೂಡಿದ್ದ ಗಾಡಿಯಲ್ಲಿ ಕುಳಿತು ಕಾಡಿನ ದಾರಿಯಲ್ಲಿ ಮಾಸ್ತ್ಯಮ್ಮ ದೇವಿಯ ಗುಡಿಗೆ ಸಾಗುತ್ತಿದ್ದಾಗ, ಇದ್ದಕ್ಕಿದ್ದಂತೆಯೇ ನನ್ನ ಆರನೆಯ ಇಂದ್ರಿಯ ಜಾಗೃತವಾಯಿತು. ಯಾರೋ ನಮ್ಮನ್ನು ಗಮನಿಸುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿ ಗಟ್ಟಿಗೊಳ್ಳತೊಡಗಿತು.&lt;br /&gt;ಗಾಡಿ ಹೊಡೆಯುತ್ತಿದ್ದ ಅಪ್ಪನ ಬೆನ್ನಿಗಂಟಿ ಕುಳಿತಿದ್ದ ನಾನು ಈ ಬಗ್ಗೆ ಅವನ ಕಿವಿಯಲ್ಲಿ ಪಿಸುಗುಟ್ಟಿದೆ. ಎತ್ತುಗಳ ಹಗ್ಗ ಎಳೆದು ಗಾಡಿಯ ವೇಗ ತಗ್ಗಿಸಿದ ಅಪ್ಪ ಅಷ್ಟೇ ಮೆತ್ತಗಿನ ದನಿಯಲ್ಲಿ, 'ಆನೂ ಈಗ ಅದನ್ನೇ ಹೇಳಂವ ಆಗಿದ್ದಿ. ರಸ್ತೆ ಅಂಚಿಗಿರ ಬಿದಿರ ಮಟ್ಟಿಗಳನ್ನ ದಿಟ್ಟಿಸಿ ನೋಡು... ಎಂಥ ಕಾಣ್ತು ಹೇಳು...' ಎಂದ. ಗದ್ದಲ ಮಾಡುತ್ತಿದ್ದ ಅಣ್ಣ, ಅಕ್ಕ ಕೂಡ ಮಾತು ನಿಲ್ಲಿಸಿ ಅತ್ತ ದೃಷ್ಟಿ ತೂರಿದರು. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೂ ಬಿದಿರು ಮೆಳೆಗಳು ದಟ್ಟೈಸಿದ್ದವು. ದಪ್ಪ ದಪ್ಪ ಬಿದಿರ ಬುಡಗಳ ಮರೆಯಲ್ಲಿ ನಮಗೆ ಹೊಳೆಯುವ ಪಿಳಿ ಪಿಳಿ ಕಣ್ಣುಗಳು, ನಿಮಿರುತ್ತಿದ್ದ ಕಿವಿಗಳು, ಬಡಿದುಕೊಳ್ಳುತ್ತಿದ್ದ ಮೊಂಡ ಬಾಲಗಳು ಕಾಣಿಸಿದವು. ಅತ್ಲಾಗೊಂದ್ನಾಕು, ಇತ್ಲಾಗೊಂದ್ನಾಕು ಜಿಂಕೆಗಳು ನಮ್ಮನ್ನೇ ಗಮನಿಸುತ್ತ ಬಹುಶಃ ಕುತೂಹಲದಿಂದ ನಿಂತಿದ್ದವು. 'ಅರೆ! ಎಷ್ಟೆಲ್ಲಾ ಜಿಂಕೆ!'- ನಾವು ಕೂಗುವುದರೊಳಗಾಗಿ ನಮ್ಮ ಪ್ರತಿಕ್ರಿಯೆ ಹೀಗೆ ಇರಬಹುದು ಎಂದು ಊಹಿಸಿದ್ದ ಅಪ್ಪ 'ಶ್! ಕೂಗಡಿ, ಸುಮ್ಮಂಗೆ ನೋಡಿ' ಎಂದ. &lt;br /&gt;ನಾವು ನಿಂತರೆ ಅವು ಪರಾರಿಯಾಗುತ್ತವೆಂಬ ಅರಿವಿದ್ದ ಅಪ್ಪ ನಿಧಾನವಾಗಿ ಗಾಡಿ ಹೊಡೆಯುತ್ತಲಿದ್ದ. 'ಅಪ್ಪಾ, ಗಾಡಿ ನಿಲ್ಸಾ, ಒಂದ್ಸಲ ನಿಲ್ಸಾ' ಎಂದು ನಾವು ಕುಸುಕುಸು ಶುರು ಮಾಡಿಯೇ ಬಿಟ್ಟವು. ನಮ್ಮ ಈ ಜಾಗರೂಕ ವರ್ತನೆ ಮತ್ತು ಇದ್ದಕ್ಕಿದ್ದಂತೆ ಉಂಟಾದ ಮೌನದ ವಾತಾವರಣದಲ್ಲಿ ಅಪಾಯದ ವಾಸನೆ ಗ್ರಹಿಸಿದ ಜಿಂಕೆಗಳು ರಸ್ತೆಯ ಅತ್ಲಾಗಿಂದ ಇತ್ಲಾಗೆ ಅಡ್ಡಾದಿಡ್ಡಿ ಜಿಗಿದು, ಮನಸ್ಸೋ ಇಚ್ಛೆ ಚದುರಿಯೇ ಬಿಟ್ಟವು. 'ನೋಡಿ, ನಾವು ಅವನ್ನು ಗಮನಿಸದು ಅವಕ್ಕೆ ಗೊತ್ತಾಗ್ಲಾಗ. ನಮ್ಮ ಪಾಡಿಗೆ ಕೆಲಸ ಮಾಡ್ತಾ ಸೂಕ್ಷ್ಮವಾಗಿ ಅವನ್ನು ಗಮನಿಸವು. ಆವಾಗ ಅವೂ ಅಲ್ಲೇ ನಿಲ್ತ'- ಅಪ್ಪ ಪರಿಸರ ಪಾಠದ ಒಂದು ನೀತಿ ಬೋಧಿಸಿದ.&lt;br /&gt;ರಸ್ತೆಯಂಚಿನಲ್ಲಿ ಮೇಯುತ್ತಿರುವ ಜಿಂಕೆಗಳು ಯಾರಾದರೂ ಬರುವ ಸೂಚನೆ ಸಿಕ್ಕಿದ್ದೇ ಈ ಬದಿಯಿಂದ ಆ ಬದಿಗೆ ದಾಟಿ ಓಡಿ ಹೋಗಿದ್ದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಈ ವರ್ತನೆ, ಓಡಾಡುವ ಜನರ ಮತ್ತು ಅವರ ಬಳಿಯಿರಬಹುದಾದ ನಾಯಿಗಳ ಗಮನವನ್ನು ಮುದ್ದಾಂ ಅವುಗಳ ಮೇಲೆ ಎಳೆದು ತರುತ್ತಿತ್ತು. ಹಲವು ಬಾರಿ ಖುದ್ದು ಅವನ್ನು ಅಪಾಯದಲ್ಲಿ ಸಿಕ್ಕಿಸುತ್ತಿತ್ತು. ಅವುಗಳ ಈ ಪೆದ್ದ ನಡವಳಿಕೆಯ ಬಗ್ಗೆ ಅಪ್ಪನಲ್ಲಿ ಪ್ರಸ್ತಾಪಿಸಿದಾಗ, ತಾನೂ ಇದನ್ನು ಗಮನಿಸಿರುವುದಾಗಿ ಆತ ಹೇಳಿದ. ಈ ಕಾರಣದಿಂದಾಗಿಯೇ ಅವು ಬೇಟೆಗಾರರಿಗೆ ಸುಲಭವಾಗಿ ಬಲಿಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ.&lt;br /&gt;ಕಾಡು ಕಣಗಿಲು, ಅತ್ತಿ ಮರಗಳ ಹಣ್ಣೆಂದರೆ ಜಿಂಕೆಗಳಿಗೆ ಮಹಾ ಪ್ರೀತಿ. ಅತ್ತಿ ಹಣ್ಣಾಗುವ ಕಾಲದಲ್ಲಿ ಗದ್ದೆಗಳ ಅಂಚಿನಲ್ಲಿರುವ ಆ ಮರಗಳ ಕೆಳಗೆ ಮುಂಜಾವಿನಲ್ಲಿ ಜಿಂಕೆಗಳ ಜಾತ್ರೆಯೇ ಸೇರುತ್ತಿತ್ತು. ಟಣ್ ಟಣ್ ಎಂದು ನೆಗೆಯುತ್ತ, ಒಂದು ಐದ್ಹತ್ತು ನಿಮಿಷದಲ್ಲಿ ಇದ್ದ ಹಣ್ಣುಗಳನ್ನೆಲ್ಲ ತಿಂದು ನೆಲ ಸಾಫ್ ಮಾಡಿ ಜಾಗ ಖಾಲಿ ಮಾಡುತ್ತಿದ್ದವು ಅವು. ಬೇಗ ಎದ್ದು ಹೋಗಿ, ಕದ್ದು ಕೂತು ನೋಡಿದಾಗಲಷ್ಟೇ ಈ ಮನೋಹರ ದೃಶ್ಯ ಲಭ್ಯವಾಗುತ್ತಿತ್ತು. &lt;br /&gt;ಇನ್ನು ಏಕಮುಖವಾಗಿ ಎತ್ತರಕ್ಕೆ ಬೆಳೆವ ಕಣಗಿಲು ಮರದ ಕೆಳಗೂ ಅಷ್ಟೇ. ರಾತ್ರಿಯಿಡೀ ಬಿದ್ದಿರುತ್ತಿದ್ದ ಅರಿಶಿಣ ಬಣ್ಣದ, ಗೋಲಿ ಗಾತ್ರದ ಹಣ್ಣುಗಳನ್ನು ತಿನ್ನಲು ಬೆಳಿಗ್ಗೆ ಹಿಂಡುಗಟ್ಟಲೇ ಜಿಂಕೆಗಳು ಬರುತ್ತಿದ್ದವು. ಅವುಗಳ ಕಾಲ್ತುಳಿತ, ಕಾದಾಟದಿಂದಾಗಿ ಹಣ್ಣಿನ ಸುಗ್ಗಿಯ ಕಾಲದಲ್ಲಿ ಆ ಮರಗಳ ಅಡಿಯ ನೆಲ ಈಗಷ್ಟೇ ಕೆತ್ತಿದ ಹಾಗೆ ಇರುತ್ತಿತ್ತು. ಸುತ್ತಲ ನೆಲವೆಲ್ಲ ಎಳೆ ಹುಲ್ಲು, ಗರಿಕೆ ಚಿಗುರುಗಳಿಂದ ನಳನಳಿಸುತ್ತಿದ್ದರೆ ಕಣಗಿಲು ಮರದಡಿ ವೃತ್ತದಾಕಾರದಲ್ಲಿ ಕಾಲುದಾರಿಯಷ್ಟು ಬೋಳಾಗಿರುತ್ತಿತ್ತು ನೆಲ. &lt;br /&gt;ವಿಪರ್ಯಾಸವೆಂದರೆ ಕಣಗಿಲು, ಅತ್ತಿ ಹಣ್ಣುಗಳ ಮೇಲಿನ ಈ ಮೋಹವೇ ಜಿಂಕೆಗಳಿಗೆ ಬಹಳಷ್ಟು ಸಲ ಡೆತ್ ಟ್ರ್ಯಾಪ್ ಆಗುತ್ತಿತ್ತು. ಹನುಮಾಪುರದ ಬಹುಸಂಖ್ಯಾತ ಜನರಿಗೆ ಜಿಂಕೆ ಮಾಂಸವೆಂದರೆ ಅದೇನು ಪ್ರೀತಿಯೋ! ಕಣ್ಣಿಗೆ ಬಿದ್ದ ಯಾವೊಂದು ಜಿಂಕೆಯನ್ನೂ ಅವರು ಬದುಕಗೊಡುತ್ತಿರಲಿಲ್ಲ. ಕಾಡಿನೊಳಗಣ ಜಿಂಕೆ ಬೇಟೆಯ ವಿದ್ಯಮಾನ ನಮಗೆ ತಿಳಿಯುತ್ತಿರಲಿಲ್ಲ ನಿಜ, ಆದರೆ ನಮ್ಮ ಮನೆಯ ಆಸುಪಾಸಿನಲ್ಲೇ ಎಷ್ಟೋ ಬಾರಿ ನಮ್ಮ ಕಣ್ಣೆದುರೇ ಆ ಜನ, ಮತ್ತವರ ನಾಯಿಗಳು ಜಿಂಕೆ ಹಿಡಿದಾಗ ನಮಗೆ ತೀರಾ ವ್ಯಥೆಯಾಗುತ್ತಿತ್ತು.&lt;br /&gt;ಹಲವು ಸಲ ಊರವರ ನಾಯಿಗಳು ಬೆನ್ನು ಹತ್ತಿದಾಗ ಜಿಂಕೆಗಳು ದಾರಿ ತಪ್ಪಿ ನಮ್ಮ ಕಂಪೌಂಡ್ನೊಳಗೆ ನುಗ್ಗುತ್ತಿದ್ದವು. ಅವು ಎತ್ತಲಿಂದ ಬಂದವು, ಎತ್ತ ಓಡಿದವು ಅಥವಾ ಎಲ್ಲಿ ಅಡಗಿವೆ ಎಂದು ನಮಗೆ ಗೊತ್ತಿದ್ದರೂ, ಆ ನಾಯಿಗಳ ಒಡೆಯರು ಬಂದು ಕೇಳಿದಾಗ ನಾವು ಜಿಂಕೆ ಅಲ್ಲಿ ಬಂದಿಲ್ಲ ಎಂದೇ ವಾದಿಸುತ್ತಿದ್ದೆವು. 'ಅಮ್ಮಾರು/ಹೆಗಡೇರು ಬಿಡ್ರೀ, ನೀವು ಸುಳ್ಳ್ ಹೇಳಾಕ್ಹತ್ತೀರಿ' ಎಂದು ಅವರು ಗೊಣಗಿಕೊಂಡರೂ, ಒಳನುಗ್ಗಿ ಹುಡುಕಾಡುವ ಧಾರ್ಷ್ಟ್ಯ ತೋರುತ್ತಿರಲಿಲ್ಲ. ಅತ್ತ ಆ ಜಿಂಕೆಯ ಪ್ರಾಣ ಉಳಿದುಕೊಂಡರೆ, ಇತ್ತ ಒಂದು ಬಡಜೀವ ಬದುಕಿಸಿದ ಧನ್ಯತಾಭಾವ ನಮ್ಮಲ್ಲಿ ಉಳಿದುಕೊಳ್ಳುತ್ತಿತ್ತು. ಆದರೆ ಹಲವು ಸಲ ನಮ್ಮ ನಾಯಿಗಳು ಬೊಗಳಿ, ಆ ಜಿಂಕೆಯನ್ನು ಇನ್ನಷ್ಟು ಬೆದರಿಸಿ, ಅದು ಹೊರ ಓಡುವಂತೆ ಮಾಡಿ ನಮ್ಮೆಲ್ಲಾ ಪ್ರಯತ್ನಗಳನ್ನೂ ಮಣ್ಣುಗೂಡಿಸುತ್ತಿದ್ದವು. ಅಂಥ ದಿನ ನಮ್ಮ ನಾಯಿಗಳಿಗೆ ಕಡ್ಡಾಯ ಉಪವಾಸದ ಶಿಕ್ಷೆ.&lt;br /&gt;ಒಮ್ಮೆ ಹೀಗಾಯ್ತು: ಬೇಸಿಗೆಯ ಆ ದಿನ ಊರಿನ ಸುಮಾರು 20-25 ಜನ ನಮ್ಮನೆಯೆದುರಿನ ಕೆರೆಯಲ್ಲಿ ಮೀನು ಹಿಡಿಯಲು ಜಮಾಯಿಸಿದ್ದರು. ಅವರೊಂದಿಗೆ ಅವರ ಹೆಂಡಿರು-ಮಕ್ಕಳು, ನಾಯಿಗಳ ಗದ್ದಲವೂ ಸೇರಿತ್ತು. ಇತ್ತ ಅವರು ಮೀನು ಬೇಟೆಯಲ್ಲಿ ತೊಡಗಿದ್ದಾಗ ಅವರ ನಾಯಿಗಳು ಕಾಡಿಗೆ ನುಗ್ಗಿದವು. ಅಲ್ಲೊಂದು ನತದೃಷ್ಟ ಜಿಂಕೆ ಅವುಗಳ ಕಣ್ಣಿಗೆ ಬಿತ್ತು, ಸರಿ ಅದನ್ನು ಬೆನ್ನತ್ತಿದವು. ತಪ್ಪಿಸಿಕೊಳ್ಳಲು ಎರ್ರಾಬಿರ್ರಿ ಓಡಿದ ಜಿಂಕೆ ಸೀದಾ ನಮ್ಮ ಬೇಲಿಯೊಳಗೆ ನುಗ್ಗಿತು. ಮನುಷ್ಯರನ್ನಾದರೆ ನಾವು ತಡೆಯಬಹುದಿತ್ತು. ಆದರೆ ನಾಯಿಗಳಿಗೆ ನಮ್ಮ ಮಾತು ಪಾಲಿಸಬೇಕಾದ ಭಿಡೆ ಇಲ್ಲವಲ್ಲ, ಅವು ಹಿಂದೆಯೇ ನುಗ್ಗಿದವು. ದಿಕ್ಕುಗಾಣದ ಜಿಂಕೆ ಅಲ್ಲಿ ಇಲ್ಲಿ ಓಡಿ, ಕೊನೆಗೆ ನಮ್ಮ ತೋಟದ ಬೇಲಿ ದಾಟಿ, ಅದಕ್ಕೆ ಹೊಂದಿಕೊಂಡಿದ್ದ ಕೆರೆ ಏರಿ ಪ್ರವೇಶಿಸಿತು. ಅದರ ದುರಾದೃಷ್ಟಕ್ಕೆ ಅಲ್ಲಿ ಊರಿನ ಹೆಂಗಸರು, ಮಕ್ಕಳು ಇದ್ದರು. ಅವರು ಛೂಗುಟ್ಟಿ ಅದನ್ನು ಇನ್ನಷ್ಟು ಕಂಗೆಡಿಸಿದರು. ಬೆದರಿದ ಈ ಹರಿಣಿ ಬೇರೆ ಮಾರ್ಗವೇ ಇಲ್ಲದೇ, ಸೀದಾ ಎದುರಿನ ಕೆರೆಗೆ ನುಗ್ಗಿತು. ಮೊದಲೇ ಕ್ಷೀಣಿಸಿದ್ದ ಕೆರೆಯ ನೀರು ಮೀನು ಹಿಡಿಯುವವರ ಭರಾಟೆಯಿಂದಾಗಿ ಕೆಸರುಗಟ್ಟಿತ್ತು. ಅದು ಆ ಹೆದರಿದ ಹುಲ್ಲೆಯ ದುರಂತ ನಾಟಕದ ಕೊನೆಯ ವೇದಿಕೆಯಾಯ್ತು. ಜಿಂಕೆ ಕೆರೆಗೆ ಹಾರುತ್ತಲೇ ಮೀನು ಹಿಡಿಯುತ್ತಿದ್ದವರೆಲ್ಲ ವೃತ್ತಾಕಾರವಾಗಿ ಅದನ್ನು ಸುತ್ತುವರೆದರು. ಕೆಸರು ನೀರಿನಲ್ಲಿ ಈಜಲು ವಿಫಲ ಯತ್ನ ನಡೆಸುತ್ತಿದ್ದ ಅದನ್ನು ಸಮೀಪಿಸಿದ ಅವರು, ಅದರ ಕೋಡು ಹಿಡಿದು, ಬಲವಂತವಾಗಿ ಅದರ ಮೊಗವನ್ನು ಕೆಸರಲ್ಲಿ ಮುಳುಗಿಸಿ, ಉಸಿರು ಗಟ್ಟಿಸಿ....... &lt;br /&gt;ಮೂರು ನಿಮಿಷ ಒದ್ದಾಡಿದ ಆ ನಾಲ್ಕು ಹೊಳಪು ಕಾಲುಗಳು ಮರು ನಿಮಿಷದಲ್ಲಿ ನಿಶ್ಚಲವಾದವು. ಜಿಂಕೆ ಬೇಲಿ ದಾಟಿ ಕೆರೆ ಏರಿಗೆ ನುಗ್ಗಿದಾಗಿನಿಂದ 'ಅಯ್ಯೋ, ಅದಕ್ಕೇನೂ ಮಾಡಬೇಡ್ರೋ, ಅದನ್ನು ಬಿಟ್ಟು ಬಿಡ್ರೋ' ಎಂದು ಅಂಗಲಾಚುತ್ತಿದ್ದ, ಕೂಗುತ್ತಿದ್ದ, ಗದರಿಸುತ್ತಿದ್ದ ಅಮ್ಮನ ಕಂಠವೂ ದನಿಯನ್ನು ಕಳೆದುಕೊಂಡಿತು. ಕಣ್ಣೆದುರೇ ಕಿರಾತ ನರ್ತನ ಮಾಡಿದ ಕ್ರೌರ್ಯ, ನನ್ನ, ಅಣ್ಣ-ಅಕ್ಕನ ಕಾಲುಗಳನ್ನು ಕಂಪನದ ಕೇಂದ್ರಗಳನ್ನಾಗಿ ಮಾಡಿತ್ತು. ನಮ್ಮ ಎಳೆಯ ಮನಗಳಿಗೆ ಆ ಘಟನೆ ನೀಡಿದ ಹೊಡೆತ ಅಪಾರ.&lt;br /&gt;ಊರಿಗೆ ವಿದ್ಯುತ್ ಬಂದ ಮೇಲಂತೂ ಅಕ್ರಮ ವಿದ್ಯುತ್ ಬೇಲಿಗಳಿಗೆ ಸಿಕ್ಕು ಸತ್ತ ಜಿಂಕೆಗಳೆಷ್ಟೋ. ಒಮ್ಮೆ ಅಪ್ಪ-ಅಮ್ಮ-ಪುಟ್ಟ ಮರಿಜಿಂಕೆಯ ಸುಂದರ ಸಂಸಾರವೊಂದು ನಮ್ಮ ಮನೆ ಸುತ್ತ ಅಲ್ಲಿ ಇಲ್ಲಿ ಸುಳಿದಾಡುತ್ತ, ಮೇಯುತ್ತ ಸಂತಸ ಮೂಡಿಸಿತ್ತು. ಆದರೆ ಭತ್ತ ತೆನೆಗಟ್ಟುತ್ತಿದ್ದ ಆ ಸಮಯದಲ್ಲಿ ಅವುಗಳ ಇರುವಿಕೆ ಬಹುಶಃ ಸುತ್ತಲ ಹೊಲಗಳ ರೈತರಿಗೇನೂ ಸಂತಸ ಉಕ್ಕಿಸಿರಲಿಕ್ಕಿಲ್ಲ. ಒಂದು ಮುಂಜಾನೆ, 'ಇಂಥವನ ಹೊಲದಂಚಿಗೆ ಒಂದು ಜಿಂಕೆ ಕರೆಂಟ್ ತಾಗಿ ಸತ್ತು ಬಿದ್ದಿದೆಯಂತೆ' ಎಂದು ಅಪ್ಪ ಸುದ್ದಿ ತಂದ. ನಾನೂ ಅವನೊಟ್ಟಿಗೆ ನೋಡಲು ಹೋದೆ. ಕೊಬ್ಬಿದ ಮೈಯ ಹೆಣ್ಣು ಜಿಂಕೆಯೊಂದರ ದೇಹ ಅಲ್ಲಿತ್ತು. ಅದು ಬಹುಶಃ ನಮಗೆಲ್ಲ ಮುದ ನೀಡಿದ ಆ ಬಾಣಂತಿ ಜಿಂಕೆಯೇ ಇರಬೇಕು. ಅದರ ತುಂಬಿದ ಕೆಚ್ಚಲು, ಅನಾಥವಾಗಿರಬಹುದಾದ ಆ ಮರಿ ಜಿಂಕೆಯ ನೆನಪನ್ನು ಮೂಡಿಸಿ ಮನಸ್ಸನ್ನು ಭಾರವಾಗಿಸಿತು.&lt;br /&gt;ಮತ್ತೊಂದು ಪ್ರಸಂಗ: ಒಂದಿನ ಕಾಡಿನ ಕಡೆಯಿಂದ ಲಗುಬಗೆಯಿಂದ ಬಂದ ಅಪ್ಪ, ಮನೆ ಬಳಿ ಏನೋ ಮಾಡುತ್ತಿದ್ದ ನನ್ನನ್ನು, ಅಮ್ಮನನ್ನು ಕರೆದು, 'ನಮ್ಮ ಗದ್ದೆಯಂಚಿನ ಅಗಳ(ಕಾಲುವೆ)ದಲ್ಲಿ ಒಂದು ಜಿಂಕೆ ಅಡಗಿ ಕೂತಿದ್ದು. ಬೇಕಾದ್ರೆ ಸದ್ದು ಮಾಡದೇ ಹೋಗಿ ನೋಡಿ ಬನ್ನಿ' ಎಂದ. ನಮಗೆ ಕುತೂಹಲ- 'ಎಲ್ಲಿತ್ತು, ಎಲ್ಲಿಂದ ಬಂತು'- ಇತ್ಯಾದಿ ಪ್ರಶ್ನೆಗಳಿಗೆ ಮೊದಲಿಟ್ಟೆವು. 'ಈಗ ಆನು ಕಾಡಿಂದ ಬರಬೇಕಾದ್ರೆ ಬೂಬಣ್ಣನ ನಾಯಿ ಅದನ್ನು ಬೆನ್ನಟ್ಟಿ ಬಂತು. ಅದು ಬಂದು ಅಗಳ ಇಳತ್ತು. ಹಿಂದಿಂದ ಕೂಗ್ತಾ ಬಂದ ನಾಯಿನ್ನ ಆನು ಬೆದರಿಸಿ ದೂರ ಕಳ್ಸಿದ್ದಿ' ಎಂದ ಅಪ್ಪ. 'ಬೂಬಣ್ಣ ಇದ್ದಿದ್ನಿಲ್ಯ' ನಾವು ಕೇಳಿದೆವು. 'ಅಂವ ಸ್ವಲ್ಪ ಹೊತ್ತು ಬಿಟ್ಟು ಬಂದ. ಜಿಂಕೆ ಬಗ್ಗೆ ವಿಚಾರಿಸ್ದ. ಆನು ಗೊತ್ತಿಲ್ಲೆ ಅಂದಿ. ಅಂವ ತನ್ನ ನಾಯಿನ್ನ ಕೂಗ್ತಾ ಊರ ಕಡೆಗೆ ಹೋದ' ಎಂದ. ನನಗೆ ಅನುಮಾನ- 'ಜಿಂಕೆ ಇನ್ನೂ ಅಲ್ಲಿರ್ತ' ಎಂದೆ. 'ಗೊತ್ತಿಲ್ಲೆ, ಆದರೆ ನಾಯಿ ಬಾಯಿ ಹಾಕಿತ್ತಕ್ಕು, ಅದರ ಕಾಲಿಗೆ ಸಣ್ಣ ಗಾಯ ಆಜು. ಹಂಗಾಗಿ ಅಲ್ಲೇ ಇದ್ರೂ ಇದ್ದಿಕ್ಕು' ಎಂದ ಅಪ್ಪ. &lt;br /&gt;ನಾನು, ಅಮ್ಮ ಗಡಿಬಿಡಿಯಿಂದ ಅತ್ತ ಧಾವಿಸಿದೆವು. ಮನದಣಿಯೆ ಜಿಂಕೆಯನ್ನು ನೋಡಲು ಹೋದ ನಮ್ಮ ಕಣ್ಣಿಗೆ ಕಂಡಿದ್ದು ಮಾತ್ರ ಎಂಥ ಭೀಭತ್ಸ ದೃಶ್ಯ!! ಅಗಳಕ್ಕೆ ಇಳಿದಿದ್ದ ಬೂಬಣ್ಣನ ಕೈಯಲ್ಲಿ ರಕ್ತಸಿಕ್ತ ಚಾಕು. ಜಿಂಕೆಯ ಕುತ್ತಿಗೆ ಮುಕ್ಕಾಲು ಭಾಗ ಕತ್ತರಿಸಿ ಹೋಗಿತ್ತು. ಕತ್ತರಿಸಿದ ಕತ್ತಿನಿಂದ ಧಾರಾಕಾರ ಸುರಿಯುತ್ತಿದ್ದ ರಕ್ತ ಕಪ್ಪು ನೆಲವನ್ನು ಕೆಂಪಗೆ ತೋಯಿಸಿತ್ತು. ಅದರ ಉರುಟು ಕುತ್ತಿಗೆಯೊಳಗಿನ ಪೊಳ್ಳಿನಿಂದ ಪ್ರವಹಿಸುತ್ತಿದ್ದ ರಕ್ತಧಾರೆ, ಮಳೆಗಾಲದಲ್ಲಿ ಬಾಳೇಸರದ ಝರಿಗಳಲ್ಲಿ ಧುಮ್ಮಿಕ್ಕುತ್ತಿದ್ದ ಕೆನ್ನೀರಿನ ಪ್ರವಾಹವನ್ನು ಆ ಕ್ಷಣ ನೆನಪಿಸಿತು ನನಗೆ. 'ಯಂಥಕ್ಕೆ ಅದರ ಕುತ್ತಿಗೆ ಕಡಿದ್ಯ ಬೂಬಣ್ಣ, ಬಿಟ್ಟಿದ್ರೆ ಎಲ್ಲಾದರೂ ಬದುಕ್ಯತ್ತಿತ್ತು' ಆಕ್ಷೇಪಿಸಿದಳು ಅಮ್ಮ. 'ನಾ ಕಡೀಲಿಲ್ಲಾಂದ್ರೂ ಅದು ಏನೂ ಬದುಕಂಗಿರಲಿಲ್ಲ ಅಮ್ಮಾರೇ, ನಮ್ಮ ನಾಯಿ ಅದರ ಕಾಲಿಗೆ ಗಾಯ ಮಾಡಿತ್ತು' ಎಂದನಾತ.&lt;br /&gt;ಜಿಂಕೆ ಇತ್ತ ಬಂದಿಲ್ಲ ಎಂದು ಅಪ್ಪ ಹೇಳಿದ ಮೇಲೆ ಆತ ಮುಂದೆ ಸಾಗಿದ್ದನಂತೆ. ಅಷ್ಟರಲ್ಲಿ ಅವನ ನಾಯಿ ಜಿಂಕೆಯ ಸೂಟು ಹಿಡಿದು ವಾಪಸ್ ಬಂದು ಕೂಗಲಾರಂಭಿಸಿತಂತೆ. ಜಿಂಕೆ ಎದ್ದು ಓಡಬೇಕೆನ್ನುವಷ್ಟರಲ್ಲಿ ಅಲ್ಲಿ ಬಂದ ಬೂಬಣ್ಣ, ಅದು ಓಡದಂತೆ ಅದರ ಮುಂಗಾಲಿನ ಮೂಳೆಯನ್ನು ಲಟಕ್ಕೆಂದು ಮುರಿದನಂತೆ- ಅದನ್ನಾತ ಹೆಮ್ಮೆಯಿಂದ ಹೇಳಿಕೊಂಡ. 'ನಮ್ ಮಂದ್ಯಾಗ ನಾವ ಅದಕ್ಕ ಚಾಕು ಹಾಕಲಿಲ್ಲಾಂದ್ರ ತಿನ್ನಂಗಿಲ್ರೀ, ಅದ್ಕ ಅದರ ಕುತ್ಗೀ ಕೊಯ್ದೆ' ಎಂದ ಬೂಬಣ್ಣ, ಅಷ್ಟೊತ್ತಿಗೆ ಅಸು ನೀಗಿದ್ದ ಜಿಂಕೆಯ ಕಳೇಬರವನ್ನು ಹೊತ್ತೊಯ್ಯಲು ಅಣಿಯಾದ. ಜಿಗುಪ್ಸೆ ಹುಟ್ಟಿ ವಾಕರಿಕೆ ಬಂದಂತಾಗಿದ್ದರಿಂದ ನಾನು, ಅಮ್ಮ ಮನೆಯತ್ತ ಓಡಿದೆವು.&lt;br /&gt;ಈಚಿನ ವರ್ಷಗಳಲ್ಲಿ ಮನೆ ಸುತ್ತಲಿನ ಕಾಡೆಲ್ಲ ಒತ್ತುವರಿಯಾಗಿ ಭತ್ತ, ಹತ್ತಿ ಬೆಳೆವ ಗದ್ದೆಯಾಗಿ ಮಾರ್ಪಟ್ಟ ನಂತರ ಜಿಂಕೆಗಳ ಈ ಒಡನಾಟ ಅಪರೂಪವಾಗಿ ಬಿಟ್ಟಿದೆ. ಹಿಂದೆ ತಮ್ಮದಾಗಿದ್ದ ನೆಲದತ್ತ ಇಂದು ಕಣ್ಣೆತ್ತಿ ನೋಡಲೂ ಭಯ ಬೀಳುತ್ತಿರಬೇಕು ಅವು. ಇತ್ತ ನಾವೂ ನಗರಾಭಿಮುಖಿಗಳಾಗಿ ಬೆಳೆದೆವಲ್ಲ. ಆದರೂ ಅಪರೂಪಕ್ಕೊಮ್ಮೆ ಬನ್ನೇರು ಘಟ್ಟಕ್ಕೋ, ಇನ್ಯಾವುದೋ ವನ್ಯಧಾಮಕ್ಕೋ ಹೋದಾಗ, ಅಲ್ಲಿ ಕಣ್ಣಳತೆ ಅಗಲದ ಜಾಗದಲ್ಲಿ, ಕಬ್ಬಿಣದ ಬೇಲಿಯೊಳಗೆ ಭರ್ತಿಯಾದ ಹರಿಣಗಳ ಹಿಂಡನ್ನು ನೋಡಿದಾಕ್ಷಣ, ನನ್ನೂರಿನ ಅಡವಿಗಳಲ್ಲಿ ವಿಸ್ತಾರವಾಗಿ ವಿಹರಿಸುತ್ತಿದ್ದ ಆ ಚಂಚಲನೇತ್ರ ಚಿತ್ತಾಪಹಾರಿಗಳ ನೋಟ ನಯನದೆದುರು ನರ್ತಿಸುತ್ತದೆ.&lt;br /&gt;ನನ್ನೂರಿನ ಸುತ್ತ ಈಗ ಬಾಳಲು ಬೇಕಾದ ಅನುಕೂಲತೆ, ಅನಿವಾರ್ಯತೆ ಜಿಂಕೆಗಳಿಗಿಲ್ಲ. ಬಾಳಿಸುವ ಬದ್ಧತೆ ಜನರಿಗಿಲ್ಲ. ಹಾಗಾಗಿ ಮೊದಲಿದ್ದ ಎಡೆಗಳಲ್ಲಿ ಇಂದು ಅವುಗಳ ಬಾಳುವೆಯೇ ಇಲ್ಲ. &lt;br /&gt;&lt;br /&gt;(ಪ್ರಜಾವಾಣಿಗೆ ಧನ್ಯವಾದ ಹೇಳುತ್ತ.....)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-5191006437164881634?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/5191006437164881634/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/01/blog-post_22.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/5191006437164881634'/><link rel='self' type='application/atom+xml' href='http://www.blogger.com/feeds/4309049398760149221/posts/default/5191006437164881634'/><link rel='alternate' type='text/html' href='http://kaanadani.blogspot.com/2009/01/blog-post_22.html' title='ಅರೆರೆ.... ಚಿಗರೆ!!'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>2</thr:total></entry><entry><id>tag:blogger.com,1999:blog-4309049398760149221.post-1824595729497653551</id><published>2009-01-08T20:02:00.002-05:00</published><updated>2009-01-08T20:11:59.834-05:00</updated><category scheme='http://www.blogger.com/atom/ns#' term='ಮೌನ ದನಿ'/><title type='text'>ನನ್ನೊಳಗಿನ ನಾನು</title><content type='html'>ನನ್ನೊಳಗಿನ ನಾನು ಕಗ್ಗಂಟು&lt;br /&gt;ಒಳಹೊಕ್ಕು ಯಾರೂ ಬಿಡಿಸಲಾರರು&lt;br /&gt;ಗಟ್ಟಿ ಕವಚದ ಒಳಗೆ ಸಿಹಿ ತಿರುಳುಂಟು&lt;br /&gt;ಬಿಡಿಸಿ ಯಾರೂ ಸವಿಯಲಾರರು&lt;br /&gt;&lt;br /&gt;ನನ್ನ ಮಾಡಿದರು ಒಂದು ಕೀಲುಗೊಂಬೆ&lt;br /&gt;ಕೂಡ್ರೆಂದರೆ ಕೂರಲು, ನಿಲ್ಲೆಂದರೆ ನಿಲ್ಲಲು&lt;br /&gt;ಒಲ್ಲದೇ ಹೋದಾಗ ನಾ&lt;br /&gt;ಕಾದಿತ್ತು ಮೊನಚು ತಿರಸ್ಕಾರ ಸೊಲ್ಲು ಸೊಲ್ಲಲೂ&lt;br /&gt;&lt;br /&gt;ನನ್ನ ಕಡು ಕೋಪ, ನೇರ ನುಡಿ&lt;br /&gt;ಸುತ್ತೆಲ್ಲ ಜನರ ನಾಲಿಗೆಗೆ ಆಹಾರ&lt;br /&gt;ಸುಡು ಕೋಪದ ಹಿಂದೆ ಮಿಡಿವ ಹೃದಯವುಂಟು&lt;br /&gt;ಕಾಣುವ ಕಣ್ಣಿಗೆ ಮಾತ್ರ ಬರವೋ ಬರ&lt;br /&gt;&lt;br /&gt;ನನ್ನ ಸರಳ ಸ್ನೇಹ ಇವರ ಮನಕ್ಕೆ ತಟ್ಟದು&lt;br /&gt;ಆಡಂಭರದ ಕೆಳೆಗೆ ಈ ಮನ ಒಪ್ಪದು&lt;br /&gt;ಇರಬಹುದೇನೋ ಹಾಗಾಗಿ ನಾನೊಬ್ಬ ಒಂಟಿಸಲಗ&lt;br /&gt;ಹಾಗಂತ ಇವರೆಲ್ಲ ಪಿಸುನುಡಿವರು ಆಗಾಗ&lt;br /&gt;&lt;br /&gt;ನಾನಲ್ಲ ಬಿಳಿಹಾಳೆ, ಜೀವವುಂಟು ನನ್ನಲಿ&lt;br /&gt;ಭೋರ್ಗರೆಯುತ ಧುಮುಕುತ್ತಿಹ ಭಾವವುಂಟು ಎದೆಯಲಿ&lt;br /&gt;ನವಚೈತ್ರದ ಹೊಸ ಚಿಗುರಿಗೆ ಕಾಯುವೆನು ಸತತ&lt;br /&gt;ಹೊಂಬೆಳಕಿನ ಮುಂಜಾವೆ ಬಳಿ ಬಾ, ಇದೋ ಸ್ವಾಗತ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-1824595729497653551?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/1824595729497653551/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/01/blog-post_08.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/1824595729497653551'/><link rel='self' type='application/atom+xml' href='http://www.blogger.com/feeds/4309049398760149221/posts/default/1824595729497653551'/><link rel='alternate' type='text/html' href='http://kaanadani.blogspot.com/2009/01/blog-post_08.html' title='ನನ್ನೊಳಗಿನ ನಾನು'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-6627463231302111637</id><published>2009-01-08T02:49:00.003-05:00</published><updated>2009-01-08T02:53:44.803-05:00</updated><title type='text'></title><content type='html'>ನಮಸ್ಕಾರ ಸ್ನೇಹಿತರೆ,&lt;br /&gt;ಸ್ಥಳ ಬದಲಾವಣೆಯ ಕಾರಣ ಕೆಲವು ದಿನಗಳಿಂದ ಯಾವುದೇ ಬರಹವನ್ನು ಇಲ್ಲಿ ಪ್ರಕಟಿಸಲಾಗಿರಲಿಲ್ಲ. ಕ್ಷಮೆ ಇರಲಿ. ಇನ್ನು ಮುಂದೆ ಮತ್ತೆ ಎಂದಿನಂತೆ ನಾನು, ನನ್ನ ಬರಹ ಮತ್ತು ನೀವು ಭೇಟಿಯಾಗುತ್ತಿರೋಣ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-6627463231302111637?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/6627463231302111637/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2009/01/blog-post.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/6627463231302111637'/><link rel='self' type='application/atom+xml' href='http://www.blogger.com/feeds/4309049398760149221/posts/default/6627463231302111637'/><link rel='alternate' type='text/html' href='http://kaanadani.blogspot.com/2009/01/blog-post.html' title=''/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>1</thr:total></entry><entry><id>tag:blogger.com,1999:blog-4309049398760149221.post-688783547662703709</id><published>2008-12-23T16:53:00.001-05:00</published><updated>2008-12-23T16:56:10.469-05:00</updated><category scheme='http://www.blogger.com/atom/ns#' term='ಕಾಡು ಕಾಡ್ತು'/><title type='text'>ಬೆಚ್ಚಿದ್ದು, ಬೆದರಿದ್ದು, ಹುಲಿ ಬಾಯಿಗೆ ಬಿದ್ದಿದ್ದು....</title><content type='html'>ಕಾಡಿನೊಂದಿಗೆ ಅವಿನಾಭಾವ ನಂಟು ಬೆಳೆಯಲು ನಮ್ಮ ಮನೆಯ ದನಕರುಗಳೂ ಸ್ವಲ್ಪ ಮಟ್ಟಿಗೆ ಕಾರಣವಾಗಿದ್ದವು. ಬೆಳಿಗ್ಗೆ ಗೋಲೆಗೆ ಬಿಟ್ಟ ದನಗಳು ಒಟ್ಟಾಗಿ ಕಾಡಿಗೆ ಹೋಗುವುದು, ಸಂಜೆ ಐದು, ಐದೂವರೆಯಾಗುತ್ತಿದ್ದಂತೆಯೇ ತಾವಾಗಿ ಶಿಸ್ತಿನಿಂದ ಮನೆಗೆ ಮರಳುತ್ತಿದ್ದುದಷ್ಟೇ ಮೊದಮೊದಲು ನನಗೆ ಗೊತ್ತಿದ್ದ ವಿದ್ಯಮಾನ. &lt;br /&gt;ದಿನಾ ತಪ್ಪದೇ ಕಾಡಿಗೆ ಹೋಗಿ ಬಂದು ಮಾಡುತ್ತಿದ್ದ ಆಕಳುಗಳ ಪೈಕಿ ಯಾವುದೋ ಒಂದು ಅಕಸ್ಮಾತ್ ಒಂದಿನ ಮನೆಗೆ ಮರಳಲಿಲ್ಲವೆಂದರೆ ಅಪ್ಪನಿಗೆ ಆತಂಕ ಶುರುವಾಗುತ್ತಿತ್ತು. ಅಲ್ಲಿಗೆ ಶೋಧನಾ ಕಾರ್ಯಾಚರಣೆ ಆರಂಭ. ಮೊದಲು ಹನುಮಾಪುರ ಊರಿಗೆ ಹೋಗಿ, ಅಲ್ಲಿನ ದನಗಳ ಜೊತೆಗೇನಾದರೂ ಸೇರಿದೆಯೋ ಎಂಬ ಹುಡುಕಾಟ. ಅಲ್ಲಿ ಸಿಕ್ಕಿತೆಂದರೆ ನಿರಾಳತೆ. ಸಿಗದಾಗ ಆ ಮೂರು ಸಂಜೆಯ ಹೊತ್ತಿನಲ್ಲಿ ಅಲ್ಲಿ, ಇಲ್ಲಿ, ಮನೆ ಸುತ್ತಲ ಕಾಡಿನಲ್ಲಿ ಹುಡುಕಾಟ ಶುರು.&lt;br /&gt;ರಾತ್ರಿ ದಟ್ಟವಾಗಿ ಕವುಚಿಕೊಂಡು ಕಾಡನ್ನೆಲ್ಲ ಆವರಿಸಿಕೊಳ್ಳುವವರೆಗೂ ಅಪ್ಪ, ಗೋಪಾಲಣ್ಣನಿಂದ ಶೋಧ ಮುಂದುವರೆಯುತ್ತಿತ್ತು. ಕತ್ತಲೆಯ ಕವಚವನ್ನು ಸೀಳಿಕೊಂಡು ಮುನ್ನುಗ್ಗುವ ಟಾರ್ಚ್, ಸೂಡಿ ಬೆಳಕುಗಳ ಜೊತೆಗೆ, ನಿಶಾಚರಿ ಹಕ್ಕಿ, ಕೀಟಗಳ, ಮಳೆ ಜಿರಲೆಗಳ ಮೊರೆತದೊಂದಿಗೆ ಇವರ 'ಅಂಬಾ..... ಅಮ್ಮಾ... ಶಾರದೆ/ಯಮುನೆ/ಕಾಳಿ ಎಲ್ಲಿದ್ಯೆ' ಇತ್ಯಾದಿ ಹೆಸರುಗೊಂಡ ಕರೆಗಳೂ ಬೆರೆಯುತ್ತಿದ್ದವು. ಅಷ್ಟಾಗಿಯೂ ಸಿಗಲಿಲ್ಲವೆಂದರೆ ಹತ್ತು-ಹತ್ತೂವರೆಯ ಸುಮಾರಿಗೆ ನಿರಾಶ ಭಾವ ಹೊತ್ತು ಮರಳುತ್ತಿದ್ದರು. ಕುತ್ತಿಗೆ ಉದ್ದ ಮಾಡಿ ಕಾಯುತ್ತಿದ್ದ ಅಮ್ಮನಿಗೆ ಅವರ ಖಾಲಿ ಕೈ, ಸೋತ ಮುಖಗಳು ಉತ್ತರ ಹೇಳುತ್ತಿದ್ದವು.&lt;br /&gt;ಗಬ್ಬದ ದನಗಳು ಕರು ಹಾಕಲು ಬಂದ ಸಂದರ್ಭದಲ್ಲಿ ಕೆಲವೊಮ್ಮೆ ಹೀಗೆ ಮನೆಗೆ ಮರಳದ ಪ್ರಸಂಗಗಳೂ ಇರುತ್ತಿದ್ದವು. ಅಕಸ್ಮಾತ್ ಆ ದನ ಸಂಜೆಯ ಹೊತ್ತಿಗೆ ಕಾಡಿನಲ್ಲೇ ಕರು ಹಾಕಿತೆಂದರೆ, ಎಳೆಗರುವನ್ನು ನಡೆಸಿಕೊಂಡು ಮನೆಗೆ ಮರಳುವುದು ಅಸಾಧ್ಯವೆನಿಸಿದ ಸಂದರ್ಭದಲ್ಲಿ ಅಲ್ಲೇ ಉಳಿಯುತ್ತಿದ್ದುದುಂಟು. &lt;br /&gt;ನಮ್ಮಮ್ಮನ ಪ್ರೀತಿಯ ಶಾರದೆ ಕಾಣೆಯಾಗಿದ್ದೂ ಇಂಥದ್ದೇ ಸಂದರ್ಭದಲ್ಲಿ. ನನಗೆ ಕಾಡಿನ ಅಗಾಧತೆಯ, ರಾಕ್ಷಸಾಕಾರದ, ರುದ್ರ ರಮ್ಯ ಸ್ವರೂಪದ ದರ್ಶನವಾದುದೂ ಇದೇ ಪ್ರಸಂಗದಿಂದಾಗಿಯೇ.&lt;br /&gt;ದಿನ ತುಂಬಿದ್ದ, ಎರಡನೇ ಬಾರಿ ಗಬ್ಬಿದ್ದ ಶಾರದೆ ಸಂಜೆ ಮರಳಿರಲಿಲ್ಲ. ಮುಸ್ಸಂಜೆಯಿಂದ ಅರ್ಧರಾತ್ರಿವರೆಗೆ ನಡೆಸಿದ ಹುಡುಕಾಟ ಫಲ ನೀಡಿರಲಿಲ್ಲ. ಮರುದಿನ ಬೆಳಿಗ್ಗೆಯೇ ಮತ್ತೆ ಒಂದೊಂದು ದಿಕ್ಕು ಹಿಡಿದು ಒಬ್ಬೊಬ್ಬರು ಹೊರಟಾಗ ನಾನು, ಅಕ್ಕ ಸಹ ಅಪ್ಪನೊಂದಿಗೆ ಹೊರಟೆವು.&lt;br /&gt;ಕಾಡಿನ ಆ ಹರವು ನಮ್ಮ ಮನೆಯಿಂದ ತುಂಬಾ ದೂರದ್ದೇನಲ್ಲ. ಮನೆಯ ಹಿಂದಿದ್ದ ವಿಸ್ತಾರ ಗದ್ದೆ ಬಯಲಿನಂಚಿನಿಂದ ಅದು ಶುರುವಾಗುತ್ತಿತ್ತು. ಆದರೆ ನಾನು, ಅಕ್ಕ ಅದನ್ನು ಹೊಕ್ಕಿದ್ದು ಅದೇ ಮೊದಲು. ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಬೆಳೆದ ಬೃಹತ್ ಮರಗಳು, ರಟ್ಟೆಗಾತ್ರದ ಬಳ್ಳಿಗಳು, ಭಯ ಹುಟ್ಟಿಸುವಂಥ ಬಿದಿರು ಮೆಳೆಗಳು.... ಸೊಳ್ಳೆ, ಜೀರುಂಡೆ, ಜೇನುಗಳ ಗುಂಜಾರವ.... ಕೆಸರು, ಹುಳು, ಕಣ್ಣಿಗೆ ಕಾಣದಿದ್ದರೂ ತಲೆಯನ್ನು ತುಂಬಿಕೊಂಡ ಹಾವು, ಹುಲಿಗಳ ಭೀತಿಯ ಭೂತ..., ಒಂದೊಂದು ಕೈಯನ್ನು ಒಬ್ಬೊಬ್ಬರು ಬಿಗಿಯಾಗಿ ಹಿಡಿದುಕೊಂಡಿದ್ದರೂ ನಾವಂತೂ ಪ್ರತಿಯೊಂದು ಚಿಕ್ಕ ಸದ್ದಿಗೂ ಬೆಚ್ಚಿ ಬೀಳುತ್ತಿದ್ದೆವು. 'ಅಂಬಾ... ಅಂಬೆ... ಶಾರದೆ ಎಲ್ಲದ್ಯೇ?...'ಗಳ ನಡುವೆಯೇ ಅಪ್ಪ ನಮಗೆ ಇದು 'ದಿಂಡಲ ಮರ- ನಂದಿಯ ಹತ್ತಿರದ ಜಾತಿ, ಇದು ಹಲವು ಮಕ್ಕಳ ತಾಯಿ ಗಿಡ- ಇದರ ಗೆಡ್ಡೆ ಕಿತ್ತು ದನಗಳಿಗೆ ತಿನ್ನಿಸಿದರೆ ಹಾಲು ಜಾಸ್ತಿಯಾಗ್ತು' ಎಂದೆಲ್ಲ ವಿವರಿಸುತ್ತ ನಡೆದ. ಸುಮಾರು ಒಂದು ತಾಸು ತಿರುಗಿದ ಮೇಲೆ ಒಂದೆಡೆ ನಮ್ಮಿಬ್ಬರನ್ನೂ ಬಲವಾದ ಬಳ್ಳಿಯ ಜೋಕಾಲಿ ಮೇಲೆ ಕೂಡ್ರಿಸಿ ಮನೆಯಿಂದ ಕಟ್ಟಿಕೊಂಡು ಬಂದಿದ್ದ ಬಾಳೆಹಣ್ಣು, ನೀರು ಕೊಟ್ಟ.&lt;br /&gt;ಐದ್ಹತ್ತು ನಿಮಿಷ ಸುಧಾರಿಸಿಕೊಂಡ ಮೇಲೆ ಮತ್ತೆ ಶಾರದೆ ಶೋಧ ಶುರು. ಮಧ್ಯಾಹ್ನ ಮುಗಿಯುತ್ತ ಬಂದು, ನೆತ್ತಿ ಕತ್ತಿ ಉರಿಯುವವರೆಗೂ ಹುಡುಕಿ ಸುಸ್ತಾದ ಮೇಲೆ ಜೋಲು ಮೋರೆ ಹೊತ್ತು ವಾಪಸ್ಸಾದೆವು.&lt;br /&gt;ಮಧ್ಯಾಹ್ನ ಊಟದ ನಂತರ ಅಪ್ಪ ಮತ್ತಿತರರು ಮತ್ತೆ ಹುಡುಕಾಟ ನಡೆಸಿದರು. ನಾನು, ಅಣ್ಣ-ಅಕ್ಕ ಮನೆಯೆದುರಿನ ಕೆರೆಯಂಗಳದಲ್ಲಿ, ಅದನ್ನು ಆವರಿಸಿದ್ದ ಕಳ್ಳಿ ಮಟ್ಟಿಗಳಲ್ಲಿ, ಅಲ್ಲಿ ಇಲ್ಲಿ ನಮ್ಮಿಂದಾದ ಮಟ್ಟಿಗೆ ಹುಡುಕಿದೆವು. ಈ ಶೋಧ ಹೀಗೆ ಐದಾರು ದಿನ ನಡೆಯಿತು. ನಡುನಡುವೆ ಭಟ್ಟರಿಂದ ಭವಿಷ್ಯ ಕೇಳಿದ್ದು, ನೋಟ ನೋಡಿಸಿದ್ದು, ಯಾರ್ಯಾರೋ ಸ್ವಯಂಘೋಷಿತ ತಂತ್ರಗಾರರೆಲ್ಲ ಬಂದು 'ನಿಮ್ಮ ದನ ಇಂಥಲ್ಲೇ ಇದೆ, ಮುಂಡಗೋಡು ದಾಟಿ ಹೋಗಿದೆ, ಹುಬ್ಬಳ್ಳಿಯಿಂದ ಎಂಟು ಕಿಮೀ ಪಶ್ಚಿಮಕ್ಕಿದೆ....' ಎಂದೆಲ್ಲಾ ಹೇಳಿ ಹೋಗಿದ್ದಾಯಿತು.&lt;br /&gt;ಆವತ್ತು ಭಾನುವಾರ. ಶಾರದೆ ಕಳೆದು ಆವತ್ತಿಗೆ ಎಂಟನೇ ದಿನ. ಬೆಳಿಗ್ಗೆ ತಿಂಡಿ ತಿಂದವರೇ ಅಪ್ಪ ಮತ್ತು ಒಂದಿಬ್ಬರು ಆಳುಗಳು ಒಂದು ಸುತ್ತು ಹುಡುಕಾಟ ನಡೆಸಲು ಹೊಳೆಯ ಬಳಿ ತೆರಳಿದ್ದರು.&lt;br /&gt;ಬೆಳಿಗ್ಗೆ ಹತ್ತು ಗಂಟೆಯ ಹೊತ್ತು. ಮನೆಯೆದುರಿನ ಕೆರೆ ಏರಿ ಮೇಲೆ ಏನೋ ಗದ್ದಲ ಕೇಳಿಸಿತು. ನಾನು, ಅಮ್ಮ, ಅಕ್ಕ ಎಲ್ಲ ಹೊರಬಂದೆವು. ಅಪ್ಪ, ಅಣ್ಣ, ಆಳುಗಳು ಗುಂಪುಗೂಡಿ ಬರುತ್ತಿದ್ದರು. ಆಳೊಬ್ಬನ ಕೈಯಲ್ಲಿ ಆಕಳೊಂದರ ಮುಖದ ಕೋಡುಸಹಿತ ಮೂಳೆ, ಅಪ್ಪನ ಹೆಗಲ ಮೇಲೆ ಬಸವಳಿದ ಒಂದು ಎಳೆಗರು... ಅಪ್ಪ ಏನೂ ಹೇಳುವುದೇ ಬೇಕಾಗಿರಲಿಲ್ಲ. ಕೋಡುಗಳನ್ನು ನೋಡುತ್ತಿದ್ದಂತೆಯೇ ಅಮ್ಮ 'ಅಯ್ಯೋ, ಶಾರದೆ ಹೋತಕ್ಕಲೇ' ಎಂದು ಕೂಗಿಕೊಂಡಳು.&lt;br /&gt;ನಮ್ಮೆಲ್ಲರ ಒಳಗೂ ಮೂಡಿದ್ದ ಅವ್ಯಕ್ತ ಭಯ ನಿಜವಾಗಿತ್ತು. ಶಾರದೆ ಹುಲಿಗೆ ಬಲಿಯಾಗಿತ್ತು. ಮೇಯಲು ಹೋಗಿದ್ದ ಅದು ಬಹುಶಃ ಸಂಜೆಯ ಹೊತ್ತಿಗೆ ಹೊಳೆಯ ಅಂಚಲ್ಲಿ ಕರು ಹಾಕಿತ್ತು. ಕರುವಿಗೆ ಕಷ್ಟವಾದೀತೆಂದು ಅಲ್ಲೇ ಉಳಿಯಿತು ಕೂಡ. ಮೊದಲೇ ಹೊಳೆಯಂಚು... ಹುಲಿ ಓಡಾಡುವ ಜಾಗ. ಆ ರಾತ್ರಿಯೇ ಅದು ಹುಲಿಗೆ ಬಲಿಯಾಗಿದ್ದಿರಬೇಕು. ಹುಲಿ ಮತ್ತು ಆಕಳ ನಡುವೆ ಕಾದಾಟ ನಡೆದಿದ್ದಕ್ಕೆ ಕುರುಹುಗಳೂ ಅಲ್ಲಿದ್ದವಂತೆ.&lt;br /&gt;ಆಶ್ಚರ್ಯವೆಂದರೆ ಹುಲಿಗೆ ಬಹುಪ್ರಿಯ ಬೇಟೆಯಾಗಲಿದ್ದ ಎಳೆಗರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದು. ಕಾದಾಟ ನಡೆದ ಸ್ಥಳದಿಂದ ಸುಮಾರು ಹತ್ತು ಮಾರು ದೂರದಲ್ಲಿ, ಹಳ್ಳದ ಎಡಧರೆಯ ಮೇಲೆ ಇಳಿಜಾರಿನಲ್ಲಿದ್ದ ಒಂದು ಭಾರಿ ಬಿದಿರು ಮಟ್ಟಿಯ ಸಂಧಿಯಲ್ಲಿ ಈ ಕರು ಸಿಕ್ಕಿಕೊಂಡಿತ್ತಂತೆ. ಅದರ ಅದೃಷ್ಟಕ್ಕೆ ಅದು ಎಂಟು ದಿನ ಹಾಲಿಲ್ಲದೇ ಬದುಕಿತ್ತು, ಬಹುಶಃ ಬಿದಿರು ಮಟ್ಟಿಯ ಪಾದ ಮುಟ್ಟಿ ಹೋಗುತ್ತಿದ್ದ ಹೊಳೆಯ ನೀರನ್ನೇ ಕುಡಿದುಕೊಂಡಿತ್ತೇನೋ. ಕೂಗುವ ಶಕ್ತಿ ಇಲ್ಲದಿದ್ದರೂ, ಜೀವಚ್ಛವವಾಗಿ ಮಟ್ಟಿಯ ಒಳಗೆ ಮುಚ್ಚಿಹೋದಂತಿದ್ದರೂ ಅಪ್ಪ ಮತ್ತಿತರರ ಕಣ್ಣಿಗೆ ಬಿದ್ದಿತ್ತು.&lt;br /&gt;ಹೋದ ದನವಂತೂ ಹೋಯಿತು, ಘನಾ ಹೆಣ್ಣುಕರು ಉಳಿದಿದೆ, ಅದನ್ನಾದರೂ ಚೆನ್ನಾಗಿ ಬೆಳೆಸೋಣ ಎಂದರು ಅಪ್ಪ-ಅಮ್ಮ ಭಾರಿ ಜತನ ಮಾಡಿದರು. 'ಗೌರಿ' ಎಂದು ಶಾರದೆಯ ತಾಯಿಯ ಹೆಸರನ್ನೇ ಅದಕ್ಕಿಟ್ಟು, ಬೇರೆ ಹಸುಗಳ ಹಾಲನ್ನು ಧಾರಾಳವಾಗಿ ಗೊಟ್ಟದಲ್ಲಿ ಎತ್ತಿ ಕುಡಿಸಿದರು. ಅನ್ನದ ತಿಳಿ, ಬೂಸಾದ ಗಂಜಿ.... ಏನೇನೋ ಉಪಚಾರ ಬೇರೆ. ಆದರೆ ಅವನ್ನೆಲ್ಲ ಜೀರ್ಣಿಸಿಕೊಳ್ಳುವುದು ಹೋಗಲಿ, ಅವನ್ನು ತಿನ್ನಬೇಕು, ಕುಡಿಯಬೇಕು ಎಂಬ ಕಲ್ಪನೆಯನ್ನು ಜೀರ್ಣಿಸಿಕೊಳ್ಳಲು ಕೂಡ ಆ ಅನಾಥ ಕರುವಿಗೆ ಬಹುಶಃ ಸಾಧ್ಯವಾಗಲಿಲ್ಲ. ವಾರೊಪ್ಪತ್ತಿನಲ್ಲಿ ಅದೂ ತನ್ನ ತಾಯನ್ನು ಸೇರಿಕೊಂಡಿತು.&lt;br /&gt;ಮತ್ತೆ ಕೆಲವು ವರ್ಷಗಳ ನಂತರ ಕಸ್ತೂರಿ ಎಂಬ ಆಕಳು ಕಳೆದಾಗಲೂ ನಾವೆಲ್ಲ ಹೀಗೆ ಕಾಡುಮೇಡು ಸುತ್ತಿ ಹುಡುಕಿದ್ದೇ ಹುಡುಕಿದ್ದು. ಆದರೆ ಆಗ ಕಾಡು ಮೊದಲಿನಷ್ಟು ಅಪರಿಚಿತವಾಗಿ ಉಳಿದಿರಲಿಲ್ಲ ನನಗೆ. ಕಾಡಿನ ಕುರಿತಾದ ಮುಗ್ಧ ಕುತೂಹಲ, ಆರಾಧನಾ ಭಾವ ಮೊದಲಿನಷ್ಟಿರಲಿಲ್ಲ. ನಮ್ಮ ಮನೆಯ ಸುತ್ತಲಿದ್ದ ಕಾಡೂ ಮೊದಲಿನಷ್ಟು ದಟ್ಟವಾಗುಳಿದಿರಲಿಲ್ಲ. ಹಾಗಂತ ಆ ಎಕ್ಸ್ಪೆಡಿಷನ್ ನನ್ನಲ್ಲಿ ಆಸಕ್ತಿ, ಕಾತರ ಮೂಡಿಸಿರಲಿಲ್ಲ ಎಂದಲ್ಲ, ಕಾಡಿನ ಸಾಂಗತ್ಯಕ್ಕೆ ತೆರೆದುಕೊಳ್ಳುವುದಕ್ಕೆ ನಾನು ಎವರ್ರೆಡಿ.&lt;br /&gt;ಕಸ್ತೂರಿಯನ್ನೇನೂ ಹುಲಿ ಒಯ್ದಿರಲಿಲ್ಲ. ಸುತ್ತ ಎಂಟು ದಿಕ್ಕುಗಳಲ್ಲಿ ನಾವು ಅದರ ಜಾಡು ಅರಸಿ ಅಲೆಯುತ್ತಿದ್ದರೆ, ಅದು ಮನೆಯೆದುರಿನ ಕೆರೆಯಂಗಳದಲ್ಲೇ ಅಸಹಾಯಕವಾಗಿ ಬಿದ್ದಿತ್ತು. ಬಿರು ಬೇಸಿಗೆಯಿಂದಾಗಿ ಕೆರೆಯಂಗಳ ತೀವ್ರವಾಗಿ ಬಿರುಕು ಬಿಟ್ಟಿತ್ತು. ಜೊತೆಗೆ ಕಳ್ಳಿ ಗಿಡಗಳೂ ಒತ್ತೊತ್ತಾಗಿ ಬೆಳೆದು ಜಡಕುಗಟ್ಟಿದ್ದವು. ಇಂಥದ್ದೊಂದು ಕಳ್ಳಿ ಟ್ರಾಪ್ನಲ್ಲಿ ಸಿಕ್ಕಿಕೊಂಡ ಕಸ್ತೂರಿ ಬಹುಶಃ ಹೊರಬರಲು ಒದ್ದಾಡುತ್ತಿದ್ದಾಗ ಬಿರುಕೊಂದರಲ್ಲಿ ಅದರ ಕಾಲು ಸಿಕ್ಕಿಕೊಂಡು, ಮೊಣಕಾಲಿಗಿಂತ ಕೆಳಗೆ ಅಕ್ಷರಶಃ ಲಟಕ್ಕೆಂದು ಮುರಿದುಹೋಗಿ, ಹೆಜ್ಜೆ ಮುಂದಿಡುವುದಿರಲಿ, ಮುರಿದ ಕಾಲನ್ನು ಬಿರುಕಿನಿಂದ ಬಿಡಿಸಿಕೊಳ್ಳುವುದಕ್ಕೂ ಆಗದೇ ಆ ದನ ಅಲ್ಲೇ ವಾರಗಟ್ಟಲೇ ಇತ್ತು. ಹುಲ್ಲು, ನೀರು ಇಲ್ಲದೇ ಕೂಗಲೂ ಆಗದ ಸ್ಥಿತಿ ತಲುಪಿತ್ತು ಅದು. ನಮಗಂತೂ ಹೋಗಲಿ, ನಮ್ಮ ನಾಯಿಗಳಿಗೂ ಅದರ ಸೂಟು ಸಿಕ್ಕಿರಲಿಲ್ಲ. ಆದರೆ ಹದ್ದುಗಳೆಂಬ ಪತ್ತೆದಾರರ ಸೂಕ್ಷ್ಮದೃಷ್ಟಿಗೆ ಅದು ಬಿದ್ದು, ಅವು ಅದರ ಮೇಲೆರಗಲು ಕಾಯುತ್ತ ಆಕಾಶದಲ್ಲೇ ಗಿರಗಟ್ಟೆ ಹೊಡೆಯುತ್ತಿದ್ದುದನ್ನು ಕಂಡು ಅನುಮಾನಗೊಂಡ ಯಾರೋ ಹೋಗಿ ಸ್ಥಳ ಪರಿಶೀಲನೆ ನಡೆಸಿ, ನಮಗೆ ಸುದ್ದಿ ಮುಟ್ಟಿಸಿ...... ಅಂತೂ ಪತ್ತೆಯಾಯಿತು ಕಸ್ತೂರಿ. ಆದರೆ ನಂತರದಲ್ಲಿ ಅದು ಶಾಶ್ವತವಾಗಿ ಆ ಕಾಲನ್ನು, ಜೊತೆಗೆ 'ಕಸ್ತೂರಿ' ಎಂಬ ಸುಂದರ ಹೆಸರನ್ನು ಕಳೆದುಕೊಂಡು 'ಕುಂಟಿ' ಆಯ್ತು.&lt;br /&gt;ಹುಲಿಯ ಬಾಯಿಗೆ ಸಿಕ್ಕ ನಮ್ಮನೆಯ ಆಕಳು, ಹೋರಿಗಳು ಒಂದೆರಡಲ್ಲ. ಕರಿಯಮ್ಮ, ಯಮುನೆ, ಕಾಳಿ, ಹಂಡ..... ಪ್ರತಿ ಬಾರಿ ಒಂದು ಆಕಳನ್ನೋ, ಹೋರಿ, ಕರುವನ್ನೋ ಕಳಕೊಂಡಾಗ ನಮ್ಮಲ್ಲೆಲ್ಲ ವಿಷಾದ ಭಾವ. ಬೆಳಿಗ್ಗೆ ದನಗಳ ಗೋಲೆಯನ್ನು ಕಾಡಿಗೆ ಬಿಡುವಾಗ ವಿಪರೀತ ದುಗುಡ. ಸಂಜೆ ಅವು ವಾಪಸ್ಸಾಗುವವರೆಗೂ ತಳಮಳ. ಕೆಲ ದಿನ ಅಷ್ಟೇ. 20-25 ದನಕರುಗಳಿದ್ದ ಕೊಟ್ಟಿಗೆಯಲ್ಲಿ 2-3 ತಿಂಗಳಿಗೊಮ್ಮೆ ಹೊಸ ಕರು ಹುಟ್ಟುತ್ತಿತ್ತು. ಹೊಸ ಚಿಗುರನ್ನು ಕಣ್ತುಂಬಿಕೊಳ್ಳುವ ಭರದಲ್ಲಿ ಹಳೆ ಎಲೆ ಬಿದ್ದು ಹೋದ ವ್ಯಥೆ ಹಳತಾಗಿ ಬಿಡುತ್ತಿತ್ತು.&lt;br /&gt;ನಮ್ಮನೆಯಿಂದ ಸ್ವಲ್ಪ ದೂರದಲ್ಲಿದ್ದ 'ಮೊಸಳೆಗುಂಡಿ' ಎಂಬ ಜಾಗಕ್ಕೆ ನಾವು ಬೇಸಿಗೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದುದುಂಟು. ದಟ್ಟ ಕಾಡ ನಡುವಲ್ಲಿದ್ದ ಆ ಜಾಗ ಹೆಚ್ಚುಕಮ್ಮಿ ನಿರ್ಜನ, ನೀರವವಾಗಿರುತ್ತಿದ್ದರೂ, ಸದಾಕಾಲ ಇರುತ್ತಿದ್ದ ನೀರು ಬೇಸಿಗೆಯಲ್ಲಿ ಜನ-ದನಕರುಗಳನ್ನು, ವನವಾಸಿಗಳನ್ನು ಬರಮಾಡಿಕೊಳ್ಳುತ್ತಿತ್ತು. ಊರಿನ ದನಕರುಗಳ, ಗೌಳೇರ ಎಮ್ಮೆಗಳ, ಜಿಂಕೆ, ನರಿ, ನಾಯಿಗಳ ನೀರಡಿಕೆ ನೀಗಿಸುತ್ತಿದ್ದ ಮೊಸಳೆಗುಂಡಿ, ಆ ಕಾರಣದಿಂದಾಗಿಯೇ ಹುಲಿ, ಕಿರುಬಗಳ ಹಸಿವೆಯನ್ನೂ ಹಿಂಗಿಸುತ್ತಿತ್ತು. ಆ ಹಳ್ಳದ ದಂಡೆಯಲ್ಲಿ, ಮರಳು ಹಾಸುಗಳ ಮೇಲೆ ಅಲ್ಲಲ್ಲಿ ಬಿದ್ದಿರುತ್ತಿದ್ದ ಹುಲಿಯ ಮಲವನ್ನು ಅಪ್ಪ ನಮಗೆ ತೋರಿಸುತ್ತಿದ್ದ. ಒಣಗಿದ ಮಲವನ್ನು ಕೋಲಿನಿಂದ ಕೆದರಿದರೆ ಅದರಲ್ಲಿ ದನಕರುಗಳ ಬಾಲದ ಕೂದಲ ಜೊಂಪೆ, ಸೆಡೆದುಕೊಂಡ ಚರ್ಮದ ಚೂರುಗಳು ಕಂಡು ಬರುತ್ತಿದ್ದವು. ಅದನ್ನು ನೋಡಿದ ನಮ್ಮಲ್ಲಿ 'ಇದು ಯಾವ ಗೌಳಿಯ ಎಮ್ಮೆಯಾಗಿತ್ತೋ, ಯಾರ ಮನೆಯ ದನವಾಗಿತ್ತೋ, ಅಕಸ್ಮಾತ್ ನಮ್ಮ ಶಾರದೆ/ಸೀತೆ/ಹಂಡಿಯದೇ ಕೂದಲೇನೋ' ಎಂಬ ಕುತೂಹಲಭರಿತ ವಿಷಾದ.&lt;br /&gt;ಪ್ರತಿ ದೀಪಾವಳಿಯಲ್ಲಿ ದನಗಳ ಬೆನ್ನ ಮೇಲೆ ಕೆಮ್ಮಣ್ಣು, ಶೇಡಿಯ ಚಿತ್ತಾರ ಬರೆದು 'ಬೆಚ್ಚಡಾ, ಬೆದರಡಾ, ಹುಲಿ ಬಾಯಿಗೆ ಬೀಳಡಾ' ಎಂದು ಹರಸಿ, ಜೊತೆಗೆ ಹುಲಿಯಪ್ಪನ ಕಲ್ಲಿಗೆ ದನಕ್ಕೊಂದರಂತೆ ಕಾಯಿ ಒಡೆದು ಬೇಡಿಕೊಂಡರೆ ಮನೆ ಮಂದಿಗೆಲ್ಲ ನಿಶ್ಚಿಂತ ಭಾವ.&lt;br /&gt;ಹರಕೆ ಕಾಯ್ದಿತೋ, ಹುಲಿಯಪ್ಪ ಕಾಯ್ದನೋ ಇಲ್ಲಾ 'ಗೋ ಹತ್ಯಾ ದೋಷ'ದಲ್ಲಿ ಪಾಲು ಬೇಡವೆಂದ ಕಾಡು ತಾನೇ ಹಿಂದೆ ಸರಿದುಕೊಂಡು, ಹುಲಿಯನ್ನೂ ಅಡಗಿಸಿತೋ, ಅಂತೂ ಹತ್ತು ವರ್ಷಗಳಿಂದೀಚೆಗೆ ನಮ್ಮ ಯಾವ ದನಕರುವೂ ಹುಲಿಯ ಪಾಲಾಗಿಲ್ಲ. ಈಗಂತೂ ಕಾಡು ಯಾವ ಪರಿ ಖಾಲಿಯಾಗಿದೆಯೆಂದರೆ ಮುಂದೆ ಇಂಥ ಪ್ರಸಂಗ ಬರುವ ಸಂಭವವೇ ಇಲ್ಲ. &lt;br /&gt;ನಮ್ಮ ಮನೆ, ನಮ್ಮ ದನಕರು ಎಂದಷ್ಟೇ ಯೋಚಿಸಿದರೆ ನಿರಾಳತೆ ಮೂಡುತ್ತದೆ. ವನ್ಯ ಸಂಪತ್ತು, ರಾಷ್ಟ್ರೀಯ ಪ್ರಾಣಿ ಎಂದೆಲ್ಲ ವಿಶಾಲ ಪ್ರಪಂಚದಲ್ಲಿ ಮನಸ್ಸನ್ನು ಹರಿಯ ಬಿಟ್ಟಾಗ ಅನಂತ ವಿಷಾದ ಕಣ್ಣು ಮಂಜಾಗಿಸುತ್ತದೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-688783547662703709?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/688783547662703709/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_23.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/688783547662703709'/><link rel='self' type='application/atom+xml' href='http://www.blogger.com/feeds/4309049398760149221/posts/default/688783547662703709'/><link rel='alternate' type='text/html' href='http://kaanadani.blogspot.com/2008/12/blog-post_23.html' title='ಬೆಚ್ಚಿದ್ದು, ಬೆದರಿದ್ದು, ಹುಲಿ ಬಾಯಿಗೆ ಬಿದ್ದಿದ್ದು....'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-5802419716723850751</id><published>2008-12-18T11:31:00.000-05:00</published><updated>2008-12-18T11:33:08.764-05:00</updated><category scheme='http://www.blogger.com/atom/ns#' term='ಕಾಡು ಕಾಡ್ತು'/><title type='text'>ಮನೆಯಂಗಳದ ಸಫಾರಿ-2</title><content type='html'>ಕಾಡಿನಲ್ಲಿ ಹಂದಿಗಳಂತೂ ಹುಲ್ಲಿನಷ್ಟೇ ಹುಲುಸಾಗಿದ್ದವು ಆಗ. ಅವುಗಳನ್ನು ಬೇಟೆಯಾಡಿ ತಿನ್ನುವ ಜನರೂ ಊರಿನಲ್ಲಿ ಹೇರಳವಾಗಿದ್ದರು. ಹಂದಿ ಶಿಕಾರಿ ಸಾಮಾನ್ಯ ಸಂಗತಿಯಾಗಿತ್ತು. ಹಾಗಾಗಿ ನಾನು ಹತ್ತಿರದಿಂದ ನೋಡಿದ್ದೆಲ್ಲ ಸತ್ತ ಹಂದಿಗಳನ್ನೇ. ಹಂದಿ ಹೊಡೆದು ಅದನ್ನು ಗಳುವೊಂದಕ್ಕೆ ತಲೆ ಕೆಳಗಾಗಿ ನೇತು ಹಾಕಿ ಕಟ್ಟಿ, ಮೆರವಣಿಗೆ ಸದೃಶ ಜನ ಸಮೂಹದಲ್ಲಿ ಕೊಂಡೊಯ್ಯುತ್ತಿದ್ದರೆ ನಾನು, ಅಕ್ಕ-ಅಣ್ಣ ಅಲ್ಲೇ ತೂರಿಕೊಂಡು ಹೋಗಿ ಆ ಹಂದಿಯ ಉದ್ದಗಲ, ಲಕ್ಷಣಗಳನ್ನು ಕಣ್ಣು ತುಂಬಿಕೊಂಡು ಬರುತ್ತಿದ್ದೆವು. ನಮಗಿರುತ್ತಿದ್ದುದು ಹಂದಿಯೆಡೆಗಿನ ಕುತೂಹಲ ಮಾತ್ರ. ಹಂದಿಯ 'ಶವಯಾತ್ರೆ'ಯಲ್ಲಿ ಭಾಗವಹಿಸಿದ ಇತರರಿಗೆಲ್ಲ ಕೊಂದವರ ಕೃಪೆಯನುಸಾರ ಅಷ್ಟೋ ಇಷ್ಟೋ ಮಾಂಸ ಲಭ್ಯವಾದರೆ, ನಮಗೆ ಕೆಲವೊಮ್ಮೆ 'ಆನ್ ರಿಕ್ವೆಸ್ಟ್' ಹಂದಿಯ ಬಿರುಗೂದಲಿನ ಪುಟ್ಟ ಗುಚ್ಛ ಸಿಗುತ್ತಿತ್ತು. ಅದಕ್ಕೆ ತಂತಿ ಬಿಗಿದು ಜಮೆಕಟ್ಟು ತಯಾರಿಸುತ್ತಿದ್ದ ಅಪ್ಪ, ದೇವರ ಮೂರ್ತಿಗಳನ್ನು ತಿಕ್ಕಿ ತೊಳೆಯಲು ಅದನ್ನು ಬಳಸುತ್ತಿದ್ದ.&lt;br /&gt;ಅಣ್ಣನಿಗಂತೂ ಹಂದಿಗಳ ವಿಷಯದಲ್ಲಿ ಅಕ್ಕ-ನನಗಿಂತ ವಿಶೇಷ ಆಸಕ್ತಿ ಇತ್ತು. ಹೊಲದಲ್ಲಿ ಬೆಳೆ ಬರುವ ಸಮಯದಲ್ಲಿ ಅಪ್ಪ ಮಾಳ ಕಾಯಲು ಹೊರಟರೆ ಆತನೂ ಹಠ ಮಾಡಿ ಹೊರಡುತ್ತಿದ್ದ. ಮಾಳ ಎಂದರೆ ರಾತ್ರಿ ಹೊಲ ಕಾಯಲು ಮಾಡಿಕೊಂಡ 'ತ್ರಿಶಂಕು' ವ್ಯವಸ್ಥೆ. ಸ್ವಲ್ಪ ಎತ್ತರದ ಜಾಗದಲ್ಲಿ ನಾಲ್ಕು ಕವೆಗಳು ಹುಗಿದು, ಅದರ ಮೇಲೆ ಬಿದಿರಿನ ತಟ್ಟಿ ಕಟ್ಟಿ, ಬಿಳೆಹುಲ್ಲಿನ ಮುಚ್ಚಿಗೆ ಹೊದೆಸಿ, ಆ ತಟ್ಟಿಯ ಒಂದು ಅಂಚಿಗೆ ಹೊಂಚ ಮಣ್ಣು ಹಾಸಿ, ಬೆಂಕಿ ಉರಿಸಲು ಸಿದ್ಧತೆ ಮಾಡಿಕೊಂಡರೆ ಮಾಳ ರೆಡಿ. ಒಬ್ಬರು ಮಲಗುವಷ್ಟು ಜಾಗವೂ ಮಾಳದಲ್ಲಿ ಇರುತ್ತಿತ್ತು.&lt;br /&gt;ಮೂರು ಸಂಜೆಯ ಹೊತ್ತಿಗೆ ಮಾಳದ ಮಣ್ಣಿನ ಹಾಸಿನ ಮೇಲೆ ನಾಲ್ಕು ಕಟ್ಟಿಗೆ ಇಟ್ಟು ಬೆಂಕಿ ಹೊತ್ತಿಸಿ ಬರುತ್ತಿದ್ದ ಅಪ್ಪ-ಗೋಪಾಲಣ್ಣ, ರಾತ್ರಿ ಊಟವಾದ ನಂತರ ಟಾರ್ಚ್, ಲಾಟೀನು ಸಿದ್ಧವಿಟ್ಟುಕೊಂಡು ಅಲ್ಲಿಗೆ ಮಲಗಲು ಹೋಗುತ್ತಿದ್ದರು. ನಿದ್ದೆ ಬರುವ ತನಕ ರೇಡಿಯೋ ಕೇಳುತ್ತ, ಪುಸ್ತಕ ಓದುತ್ತ, ನಡುವೆ ಆಗಾಗ ಕೂಗಿ, ಛೂಗುಟ್ಟಿ ಸಂಭಾವ್ಯ ಹಂದಿ ದಾಳಿಯನ್ನು ದೂರವಿಡುತ್ತಿದ್ದರು. ರಾತ್ರಿಯೂ ಆಗಾಗ ಎದ್ದು ಛೂಗುಡುತ್ತ, ಬೆಂಕಿ ಕೆದರುತ್ತ, ಹಂದಿ ಬರುವ ಸೂಚನೆ ಸಿಕ್ಕಿದರೆ ಅತ್ತ ಟಾರ್ಚ್ ಬೆಳಕು ಬಿಟ್ಟು ಅದನ್ನು ಓಡಿಸಿ, ಅಗತ್ಯ ಬಿದ್ದರೆ ಒಂದು ಪಟಾಕಿ ಹೊಡೆದು ಬೆದರಿಸಿ..... ಅಂತೂ ಮಾಳ ಕಾಯುವುದು ನಮ್ಮ ದೃಷ್ಟಿಯಲ್ಲಿ ಬಲು ರೋಮಾಂಚಕಾರಿ ಕೆಲಸವಾಗಿತ್ತು. ಆದರೆ ವಯಸ್ಸಿನಲ್ಲಿ ಎಷ್ಟೇ ಚಿಕ್ಕವನಿದ್ದರೂ, ನನಗಿಂತ-ಅಕ್ಕನಿಗಿಂತ ಮೊದಲು ಹುಟ್ಟಿದ್ದರಿಂದ ಹಿರಿಪಟ್ಟ ಹೊತ್ತಿದ್ದ ಅಣ್ಣನಿಗೆ ಇದರಲ್ಲಿ ಪಾಲ್ಗೊಳ್ಳಲು ಇದ್ದಷ್ಟು ಅವಕಾಶ ನಮಗಿರಲಿಲ್ಲ. ನಮ್ಮ ದುರಾದೃಷ್ಟಕ್ಕೆ ನಾವು ಹಠ ಮಾಡಿ ಮಾಳಕ್ಕೆ ಹೋದ ದಿನ ಹಂದಿಗಳು ದರ್ಶನ ನೀಡುತ್ತಲೇ ಇರಲಿಲ್ಲ.&lt;br /&gt;ಎಲ್ಲಾದರೂ ನಾಲ್ಕೈದು ವರ್ಷಕ್ಕೆ ಒಮ್ಮೆ ಗಜ ಪರಿವಾರ 'ಕ್ಷೇತ್ರ ದರ್ಶನ'ಕ್ಕೆ ಆಗಮಿಸುತ್ತಿತ್ತು. ಅದರ ಧಾಂಧಲೆಯೂ ಗಜಗಾತ್ರದ್ದೇ. ಗುಂಪಿನ ನಾಯಕನ ಪುಂಡಾಟಿಕೆಗಳನ್ನು ಸಹಚರರು ನಿಷ್ಠೆಯಿಂದ ಅನುಸರಿಸುತ್ತಿದ್ದರು. ಸಾಮಾನ್ಯವಾಗಿ ದಾಂಡೇಲಿ ಅಭಯಾರಣ್ಯದಿಂದ ವಲಸೆ ಬರುತ್ತಿದ್ದ ಅವು ಕಾಡಿನ ಎಳೆ ಬಿದಿರಿನಷ್ಟೇ ಪ್ರೀತಿಯಿಂದ ನಾಡಿನ ಭತ್ತದ ಬೆಳೆಯನ್ನೂ ಮೆಲ್ಲುತ್ತಿದ್ದವು. ತೆನೆ ಕಟ್ಟುತ್ತಿದ್ದ, ಕೊಯ್ಯಲು ಸಿದ್ಧವಾದ ಅಥವಾ ಕೊಯಿಲು ಮುಗಿದು ಒಕ್ಕುವುದು ನಡೆಯುತ್ತಿದ್ದ ಗದ್ದೆಗೆ ಮೊದಲು ನಾಯಕ ಸಲಗ ನುಗ್ಗಿ ಅಧಿಪತ್ಯ ಸಾರುತ್ತಿತ್ತು. ಅದರ ಬೆನ್ನ ಹಿಂದೆಯೇ ಪರಿವಾರದ ಸದಸ್ಯಗಣ ನುಗ್ಗುತ್ತಿತ್ತು. ರಾತ್ರಿಯ ಕಾವಳದಲ್ಲಿ ಒಂದಿನಿತೂ ಸದ್ದು ಮಾಡದೇ ಹೆಜ್ಜೆಯ ಮೇಲೆ ಹೆಜ್ಜೆ ಇಡುತ್ತ ಗಜ ಬಾಂಧವರು ಕತ್ತಲೆಯ ಪರ್ವತಗಳಂತೆ ಬರುತ್ತಿದ್ದರೆ, ಕಣದಲ್ಲಿ ಗೊಣಬೆ ಹಾಕುತ್ತ, ರೂಲು ಹೊಡೆಯುತ್ತ ಇರುತ್ತಿದ್ದ ರೈತರಿಗೆ ಚಿಕ್ಕ ಸುಳಿವೂ ಇರುತ್ತಿರಲಿಲ್ಲ. ಎಷ್ಟೋ ಬಾರಿ ಮರದ ದಿಮ್ಮಿಯಂಥ ಸೊಂಡಿಲು ಬಂದು ಗೊಣಬೆಯನ್ನು ಸೆಳೆದಾಗಲೇ ಅವರಿಗೆ ಇಹದ ಅರಿವು. ಆಮೇಲೇನು? ಸುತ್ತುವರಿದ ಅತಿಥಿ ಮಹೋದಯ(ರ)ರನ್ನು ಕಂಡು ಕ್ಷಣಾರ್ಧದಲ್ಲಿ ಎಲ್ಲ ಚೆಲ್ಲಾಪಿಲ್ಲಿ. ಗೊಣಬೆಯ ಕತೆಯೂ ಅದೇ.&lt;br /&gt;ಒಮ್ಮೆ ನಮ್ಮ ಹೊಲದ ಪಕ್ಕದ ಕೃಷ್ಣಪ್ಪನ ಹೊಲದಲ್ಲಿ ಅವನ ತಾಯಿ ತಿಪ್ಪವ್ವ ಕಾವಲು ಇದ್ದಳು. ವಯಸ್ಸಾಗಿದ್ದ ಆಕೆಗೆ ಸಹಜವಾಗಿಯೇ ಒಳ್ಳೆ ನಿದ್ದೆ ಹತ್ತಿತ್ತು. ರಾತ್ರಿ ಒಂದು ಹೊತ್ತಿನಲ್ಲಿ ಕರಿರಾಯರ ತಂಡವೊಂದು ಹೊಲಕ್ಕೆ ದಾಳಿ ಇಟ್ಟಿತು. ಹೊಲ ಮೇಯುವುದಕ್ಕೆ ಮುದುಕಿಯ ಅಡ್ಡಿ ಖಂಡಿತ ಇರಲಿಲ್ಲ ನಿಜ, ಆದರೆ ಮಾಳದಲ್ಲಿ ಮಿನುಗುತ್ತಿದ್ದ ಬೆಂಕಿಯ ಕೆಂಡಗಳು ಆನೆಗಳ ಮನದಲ್ಲಿ ರೊಚ್ಚನ್ನೋ, ಕಿಡಿಗೇಡಿತನವನ್ನೋ ಜಾಗೃತಗೊಳಿಸಿರಬೇಕು. ಸರಿ, ಆ ಪೈಕಿ ಒಂದೆರಡು ಮಾಳದತ್ತ ಬಂದವು. ಒಂದು ಆನೆ ಮಾಳದ ಗೂಟ ಹಿಡಿದು ಅಲುಗಾಡಿಸಲಾರಂಭಿಸಿದರೆ, ಮತ್ತೊಂದು ಒಣಹುಲ್ಲಿನ ಮುಚ್ಚಿಗೆಯನ್ನು ಒಂದೇ ಸಾರಿಗೆ ಕಿತ್ತೆಸೆಯಿತು. ಒಳ್ಳೆ ತೊಟ್ಟಿಲು ತೂಗುವಂಥ ಅನುಭವವಾದರೂ, ಆ ವಯಸ್ಸಿನಲ್ಲಿ ಅದರ ಅಭ್ಯಾಸವಿಲ್ಲದ ತಿಪ್ಪವ್ವ ಎಚ್ಚರಗೊಂಡಳು. ಸುತ್ತ ಕತ್ತಲೆಯ ಪರದೆ- ಮಂಜುಗಣ್ಣಿನ ಮುದುಕಿಗೆ ಮೊದಲಿಗೆ ಏನೂ ಕಾಣಿಸಲಿಲ್ಲ. ಕ್ಷಣಗಳು ಕಳೆದ ಮೇಲೆ ಎರಡು ಜೋಡಿ ಕಣ್ಣುಗಳು, ಅವುಗಳಿಗೆ ಹೊಂದಿಕೊಂಡಿದ್ದ ಭಾರಿ ತಲೆಗಳು, ತೂಗಾಡುವ ತೊಲೆಗಳಂತಿದ್ದ ಸೊಂಡಿಲುಗಳು ಕಂಡವು. ಅಷ್ಟರಲ್ಲಾಗಲೇ ಒಂದು ಸೊಂಡಿಲು ತಿಪ್ಪವ್ವನಿಗೆ 'ಉಯ್ಯಾಲೆಸೇವೆ' ಸಲ್ಲಿಸಲು ಮುಂದೆ ಬಂದಿತ್ತು. ಎಲ್ಲಿತ್ತೋ ಅಷ್ಟು ಶಕ್ತಿ? ಅಪಾಯ ಗ್ರಹಿಸಿದ ಆಕೆ ಛಕ್ಕಂತ ಎದ್ದು ಕೆಳ ಜಿಗಿದಳು. 'ಹೆಗಡೇರೇ' ಎಂದು ಕೂಗುತ್ತ ಕತ್ತಲಲ್ಲಿಯೇ ನಮ್ಮ ಹೊಲದತ್ತ ಓಡಿ ಬಂದಳು. ಆಕೆಯ ಕೂಗಾಟ ಕೇಳಿ ಎಚ್ಚರಗೊಂಡ ಅಪ್ಪ ಲಗುಬಗೆಯಿಂದ ಮಾಳ ಇಳಿದು, ಎರಡೂ ಹೊಲಗಳ ನಡುವಿನ ತಂತಿಬೇಲಿಯತ್ತ ಓಡಿದ. ಆಕೆ ಅಲ್ಲಿ ಬರುತ್ತಲೇ ಆಕೆಯನ್ನು ಅನಾಮತ್ತಾಗಿ ಎತ್ತಿ ನಮ್ಮ ಹೊಲದೊಳಕ್ಕೆ ಕರೆದುಕೊಂಡ. ಆಮೇಲೆ ನಮ್ಮ ಮನೆಗೆ ಬಂದು ಬೆಚ್ಚಗೆ ಮಲಗಿದ್ದರೂ ಬೆಳತನಕ ಆಕೆಯ ಭಯ, ಕಂಪನ ಕಡಿಮೆಯಾಗಿರಲಿಲ್ಲ.&lt;br /&gt;ನಮ್ಮ ತಂತಿ ಬೇಲಿಯ ಕಂಪೌಂಡ್ ದಾಟಿ ಆನೆಗಳು ಎಂದೂ ಒಳ ಬಂದಿರಲಿಲ್ಲ. ಆದರೆ ಹೊರಗಿನಿಂದಲೇ ಸಾಧ್ಯವಾದಷ್ಟು ಕಿಡಿಗೇಡಿತನ ಮಾಡದೇ ಬಿಡಲಿಲ್ಲ. ಬೇಲಿ ಹೋಗಲಿ, ಅದಕ್ಕೆ ತಾಗಿ ಇದ್ದ ಅಗಳಕ್ಕೂ ಆಚೆಯೇ ನಿಂತು, ಅಲ್ಲಿಂದಲೇ ಸೊಂಡಿಲು ತೂರಿ, ಭತ್ತದ ಗಿಡಗಳನ್ನು ಬಾಚಿ ಬಾಚಿ ತಿಂದದ್ದು ಒಮ್ಮೆಯಾದರೆ, ಬಾಳೆಗಿಡಗಳನ್ನು ಮುರಿದು ತಿಂದದ್ದು ಮತ್ತೊಮ್ಮೆ. ಸಾಲದೆಂಬಂತೆ ಗಿಡ್ಡ ಮರದಲ್ಲಿ ಬಿಟ್ಟಿದ್ದ ತೆಂಗಿನ ಹಿಂಡಿಗೆಯನ್ನೇ ಇಳಿಸಿ ಮೆದ್ದು ಹೋಗಿದ್ದವು. ಉಂಡ ಉಪಕಾರ ಸ್ಮರಿಸಿಯೋ ಅಥವಾ ಪರಿಹಾರಾರ್ಥವಾಗಿಯೋ, ಎಲ್ಲ ಸಂದರ್ಭಗಳಲ್ಲಿಯೂ ಧಾರಾಳವಾಗಿ ಬುಟ್ಟಿಗಟ್ಟಲೇ ಲದ್ದಿ ಹಾಕಿ ಹೋಗಿದ್ದವು!!&lt;br /&gt;ಭತ್ತದ ಕೆಲಸವೆಲ್ಲ ಮುಗಿದ ಮೇಲೆ ಹಿಂಗಾರಿನ ತನಿಸು ಇದ್ದರೆ ಹಸರಣಿಗೆ (ದ್ವಿದಳ ಧಾನ್ಯ) ಹಾಕುತ್ತಿದ್ದರು ನಮ್ಮ ಹೊಲದಲ್ಲಿ. ಶೇಂಗಾ, ಉದ್ದು, ಹೆಸರು, ಕಡಲೆಗಳೆಲ್ಲ ಫಲ ಬಿಡುವ ಸಮಯದಲ್ಲಿ ಮೊಲದ ಕಾಟ ತಲೆದೋರುತ್ತಿತ್ತು. ಹಂದಿ, ಆನೆಗಳಿಗೆ ಹೋಲಿಸಿದರೆ ಇವು ಮಾಡುತ್ತಿದ್ದ ಹಾನಿ ನಗಣ್ಯ. ಆದರೂ ಉಪಟಳ ಜಾಸ್ತಿಯಾದಾಗ ಅಪ್ಪನ ತಲೆ ಕಾಯುತ್ತಿತ್ತು. ಹಾಗಂತ ಅವನೇನೂ ಅದರ ನಿಗ್ರಹಕ್ಕೆ ಕ್ರಮ ತೆಗೆದುಕೊಳ್ಳುತ್ತಿರಲಿಲ್ಲ. ಆ ಕೆಲಸವನ್ನು ಸ್ವಲ್ಪ ಮಟ್ಟಿಗೆ ನಮ್ಮ ನಾಯಿಗಳು ಮಾಡುತ್ತಿದ್ದವು. ಇನ್ನು ಎಷ್ಟೋ ಬಾರಿ ಶಿಕಾರಿ ಹುಚ್ಚಿನ ಜನರು ಬಂದು ನಮ್ಮ ಹೊಲದಲ್ಲಿ ಉಳ್ಳ ಹಾಕಲು ಅನುಮತಿ ಕೇಳಿದರೆ ಅಪ್ಪ ಮುಕ್ತವಾಗಿ ಅನುಮತಿಸುತ್ತಿದ್ದ.&lt;br /&gt;ಉಳ್ಳ ಹಾಕುವುದು ಭಾರಿ ಅಚ್ಚರಿಯ ಶಿಕಾರಿ ವಿಧ. ಕಣ್ಣ ಸೂಟಿನಲ್ಲೇ ಮೊಲ ಓಡಾಡುವ ದಾರಿ ಪತ್ತೆ ಮಾಡುತ್ತಿದ್ದ ಶಿಕಾರಿಗಳು ಮೊಣಕೈ ಉದ್ದದ ಎರಡು ಕವೆಗೂಟಗಳನ್ನು ಆ ದಾರಿಯ ಇಬ್ಬದಿಗಳಲ್ಲಿ ನೆಡುತ್ತಿದ್ದರು. ನಂತರ ಅವುಗಳನ್ನು ಸೇರಿಸಿ ಒಂದು ಸಪೂರ ತಂತಿ ಬಿಗಿದು ನಡುವಿನಲ್ಲಿ ಕುಣಿಕೆ ಹಾಕಿಡುತ್ತಿದ್ದರು. ಕುಣಿಕೆಯ ಆಚೀಚೆ ನುಸುಳಲು ಸಾಧ್ಯವಾಗದಂತೆ ಸೊಪ್ಪಿನ ಬೇಲಿ. ರಾತ್ರಿ ಮಾಮೂಲಿನಂತೆ ಬರುವ ಮೊಲ ತನಗರಿವಿಲ್ಲದಂತೆ ಕುಣಿಕೆಗೆ ಕೊರಳೊಡ್ಡುತ್ತಿತ್ತು. ಅಪಾಯದ ಅರಿವಾಗಿ ಅದು ತಪ್ಪಿಸಿಕೊಳ್ಳಲು ತಿಣುಕಾಡಿದಷ್ಟೂ ನೇಣು ಬಿಗಿಗೊಳ್ಳುತ್ತಿತ್ತು. ಒಂದ್ಹತ್ತು ಪ್ರಯತ್ನದ ನಂತರ ಪ್ರಾಣಪಕ್ಷಿ ಪರಲೋಕಕ್ಕೆ ಪಯಣಿಸುವುದು ಪಕ್ಕಾ. &lt;br /&gt;ಒಮ್ಮೆ ರಾತ್ರಿ ಊಟದ ನಂತರ ಹಾಲು ಕುಡಿಯುತ್ತ, ಆಕಾಶ ನೋಡುತ್ತ ಕುಳಿತಿದ್ದೆವು. ಊರಿನ ಆಳೊಬ್ಬ ಏನೋ ಕಾರಣದಿಂದ ನಮ್ಮ ಮನೆಗೆ ಬಂದಿದ್ದ. ಆ ಸಮಯದಲ್ಲಿ ಗದ್ದೆಯ ಮಧ್ಯದಲ್ಲಿರುವ ಬಾವಿಯ ಬಳಿ ನಾಯಿಗಳು ಬೊಗಳುವುದು ಕೇಳಿತು. ಎಲ್ಲ ಆ ಕಡೆಗೆ ಹೋದೆವು. ಅದು ಕಲ್ಲು ಕಟ್ಟಿದ ಭಾರಿ ಅಗಲದ ನೆಲ ಮಟ್ಟದ ಬಾವಿ. ನಮ್ಮ ಎರಡೂ ನಾಯಿಗಳು ಅದರ ದಡದ ಮೇಲೆ ನಿಂತು ಕೆಳಗೆ ಇಣುಕಿ ಕೂಗುತ್ತಿದ್ದವು. ನಾಯಿಗಳನ್ನು ಅನುಸರಿಸಿ ಇಣುಕಿ ನೋಡಿದಾಗ ನಮಗೆ ಬೆಳದಿಂಗಳ ಆ ನಿಚ್ಚಳ ಬೆಳಕಿನಲ್ಲಿ ಬಾವಿಯೊಳಗೆ ಈಜುತ್ತಿದ್ದ ಮೊಲವೊಂದು ಕಾಣಿಸಿತು. ಹಸರಣಿಗೆ ತಿನ್ನಲು ಬಂದಿದ್ದ ಅದು ಬಹುಶಃ ನಾಯಿಗಳು ಬೆನ್ನಟ್ಟಿದ್ದೇ ಗಾಬರಿ ಬಿದ್ದು ಓಡ ಹೋಗಿ ಬಾವಿಯೊಳಗೆ ಬಿದ್ದಿತ್ತೇನೋ. &lt;br /&gt;ನಾವೆಲ್ಲಾ ಇಣುಕಿ ನೋಡುತ್ತ ಮಾತನಾಡಲು ಶುರು ಮಾಡಿದ್ದೇ ಅದು ಇನ್ನೂ ಗಾಬರಿ ಬಿದ್ದು, ಸರಸರ ಬಾವಿಯಗಲಕ್ಕೂ ಈಜತೊಡಗಿತು. ಅದು ಈಜುವ ರಭಸ ನೋಡಿದರೆ ಇನ್ನರ್ಧ ಗಂಟೆಯಲ್ಲಿ ಸುಸ್ತಾಗಿ ಸಾಯಬಹುದೇನೋ ಅನ್ನುವಂತಿತ್ತು. ಅದನ್ನು ಹೇಗಾದರೂ ಮಾಡಿ ಮೇಲೆ ತಂದು ರಕ್ಷಿಸಬೇಕು ಎಂದು ಅಪ್ಪ ನಿರ್ಧರಿಸಿದ. ಅಲ್ಲೇ ಸತ್ತುಬಿಟ್ಟರೆ ಬಾವಿ ನೀರು ಹಾಳಾಗುತ್ತದೆ ಎಂಬ ಕಾಳಜಿಯೂ ಇತ್ತಲ್ಲ. ಸರಿ, ಒಂದು ಅಗಲದ ಬುಟ್ಟಿಯನ್ನು ತಂದು ಹಗ್ಗ ಕಟ್ಟಿ ಕೆಳಗೆ ಇಳಿಸಿದ್ದಾಯಿತು. ಆದರೆ ಆ ಬುಟ್ಟಿಯಲ್ಲಿ ಮೊಲವನ್ನು ಸೇರಿಸುವುದು ಕಪ್ಪೆಯನ್ನು ಹಿಡಿದು ಕೊಳಗದಲ್ಲಿ ತುಂಬುವುದಕ್ಕಿಂತ ಕಷ್ಟಕರವಾಗಿತ್ತು. ಬುಟ್ಟಿಯನ್ನು ಹತ್ತಿರ ತರುತ್ತಿದ್ದಂತೆಯೇ ಅದು ಇನ್ನಷ್ಟು ಬೆದರಿ ದೂರ ಈಜುತ್ತಿತ್ತು. ಹದಿನೈದು ನಿಮಿಷ ಸತತ ಪ್ರಯತ್ನ ಮಾಡಿದರೂ ಫಲ ಸಿಗಲಿಲ್ಲ. ಬಾವಿ ಬೇರೆ ಭಾರಿ ಅಗಲವಿದ್ದುದು ಸಮಸ್ಯೆಯೇ ಆಯ್ತು. ಇನ್ನು ಕಾಲಹರಣ ಮಾಡುವುದು ಬೇಡ ಎಂದ ಅಪ್ಪ ತಾನೇ ಹಗ್ಗ ಹಿಡಿದುಕೊಂಡು ಬಾವಿ ಇಳಿದ. ಆತ ಕೆಳಗೆ ಬುಟ್ಟಿಯನ್ನು ಕೋಲಿನ ಸಹಾಯದಿಂದ ಮೊಲದತ್ತ ದೂಡಿದರೆ, ಮೇಲೆ ನಿಂತಿದ್ದ ಗೋಪಾಲಣ್ಣ ಮತ್ತು ಆಳು ಉದ್ದದ ಗಳುವನ್ನು ಇಳಿ ಬಿಟ್ಟು, ಅದು ಬೇರೆಡೆ ಹೋಗದಂತೆ ತಡೆದರು. &lt;br /&gt;ಒಂದ್ಹತ್ತು ನಿಮಿಷದ ನಂತರ ಮೊಲ ಬುಟ್ಟಿಯೊಳಕ್ಕೆ ಬಂತು. ಹಗ್ಗ ಹಿಡಿದುಕೊಂಡಿದ್ದ ಅಣ್ಣ ಸರ್ರಂತ ಬುಟ್ಟಿಯನ್ನು ಮೇಲೆ ಎಳೆದ. ಈಜಿ ಈಜಿ ಸುಸ್ತಾಗಿದ್ದ ಮೊಲಕ್ಕೆ ಬುಟ್ಟಿಯಿಂದ ಹಾರಿ ಪರಾರಿಯಾಗುವಷ್ಟು ಶಕ್ತಿ ಇರಲಿಲ್ಲ. ಅದನ್ನು ಆಗಲೆ ಬಿಟ್ಟುಬಿಟ್ಟಿದ್ದರೆ ನಮ್ಮ ನಾಯಿಗಳು ಅದನ್ನು ಬದುಕಗೊಡುತ್ತವೆಂಬ ಭರವಸೆ ಇರಲಿಲ್ಲ. ಹಾಗಾಗಿ ಬಾವಿಯ ಪಕ್ಕದಲ್ಲಿ ಹುಲ್ಲ ಮೇಲೆ ಆ ಮೊಲವನ್ನು ಬಿಟ್ಟು, ಅದರ ಮೇಲೆ ಅದೇ ಬುಟ್ಟಿಯನ್ನು ಕವುಚಿ, ಅದರ ಮೇಲೊಂದು ದೊಡ್ಡ ಕಲ್ಲು ಹೇರಿ ಇಟ್ಟ ಅಪ್ಪ. ಬೆಳಗಾಗುವ ಹೊತ್ತಿಗೆ ಅದು ಚೇತರಿಸಿಕೊಳ್ಳುವುದರಿಂದ ನಾಯಿಗಳನ್ನು ದೂರವಿಟ್ಟು ಅದನ್ನು ಬಿಟ್ಟು ಬಿಡುವ ಯೋಚನೆ ಆತನದ್ದು.&lt;br /&gt;ಸರಿ, ಬೆಳಗಾಯಿತು. ಬೇಗ ಎದ್ದ ನಾವೂ ಮೊಲವನ್ನು ಸ್ವತಂತ್ರಗೊಳಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ಹೋದೆವು. ಭಾರಿ ಉತ್ಸಾಹದೊಂದಿಗೆ ಭಾರದ ಕಲ್ಲು ಸರಿಸಿ, ಬುಟ್ಟಿಯನ್ನು ಮೇಲೆತ್ತಿ ನೋಡಿದರೆ.... ಅಲ್ಲೇನಿದೆ? ಮೊಲ ನಾಪತ್ತೆ. ನಮಗೆ ಶಾಕ್! ಆದರೂ ನಂತರದಲ್ಲಿ ಮೊಲ ಏನಾಯ್ತು ಎಂದು ತಿಳಿದುಕೊಳ್ಳುವುದು ಕಷ್ಟವಾಗಲಿಲ್ಲ. ಮೊಲವನ್ನು ರಕ್ಷಿಸುವಲ್ಲಿ ನಮಗೆ ಸಹಾಯ ಮಾಡಿದಂತೆ ನಾಟಕ ಆಡಿದ್ದ ಆಳು, ನಾವು ಅದನ್ನು ಬುಟ್ಟಿಯಲ್ಲಿ ತುಂಬಿ ಹೋಗಿ ಮಲಗಿಕೊಂಡ ನಂತರ ವಾಪಸ್ ಬಂದು ಕದ್ದುಕೊಂಡು ಹೋಗಿದ್ದ. ಅವನೇನಾದರೂ ಮತ್ತೆ ಬಂದರೆ ಅವನಿಗೆ ಚೆನ್ನಾಗಿ ಉಗಿದು ಉಪ್ಪಿನಕಾಯಿ ಹಾಕಲು ನಾನು, ಅಣ್ಣ-ಅಕ್ಕ ನಿರ್ಧರಿಸಿದೆವು. ಆದರೆ ನಮ್ಮ ರಜೆ ಮುಗಿಯುವ ತನಕ ಆತ ಇತ್ತ ಕಡೆಗೂ ಹಾಯ್ದಿರಲಿಲ್ಲ.&lt;br /&gt;ಹೆಬ್ಬಾವು, ನಾಗರ ಹಾವು, ಕಾಡೆಮ್ಮೆ, ಕ್ಯಾಸಳಿಲು, ನರಿ, ನವಿಲು..... ಕಾಡಿನ ಬಗ್ಗೆ ಅನಂತ ಕುತೂಹಲ ಮೂಡಿಸಿದ್ದ ಪ್ರಾಣಿ-ಪಕ್ಷಿಗಳು ಒಂದೆರಡಲ್ಲ. ನನ್ನ ಬಾಲ್ಯವನ್ನು ಶ್ರೀಮಂತಗೊಳಿಸಿದ್ದ ಈ ಎಲ್ಲ ಪ್ರಾಣಿಗಳ ಋಣ ಭಾರ ಹೆಗಲೇರಿದೆ. ಅದನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳೋಣ ಎಂದರೆ ಅವೀಗ ಕಾಣಿಸಿಕೊಳ್ಳೋದೇ ಕಡಿಮೆಯಾಗಿದೆಯಲ್ಲ. ಏನು ಮಾಡೋದು ನೀವೇ ಹೇಳಿ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-5802419716723850751?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/5802419716723850751/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/2.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/5802419716723850751'/><link rel='self' type='application/atom+xml' href='http://www.blogger.com/feeds/4309049398760149221/posts/default/5802419716723850751'/><link rel='alternate' type='text/html' href='http://kaanadani.blogspot.com/2008/12/2.html' title='ಮನೆಯಂಗಳದ ಸಫಾರಿ-2'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>1</thr:total></entry><entry><id>tag:blogger.com,1999:blog-4309049398760149221.post-8370472246943922050</id><published>2008-12-15T12:05:00.001-05:00</published><updated>2008-12-15T12:07:58.037-05:00</updated><category scheme='http://www.blogger.com/atom/ns#' term='ಕಾಡು ಕಾಡ್ತು'/><title type='text'>ಕಾಡು ಕಾಡ್ತು ೧: ಮನೆಯಂಗಳದ ಸಫಾರಿ</title><content type='html'>ನಾನು ಬಾಲ್ಯದ ಮೊದಲಾರು ವರ್ಷಗಳನ್ನು ಕಳೆದ ಹನುಮಾಪುರ, ಉತ್ತರ ಕನ್ನಡದ ಮುಂಡಗೋಡು ತಾಲ್ಲೂಕಿನ ಒಂದು ಕುಗ್ರಾಮ. ಆ ಸಮಯದಲ್ಲಿ ವಿದ್ಯುತ್, ಟಾರು ರಸ್ತೆ, ಬಸ್ ಸಂಪರ್ಕ ಏನನ್ನೂ ಕಾಣದ, ಶಾಲೆಯಿದ್ದೂ ಉತ್ತಮ ಶಿಕ್ಷಕರಿಲ್ಲದ ಕಾಡು ಹಳ್ಳಿ. ಹೇರಳ ಜನಸಂಖ್ಯೆ, ಧಾರಾಳ ಬಡತನ- ಇವಿಷ್ಟೇ ಆಗ ಆ ಊರಿನ ಹೆಗ್ಗಳಿಕೆ. ಅಂಥ ಪರಿಸರದ ಊರಿನಿಂದ ಸುಮಾರು ಒಂದು ಮೈಲು ದೂರದ ದೇವಗುಂಡಿ ಎಂಬಲ್ಲಿ ನಮ್ಮ ಒಂಟಿ ಮನೆ ಮತ್ತು ಜಮೀನು. ದೇವಗುಂಡಿಯಲ್ಲಿ ವಾಸವಿದ್ದರೂ ನಮ್ಮ ಮನೆಯನ್ನು ನಾವು ಹನುಮಾಪುರದ ವಿಸ್ತರಣೆ ಎಂದೇ ಗುರುತಿಸುತ್ತಿದ್ದೆವು. &lt;br /&gt;ಅಷ್ಟು ಜನಸಂಪರ್ಕ ಬಿಟ್ಟರೆ ಉಳಿದಂತೆ ಕಾಡು, ಕಾಡು ಮತ್ತು ಎಲ್ಲೆಲ್ಲೂ ಕಾಡು. ಮನೆಯ ಎದುರಿದ್ದ ದೇವಗುಂಡಿ ಕೆರೆ, ಅದಕ್ಕೆ ತಾಗಿ ಇದ್ದ ಒಂದಿಷ್ಟು ಗದ್ದೆ ಬಯಲು, ಸುಮಾರು ಒಂದೂವರೆ ಮೈಲು ದೂರದಲ್ಲಿ ಕಾಡ ನಡುವಲ್ಲಿದ್ದ ಮಾಸ್ತ್ಯಮ್ಮನ ಗುಡಿ ಮತ್ತು ಅದರ ಹೆಸರನ್ನೇ ಹೊತ್ತ ಸನಿಹದ ಹಳ್ಳ, ಕೂಲಿ ಕೆಲಸಕ್ಕೆ ಬರುತ್ತಿದ್ದ ಊರಿನ ಜನ, ಮನೆಯ ಸದಸ್ಯರಾಗಿದ್ದ ದನಕರುಗಳು, ನಾಯಿ ಬೆಕ್ಕುಗಳು- ಇವೆಲ್ಲ ನಮ್ಮ ಒಡನಾಟದ ಅವಿಭಾಜ್ಯ ಅಂಗಗಳಾಗ. ಇವಷ್ಟೇ ಅಲ್ಲದೇ ಒಂದಿಲ್ಲೊಂದು ರೀತಿಯಲ್ಲಿ ನಮ್ಮ ಬದುಕಿನೊಂದಿಗೆ ತಳಕು ಹಾಕಿಕೊಂಡಿದ್ದ ಹುಲಿ, ಕಿರುಬ, ಆನೆ, ಹಂದಿ, ಮಂಗಗಳಂತಹ ಕಾಡು ಪ್ರಾಣಿಗಳೂ ಅನಿವಾರ್ಯ ಒಡನಾಡಿಗಳೇ ಆಗಿದ್ದವು.&lt;br /&gt;ಇಲ್ಲಿ ನಾವು ಎಂದರೆ ನಾನು, ಅಪ್ಪ-ಅಮ್ಮ, ನನಗೆ ಚಿಕ್ಕಪ್ಪನಂತಿದ್ದ ಗೋಪಾಲಣ್ಣ, ಆತನ ಪತ್ನಿ ಗೌರತ್ತಿಗೆ ಮತ್ತು ಅಕ್ಟೋಬರ್, ಮೇ ರಜೆಗಳಲ್ಲಿ ನಮ್ಮನ್ನು ಸೇರಿಕೊಳ್ಳುತ್ತಿದ್ದ ಅಣ್ಣ-ಅಕ್ಕ. ಮುಂದೆ ಶಾಲೆಗೆ ಸೇರಿ ವಲಸೆಹಕ್ಕಿಯಾದ ನಾನೂ ಅಣ್ಣ-ಅಕ್ಕನವರಂತೆ ರಜಾಕಾಲದ ವಿದ್ಯಮಾನವಾದೆ. ಹನುಮಾಪುರದಿಂದ ದೂರವಾಗಿ ಎಷ್ಟೇ ಕಾಲವಾದರೂ, ಬಿಟ್ಟು ಬರುವ ಮುನ್ನ ಕಟ್ಟಿಕೊಂಡು ಬಂದ ಬುತ್ತಿ ನೆನಪುಗಳು ಇನ್ನೂ ತಾಜಾ ಇವೆ. ಬಾಲ್ಯದ ವಿವಿಧ ಹಂತಗಳಲ್ಲಿ ಅಲ್ಲಿನ ಪರಿಸರದ ಜೊತೆ ನಡೆಸಿದ ಗುದಮುರಿಗೆ, ಗೆಳೆತನಗಳ ನೆನಪೆಲ್ಲ ಇಂದಿನ ಧಾವಂತದ ಬದುಕಿನಲ್ಲೂ ಮಳೆಗಾಲದ ಹಬ್ಬಗಳಂತೆ ಪದೇ ಪದೇ ಎದುರಾಗಿ ತನಿಸು ಉಣಿಸುತ್ತಿವೆ. ನನ್ನೊಳಗಿನ ಬರಹಗಾತಿಯನ್ನು ಕಟ್ಟಿದ ಪ್ರೋಟಿನ್ಗಳು ಅವು. ಅಂಥ ನೆನಪುಗಳ ಸಂಕಲನ ಈ 'ಕಾಡು ಕಾಡ್ತು'.&lt;br /&gt;&lt;br /&gt;&lt;strong&gt;ಮನೆಯಂಗಳದ ಸಫಾರಿ&lt;/strong&gt;&lt;br /&gt;&lt;br /&gt;ಕಾಡಿನಂಚಿನಲ್ಲೇ ವಾಸಿಸುತ್ತಿದ್ದುದರಿಂದ ಅಲ್ಲಿನ ವೈವಿಧ್ಯಮಯ ಜೀವರಾಶಿ ನಮಗೆ ಅಪರಿಚಿತವಾಗಿರಲಿಲ್ಲ. ಸುಳಿವನ್ನೇ ನೀಡದೇ ಒಮ್ಮಿಂದೊಮ್ಮೆಗೆ ಪ್ರತ್ಯಕ್ಷವಾಗಿ, ನಾವು ಕಣ್ಣು ಹೊಸಕಿಕೊಂಡು ಮರು ದೃಷ್ಟಿ ಹರಿಸುವಷ್ಟರಲ್ಲಿ ಮಾಯವಾಗುತ್ತಿದ್ದ ಮಾಯಾವಿಗಳು ಹಲವಾದರೆ, ತಮ್ಮ ಉಪಟಳದಿಂದ ಶಾಶ್ವತವಾದ ತಣ್ಣನೆಯ ಭಯವನ್ನು ಮೂಡಿಸಿದ್ದ ಮೃಗಗಳು ಕೆಲವು. ಇಂದು ಮೃಗಾಲಯಗಳಿಗೆ ಸೀಮಿತವಾಗಿರುವ ಹಲವು ಅಪರೂಪದ ಜೀವಿಗಳನ್ನು ನನಗೆ, ಅಣ್ಣ-ಅಕ್ಕನಿಗೆ ಬಾಲ್ಯದಲ್ಲೇ ಪರಿಚಯಿಸಿತ್ತು ಮನೆ ಹಿಂದಿನ ಕಾಡು.&lt;br /&gt;ಆ ದಿನಗಳ ಮಟ್ಟಿಗೆ ಅತಿಕ್ರಮಣದ ಆತಂಕವಿಲ್ಲದೇ, ಕಳ್ಳ ನಾಟಾ ಧಂಧೆಯವರ ಮಿತಿ ಮೀರಿದ ಕಾಟವಿಲ್ಲದೇ ಸಮೃದ್ಧವಾಗಿ ಹಸಿರನ್ನು ಹಾಸಿ ಹರಡಿಕೊಂಡಿದ್ದ ಆ ಕಾಡಿನ ಮುಕುಟವಿಲ್ಲದ ಮಹಾರಾಜ ಹುಲಿ. ಕರಡಿ, ಕಿರುಬ, ಕಾಡುಕೋಣ/ಎಮ್ಮೆ, ಜಿಂಕೆ, ಮೊಲ, ಕಾಡುಕುರಿ/ಕೋಳಿ, ಅಳಿಲು-ಕ್ಯಾಸಳಿಲು, ಹಂದಿಯಾದಿಯಾಗಿ ಅದರ ಪ್ರಜೆಗಳು. ಈ ಪೈಕಿ ಕರಡಿ, ಕಿರುಬ, ಹಂದಿಗಳು ಭಿನ್ನಮತೀಯ ನಾಯಕರಂತೆ ತಮ್ಮದೇ ಪ್ರತ್ಯೇಕ ಅಸ್ತಿತ್ವವನ್ನು ಸಾರಲು ಆಗಾಗ ಪ್ರಯತ್ನಿಸುತ್ತ ಸುದ್ದಿ ಮಾಡುತ್ತಿದ್ದವು. ಇನ್ನು ನೆರೆಯ ಪ್ರದೇಶಗಳಿಂದ ಜೈತ್ರಯಾತ್ರೆಗೆಂದು ಬಂದು, ತಮ್ಮ ಬಲ ಪ್ರದರ್ಶಿಸಿ, ಭಯ ಹುಟ್ಟಿಸಿ ಹೋಗುತ್ತಿದ್ದ ಆನೆಗಳಂಥ ಅತಿಥಿಗಳು ಬೇರೆ.&lt;br /&gt;ಮಳೆಗಾಲದ ದಿನಗಳಲ್ಲಿ ಮಾಸ್ತ್ಯಮ್ಮದ ಕಡೆಯ, ಇತರ ಒಳಪ್ರದೇಶಗಳ ದಟ್ಟಡವಿಗಳನ್ನು ಹೊಕ್ಕುವುದೆಂದರೆ ಎಂಥ ಧೈರ್ಯವಂತರಿಗೂ ಸಣ್ಣ ಭಯ ಕಾಡುತ್ತಿತ್ತು. ಕಾರಣ ಕರಡಿಗಳು. ಹುಲಿ ಹೆಚ್ಚಾಗಿ ಓಡಾಡುವಂಥ ಕೆಲ ಜಾಗಗಳಲ್ಲೂ ಅಗತ್ಯ ಬಿದ್ದಾಗ ನಿರಾತಂಕವಾಗಿ ಹೋಗಿ ಬರುತ್ತಿದ್ದ ಅಪ್ಪ-ಗೋಪಾಲಣ್ಣ ಸಹ, ಮಳೆಗಾಲದಲ್ಲಿ ಕರಡಿಯ ಕ್ಷೇತ್ರವನ್ನು ಅವಾಯ್ಡ್ ಮಾಡುತ್ತಿದ್ದರು. ಕರಡಿ ಸಾಮಾನ್ಯವಾಗಿ ಅಂಜುಬುರುಕ ಪ್ರಾಣಿ. ಬಹುತೇಕ ಪ್ರಾಣಿಗಳಂತೆ ಅದೂ ಮನುಷ್ಯರಿಂದ, ಇತರ ಬಲಶಾಲಿ  ಪ್ರಾಣಿಗಳಿಂದ ಆದಷ್ಟೂ ದೂರವಿರಲು ಬಯಸುತ್ತದೆ. ಆದರೆ ಮಳೆಗಾಲದಲ್ಲಿನ ಸ್ಥಿತಿಯೇ ಬೇರೆ. ಆಗ ಸಾಮಾನ್ಯವಾಗಿ ಮರಿ ಹಾಕುವ ಹೆಣ್ಣು ಕರಡಿ, ತನ್ನ ಕುಡಿಗಳ ರಕ್ಷಣೆಯ ವಿಷಯದಲ್ಲಿ ತೀರಾ ಆಕ್ರಮಣಶೀಲವಾಗಿರುತ್ತದೆ. ತನ್ನ ವ್ಯಾಪ್ತಿಯೊಳಗೆ ಬೇರೆ ಬಲಶಾಲಿ ಪ್ರಾಣಿ ಬಂತೆಂದರೆ ಯಾವುದೇ ಪ್ರಚೋದನೆ ಇಲ್ಲದೆಯೂ ಅದು ಆಕ್ರಮಣಕ್ಕಿಳಿಯುವ ಸಾಧ್ಯತೆ ಇರುತ್ತದೆ.&lt;br /&gt;ಒಂದು ಮುಂಜಾವಿನಲ್ಲಿ ಚಿಟಗೇರಿಯ ಪುಟ್ಟಪ್ಪ ಮತ್ತವನ ಹೆಂಡತಿ ಕಾಡಿನ ದಾರಿಯಲ್ಲಿ ನಮ್ಮೂರಿಗೆ ಬರುತ್ತಿದ್ದರು. ಚಿಟಗೇರಿ ನಮ್ಮೂರಿನಿಂದ ಸುಮಾರು ನಾಲ್ಕು ಮೈಲು ದೂರದಲ್ಲಿದೆ. ನಡುವೆ ದಟ್ಟ ಕಾಡು. ಅವರ ಪಾಡಿಗೆ ಅವರು ಮಾತನಾಡುತ್ತ ಬರುತ್ತಿರಬೇಕಾದರೆ, ಅದೆಲ್ಲಿತ್ತೋ, ಒಂದು ಭಾರಿ ಕರಡಿ ಅವರ ಮೇಲೆರಗಿತು. ದಿಕ್ಕಾಪಾಲಾದ ಹೆಂಡತಿ ಗುಡ್ಡದ ಇಳಿಜಾರಿನಲ್ಲಿದ್ದ ಮಾಸ್ತ್ಯಮ್ಮದ ಹಳ್ಳದತ್ತ ಓಡಿದರೆ, ಪುಟ್ಟಪ್ಪ ಬಂದ ದಾರಿಯಲ್ಲೇ ಗುಡ್ಡ ಏರಿ ಓಡಿದ. ಕರಡಿಗೆ ಗುಡ್ಡ ಇಳಿಯುವುದಕ್ಕಿಂತ ಏರುವುದು ಸುಲಭ ನೋಡಿ, ಪುಟ್ಟಪ್ಪನ ಬೆನ್ನಟ್ಟಿತು. ಅವನನ್ನು ನೆಲಕ್ಕೆ ಕೆಡವಿ, ಉಗುರುಗಳಿಂದ ಆಕ್ರಮಣ ಆರಂಭಿಸಿತು. ಇದನ್ನು ದೂರದಿಂದಲೇ ಕಂಡ ಹೆಂಡತಿ ಇನ್ನು ಅವನನ್ನು ತನ್ನಿಂದಂತೂ ಪಾರು ಮಾಡಲಾಗುವುದಿಲ್ಲ ಎಂದುಕೊಂಡು, ಎರಡು ಮೈಲು ದೂರದ ಹನುಮಾಪುರಕ್ಕೆ ಓಡಿ ಬಂದು ವಿಷಯ ತಿಳಿಸಿದಳು. ಊರ ಜನ ಬಡಿಗೆ, ಹಾರೆ ಹಿಡಿದುಕೊಂಡು ಹೋಗಿ ನೋಡುವ ಹೊತ್ತಿಗೆ ರೋಷ ತೀರಿದ ಕರಡಿ ಪರಾರಿಯಾಗಿತ್ತು. ಹಣ್ಣುಗಾಯಿ, ನೀರುಗಾಯಿ ಆಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪುಟ್ಟಪ್ಪನಲ್ಲಿ ಇನ್ನೂ ಕುಟುಕು ಜೀವವಿತ್ತು. ಆಮೇಲೆ ನಡೆದ ಆಸ್ಪತ್ರೆವಾಸ, ಪರಿಹಾರ ಪ್ರಹಸನದ್ದೇ ದೊಡ್ಡ ಕಥೆ ಬಿಡಿ.&lt;br /&gt;ಮತ್ತೊಮ್ಮೆ ವಿರಾಜಪ್ಪ ಎಂಬ ಇನ್ನೊಬ ್ಬ ಗಂಡಸು ಬೆದೆಗರಡಿಯ ಕೈಗೆ ಸಿಕ್ಕಿ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಗ್ರಾಮದ ದೇವಸ್ಥಾನವೊಂದರ ಪೂಜಾರಿ ಆಗಿದ್ದ ವಿರಾಜಪ್ಪ ಹರಕೆಯ ಭತ್ತ ಸಂಗ್ರಹಿಸಲೆಂದು ಪಕ್ಕದೂರಿಗೆ ಹೊರಟಿದ್ದ. ಮಾರ್ಗ ಮಧ್ಯೆ ಕಾಡಿನ ಗರ್ಭದಲ್ಲಿ ಬೆದೆಗೆ ಬಂದಿದ್ದ ಹೆಣ್ಣುಕರಡಿಯೊಂದು ಅವನನ್ನು ಅಡ್ಡಹಾಕಿತು. ತಪ್ಪಿಸಿಕೊಳ್ಳಲು ಕೊಡದೇ ಅವನ ಮೇಲೆರಗಿದ ಕರಡಿ, ಅವನಲ್ಲಿ ತನ್ನ ಸಂಗಾತಿಯನ್ನು ಹುಡುಕತೊಡಗಿತು. ಹೊರಳಿಸಿ, ತಿರುಗಿಸಿ, ಅಪ್ಪಿ, ಮುದ್ದು ಮಾಡಿ.... 'ಕರಡಿ ಮುದ್ದು' ಎಂಬ ನುಡಿಗಟ್ಟನ್ನು ಅರಿತವರಿಗೆ ಕರಡಿಯ ತೆಕ್ಕೆಯಲ್ಲಿ ಸಿಕ್ಕಿಕೊಳ್ಳುವ ಪರಿಯ ಕಲ್ಪನೆ ಇರಬಹುದು. ಅಂತೂ ಇಂವ ತನಗೆ ಬೇಕಾದವನಲ್ಲ ಎಂದು ಆ ಕರಡಿ ಮನಗಂಡು ಬಿಟ್ಟು ಹೋಗುವ ಹೊತ್ತಿಗೆ ವಿರಾಜಪ್ಪನ ಮೈಯೆಂಬುದು ಸಿಪ್ಪೆ ಸುಲಿದ ಅಪ್ಪೆ ಹಣ್ಣಿನಂತಾಗಿತ್ತು. ಆತ ದಿನಾ ಪೂಜೆ ಸಲ್ಲಿಸುತ್ತಿದ್ದ ದೇವರ ಅನುಗ್ರಹವಿರಬೇಕು, ವಿರಾಜಪ್ಪ ಯಾರೋ ದಾರಿಹೋಕರ ಕಣ್ಣಿಗೆ ಬಿದ್ದು, ಬದುಕುಳಿದ. ಅವನಷ್ಟೇ ಅಲ್ಲ, ನಮ್ಮೂರಿನ ಆಸುಪಾಸು ಕರಡಿಯ ಕೈಯಲ್ಲಿ ಸಿಕ್ಕಿಕೊಂಡಿದ್ದ ಹೆಚ್ಚುಕಮ್ಮಿ ಎಲ್ಲರೂ ಬದುಕುಳಿದಿದ್ದಾರೆ, ಬದುಕಿಡೀ ಕಾಡುವ ಕರಾಳ ನೆನಪುಗಳೊಂದಿಗೆ.&lt;br /&gt;ಈ ಪೈಕಿ ನನಗೆ ತೀರಾ ರೇಜಿಗೆ ಹುಟ್ಟಿಸಿದ ಪ್ರಕರಣ ಸಣ್ಣಪ್ಪನದು. ಇಲ್ಲಿ ರೇಜಿಗೆ ಹುಟ್ಟಿದ್ದು ಕರಡಿಯ ಬಗೆಗಲ್ಲ, ಮನುಷ್ಯರ ದುರಾಶೆ, ಅವಕಾಶವಾದಿ ಧೂರ್ತತೆಯ ಬಗ್ಗೆ. ಸಣ್ಣಪ್ಪ ನಮ್ಮೂರಿನಲ್ಲಿ ಹೆಸರು ಮಾಡಿದ್ದ ಬೇಟೆಗಾರ. ಈಡು ತುಂಬಿ, ಬಂದೂಕು ಹೆಗಲೇರಿಸಿಕೊಂಡು ಕಾಡು ತಿರುಗಲು ಹೊರಟನೆಂದರೆ ಖಾಲಿ ಕೈಯಲ್ಲಿ ಮರಳುತ್ತಿರಲಿಲ್ಲ ಆತ. ನಮ್ಮೂರ ಸುತ್ತಲಿನ ಕಾಡಿನಲ್ಲಿ ಹಂದಿ, ಜಿಂಕೆ, ಮೊಲ, ಕ್ಯಾಸಳಿಲುಗಳ ಸಂಖ್ಯೆಯನ್ನು ಕಡಿತಗೊಳಿಸುವಲ್ಲಿ ಅಂವ ಗಣನೀಯ ಪ್ರಮಾಣದ 'ಸೇವೆ' ಸಲ್ಲಿಸಿದ್ದ.&lt;br /&gt;ಒಂದು ತುಂಬಿದ ನಿಶೆಯಲ್ಲಿ ಸಣ್ಣಪ್ಪ ಚೆನ್ನಾಗಿ ನಶೆಯೇರಿಸಿಕೊಂಡು, ಬಂದೂಕಿಗೆ ಈಡು ತುಂಬಿಕೊಂಡು, ಸಮೀಪದ ಹಾರುವಳ್ಳಿ ಕೆರೆಯ ಬಳಿ ಹೋಗಿ ಕುಳಿತಿದ್ದ. ಕೆರೆಯಂಚಿನಲ್ಲಿ ಕಾದು ಕುಳಿತರೆ ಒಂದಲ್ಲಾ ಒಂದು ಪ್ರಾಣಿ ಸಿಗುತ್ತದೆ ಎಂಬುದು ಅವನ ಅನುಭವ. ಸರಿರಾತ್ರಿಯಲ್ಲಿ ಒಂದು ಪ್ರಾಣಿ ಬಂತು. ದೂರದಿಂದ ಹೊಳೆಯುವ ಎರಡು ಕಣ್ಣುಗಳನ್ನು ದಿಟ್ಟಿಸಿದ ಸಣ್ಣಪ್ಪ, ಆ ಕಣ್ಣುಗಳ ನಡುವಿನ ಅಂತರವನ್ನು ಲೆಕ್ಕಹಾಕಿ ಅದು ಜಿಂಕೆಯೇ ಇರಬೇಕೆಂಬ ನಿರ್ಧಾರಕ್ಕೆ ಬಂದ. ಅಮಲನ್ನು ಹಾಸಿ ಹೊದೆದುಕೊಂಡಿದ್ದ ಅವನಿಗೆ ಅದು ಜಿಂಕೆ ಹೌದೋ ಅಲ್ಲವೋ ಎಂದು ಕಾದು ನೋಡುವಷ್ಟು ವ್ಯವಧಾನ ಇರಲಿಲ್ಲ. ಬಂದೂಕನ್ನೆತ್ತಿ ಗುಂಡು ಹಾರಿಸಿಯೇ ಬಿಟ್ಟ. &lt;br /&gt;ಆತ ಜಿಂಕೆಯೆಂದುಕೊಂಡಿದ್ದು ವಾಸ್ತವದಲ್ಲಿ ಕರಡಿ ಆಗಿತ್ತು. ಅದು ಒಂದೇ ಏಟಿಗೆ ಸತ್ತಿದ್ದರೇ ಚೆನ್ನಿತ್ತೇನೋ. ಆದರೆ ಗಾಯಗೊಂಡು, ಘಾಸಿಗೊಂಡ ಆ ದೈತ್ಯ ಕರಡಿ, ತನ್ನ ಮೇಲೆ ವಿನಾಕಾರಣ ದಾಳಿ ಮಾಡಿದ ವೈರಿಯನ್ನು ಬಿಟ್ಟು ಬಿಡಲು ಸಿದ್ಧವಿರಲಿಲ್ಲ. ನೇರ ನುಗ್ಗಿಬಂದು ಸಣ್ಣಪ್ಪನ ಮೇಲೆರಗಿತು. ಕರಡಿ ತನ್ನನ್ನು ಕಚ್ಚಿ ಹರಿಯತೊಡಗಿದಾಗ ಸಣ್ಣಪ್ಪನ ನಿಶೆ ಇಳಿದು, ಅವನೂ ಸೊಂಟದಲ್ಲಿದ್ದ ಚಾಕು ಹೊರತೆಗೆದು ಆಕ್ರಮಣ ಶುರು ಮಾಡಿದ. ಹತ್ತು ಹದಿನೈದು ನಿಮಿಷ ನಡೆದ ಈ ಜಾಂಬವಂತ ಕಾಳಗ ಕೊನೆಗೊಳ್ಳುವ ಹೊತ್ತಿಗೆ ಗುಂಡೇಟು ತಿಂದು ತೀವ್ರ ಗಾಯಗೊಂಡಿದ್ದ ಕರಡಿ ರಕ್ತಸ್ರಾವದಿಂದ ಮೃತಪಟ್ಟರೆ, ಸಣ್ಣಪ್ಪ ಮುಖ ಮೈ ಸಿಗಿಸಿಕೊಂಡು ರಕ್ತಮಾಂಸದ ಮುದ್ದೆಯಾಗಿ ಬಿದ್ದಿದ್ದ.&lt;br /&gt;ಬೆಳಗಿನ ಜಾವದಲ್ಲಿ ಕೆರೆಯಂಚಿಗೆ ಮಲಭಾದೆಗೆ ಬಂದವರಾರೋ ಕಂಡು, ಊರವರಿಗೆ ಸುದ್ದಿ ಮುಟ್ಟಿಸಿ, ಅಂತೂ ಅಸು ನೀಗುವ ಮೊದಲೇ ಆಸ್ಪತ್ರೆ ಸೇರಿದ ಸಣ್ಣಪ್ಪ. ಮುಖದ ಮೇಲಿನ ನೆರಿಗೆಗಳಿಗಿಂತ ಹೆಚ್ಚು ಹೊಲಿಗೆಗಳನ್ನು ಕಂಡ ಈ ಬೇಟೆಗಾರ ಕೊಂಚ ಚೇತರಿಸಿಕೊಂಡಿದ್ದೇ, ತನ್ನ ದುಸ್ಸಾಹಸಕ್ಕೆ ಹೊಸ ರೂಪ ನೀಡಿ ಬಿಟ್ಟ. ತಾನು ಬೇಟೆಗೆ ಹೋಗಿದ್ದೆ, ಕರಡಿಯ ಮೇಲೆ ಮೊದಲು ಆಕ್ರಮಣ ಮಾಡಿದ್ದು ತಾನೇ ಎಂಬ ವಿಷಯವನ್ನು ಮುಚ್ಚಿಟ್ಟು, 'ಮಲವಿಸರ್ಜನೆಗೆ ಹೋಗಿದ್ದ ತನ್ನ ಮೇಲೆ ಕರಡಿ ಎರಗಿತ್ತು' ಎಂದು ಕತೆ ಕಟ್ಟಿದ. ಪ್ರಭಾವಿಗಳಾಗಿದ್ದ ಅವನ ಬಂಧುಗಳಿಂದ ಈ ಕಟ್ಟುಕತೆಗೆ ಭಾರಿ ಪ್ರಚಾರ ದೊರೆಯಿತು. ಅವರು ಇಕ್ಕಿದ ಮೇವು ಮೆಲುಕಾಡಿದ ಅರಣ್ಯ ಇಲಾಖೆ ಸಿಬ್ಬಂದಿಯೂ, 'ಆ ಅಪರಾತ್ರಿಯಲ್ಲೇಕೆ ಸಣ್ಣಪ್ಪ ಒಂದೂವರೆ ಮೈಲು ದೂರದ ಕೆರೆಗೆ ಮಲವಿಸರ್ಜನೆಗೆ ಹೋಗಿದ್ದ' ಎಂದು ಪ್ರಶ್ನಿಸಲಿಲ್ಲ. ಕರಡಿಯ ಮೈಯಲ್ಲಿ ನಾಟಿದ್ದ ಗುಂಡಿನ ಬಗ್ಗೆ ಕನಿಷ್ಠ ಸಂದೇಹವನ್ನೂ ವ್ಯಕ್ತಪಡಿಸಲಿಲ್ಲ. ಪರಿಣಾಮ 'ವನ್ಯಮೃಗ ದಾಳಿಯಿಂದ ಸಂತ್ರಸ್ತನಾದ ಬಡಪಾಯಿ ಹಳ್ಳಿಗ'ನಿಗೆ ಧಾರಾಳ ಪರಿಹಾರ ದೊರೆತರೆ, ಪ್ರಚೋದನೆ ಇಲ್ಲದೆ ನಡೆದ ದಾಳಿಗೆ ಪ್ರತಿಭಟಿಸಿದ ನಿಷ್ಪಾಪಿ ಪ್ರಾಣಿ ಪರಲೋಕ ಸೇರಿದ್ದಷ್ಟೇ ಬಂತು.&lt;br /&gt;('ಸಫಾರಿ' ಮುಂದುವರೆಯಲಿದೆ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-8370472246943922050?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/8370472246943922050/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_5983.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/8370472246943922050'/><link rel='self' type='application/atom+xml' href='http://www.blogger.com/feeds/4309049398760149221/posts/default/8370472246943922050'/><link rel='alternate' type='text/html' href='http://kaanadani.blogspot.com/2008/12/blog-post_5983.html' title='ಕಾಡು ಕಾಡ್ತು ೧: ಮನೆಯಂಗಳದ ಸಫಾರಿ'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>2</thr:total></entry><entry><id>tag:blogger.com,1999:blog-4309049398760149221.post-3729114544106623425</id><published>2008-12-11T10:50:00.004-05:00</published><updated>2009-08-21T12:04:39.169-04:00</updated><category scheme='http://www.blogger.com/atom/ns#' term='ಅಶ್ವತ್ಥ ಕಟ್ಟೆ'/><title type='text'>'ಬೆಳ್ಳಿ' ಬಟ್ಟಲಲ್ಲಿ ಹಳ್ಳಿ ಸುಧೆ ಹೀರುತ್ತ....</title><content type='html'>ಹೀಗೊಂದು ಆಯ್ಕೆ: ಒಂದಿಷ್ಟು ಜನಪ್ರಿಯ ಗೀತೆಗಳಿವೆ. ನಿಮಗವು ಬಲು ಇಷ್ಟ. ಆ ಧಾಟಿಯಲ್ಲಿ ಹಾಡೋಣವೆಂದರೆ ಅವುಗಳ ಸಾಹಿತ್ಯ ಕೊಂಚ ಕ್ಲಿಷ್ಟ ಅಥವಾ ಅವೇ ಸಾಲುಗಳನ್ನು ಕೇಳಿ ಕೇಳಿ ಬೇಸರ ಬಂದಿದೆ. ಸರಿ, ನೀವದನ್ನು ನಿಮ್ಮತನಕ್ಕೆ ಒಗ್ಗಿಸಲು ಯತ್ನಿಸುತ್ತೀರಿ. ಹಿಡಿಸದ, ಹಳತಾದ ಸಾಲುಗಳ ಜಾಗದಲ್ಲಿ ಹೊಸ ಸಾಲುಗಳು, ಹೊಸ ಅರ್ಥವನ್ನು ಹೊಂದಿಸುತ್ತೀರಿ. ಈಗ ನಿಮ್ಮೆದುರು ಎರಡು ಆಯ್ಕೆಗಳಿವೆ. ಒಂದೋ, ಧಾಟಿಯನ್ನಷ್ಟೇ ಎತ್ತಿಕೊಂಡು ಅದಕ್ಕೆ ಪಂಚಿಂಗ್ ಮಾತುಗಳನ್ನು ಪೋಣಿಸಿ ನಿಮ್ಮ ನಿಮ್ಮಲ್ಲೇ ಹಾಡಿಕೊಂಡು ಗೆಳೆಯರ ಬಳಗದಲ್ಲಿ ಬೆಳಗಬಹುದು. ಇಲ್ಲವೇ, ಬೇರೆ ಭಾಷೆಯ ಹಾಡುಗಳ ಸಂಗೀತದ ಜೊತೆಗೆ ಸಾಹಿತ್ಯವನ್ನೂ ಒಂದಕ್ಷರ ಬಿಡದೇ ಅನುವಾದಿಸಿ/ಭಾವಾನುವಾದ ಮಾಡಿ, ಕನ್ನಡ ಸಿನೆಮಾ ನಿರ್ಮಾಪಕರಿಗೆ ಮಾರಿ ಚಿತ್ರ ಸಾಹಿತಿಯಾಗಬಹುದು. &lt;br /&gt;ತಮಿಳು, ತೆಲುಗು ಲೇಬಲ್ ಮದ್ಯಕ್ಕಿಷ್ಟು ಕನ್ನಡತನದ ಕಲಬೆರಕೆ ಮಾಡಿ ಭಟ್ಟಿ ಇಳಿಸಿ, ಕನ್ನಡೀಕರಿಸಿದ ಹೆಸರು ಹಚ್ಚಿ ಹಿಂಬಾಗಿಲಿಂದ ಮನೆಯೊಳು ತಂದು ಮಧುಪಾನ ಮಾಡಿಸುವುದು ಚಿತ್ರಸಾಹಿತಿಗಳಿಗೇ (ಕನಿಷ್ಠ ಕೆಲವರಿಗಾದರೂ) ಸರಿ ಹೊಂದುವ ಕಾರ್ಯ. ಹೀಗಾಗಿ ನೀವು ಎರಡನೆಯದನ್ನು ಅವರಿಗೆ ಬಿಟ್ಟು, ಮೊದಲಿನದನ್ನೇ ಒಪ್ಪಿಕೊಳ್ಳುತ್ತೀರಾದರೆ- ಸುಸ್ವಾಗತ! ದೊಡ್ಡದೊಂದು ಕುಟುಂಬ ನಿಮ್ಮನ್ನು ತನ್ನೊಡಲಲ್ಲಿ ಸೇರಿಸಿಕೊಳ್ಳಲಿದೆ. ಇಲ್ಲಿ ಯಾರೂ/ಎಲ್ಲರೂ ಜನಪ್ರಿಯ ಹಾಡುಗಳಿಗೆ ತಮ್ಮದೇ ಪದಜೋಡಣೆ ಮಾಡಲಡ್ಡಿಯಿಲ್ಲ. ಪದ ಬದಲಿಸಿಕೊಂಡ ಪರ್ಯಾಯ ಪದ್ಯವನ್ನು ಕುಟುಂಬದ ಎಲ್ಲರೂ ಸವಿಯುತ್ತಾರೆ. ಆದರೆ ನೆನಪಿಡಿ, ಯಾರಿಗೂ ಆ ಸವಿ ಉಣಬಡಿಸಿದ ಕ್ರೆಡಿಟ್ ಸಲ್ಲುವುದಿಲ್ಲ. ಅಸಲಿಗೆ ಕುಟುಂಬಕ್ಕೇ ಒಂದು ಹೆಸರಿಲ್ಲ. ಅದೊಂಥರ ಆಗಾಗ ಹೊಸಬರನ್ನು, ಹೊಸ ವರ್ಷನ್ನನ್ನು ಸೇರಿಸಿಕೊಳ್ಳುತ್ತ, ಹಳತನ್ನು-ಹಳಬರನ್ನು ಕಳಚಿಕೊಳ್ಳುತ್ತ ಸಾಗುವ ಆಟೋ ಅಪ್ಗ್ರೇಡಿಂಗ್ ಎಂಟಿಟಿ.&lt;br /&gt;ನನ್ನ ಬಾಲ್ಯದಲ್ಲಿ ಸಮಾನ ವಯಸ್ಕರ, ನಮ್ಮ ತಲೆಮಾರಿನವರ ನಡುವೆ ಇಂಥ ಪರ್ಯಾಯ ಪದ್ಯಗಳು ಭಾರಿ ಚಾಲ್ತಿಯಲ್ಲಿದ್ದವು. ಇವುಗಳಿಗೆಲ್ಲ ಮೂಲ ಸೆಲೆ ರೇಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹಾಡುಗಳು. ಪದ ಬದಲಿಸುವ ಸ್ವಾತಂತ್ರ್ಯವನ್ನು ಎಲ್ಲರೂ ತೆಗೆದುಕೊಳ್ಳುತ್ತಿದ್ದುದುಂಟು.  &lt;br /&gt;ಚಿಕ್ಕಂದಿನಲ್ಲಿ ನಮ್ಮೂರಿಗೆ ರೆಗ್ಯುಲರ್ ಆಗಿ ದ್ಯಾವರು ಎಂಬ ಕೆಲಸಿ ಬರುತ್ತಿದ್ದ. ಅವನೆದುರು ಕುಳಿತಾಕ್ಷಣ 'ಬೋಳಿಸಲೆಂದೇ ಕೂಪನು ತಂದೆ, ಕೂಪನು ಮಸೆಯಲು ನಾನಿಂದೆ, ತೆಗೆಯೋ ಟೊಪ್ಪಿಯನು, ತಮ್ಮಾ ತೆಗೆಯೋ ಟೊಪ್ಪಿಯನು' ('ಎರಡು ಕನಸು' ಚಿತ್ರದ 'ಪೂಜಿಸಲೆಂದೇ' ಧಾಟಿಯಲ್ಲಿ) ಎಂದು ಅವನ ಪರವಾಗಿ ಹಾಡಿ ಮುಗಿಸಿಯೇ ಅಣ್ಣ ತಲೆ ಒಡ್ಡುತ್ತಿದ್ದುದು. ಅತ್ತ ಹಣ್ಣು ಹಣ್ಣು ಮುದುಕ ದ್ಯಾವರು ಬೊಚ್ಚು ಬಾಯಿ ಕಿರಿದು ಮುಸಿ ಮುಸಿ ನಗುತ್ತಿದ್ದರೆ, ಇತ್ತ ಕಲ್ಪನಾ ಪ್ರೇಮಿ ಅಮ್ಮ 'ಇದೇ ಹಾಡೇ ಬೇಕಾಗಿತ್ತ ನಿಂಗೆ' ಎಂದು ಸಿಡಿಮಿಡಿಗೊಳ್ಳುತ್ತಿದ್ದಳು. &lt;br /&gt;'ಎಡಕಲ್ಲು ಗುಡ್ಡದ ಮೇಲೆ' ಚಿತ್ರದ 'ವಿರಹ ನೂರು ನೂರು ತರಹ' ಹಾಡನ್ನು ಚಹಕ್ಕೆ ಸಮೀಕರಿಸಿ ಹಾಡುತ್ತಿದ್ದೆವು. ಒಮ್ಮೆ ನನ್ನಕ್ಕ ಒಬ್ಬಳು ತನ್ನ ಚಿಕ್ಕ ವಯಸ್ಸಿನ ಮಗಳೊಂದಿಗೆ ನೆಂಟರ ಮನೆಗೆ ಹೋಗಿದ್ದಳು. ಮಾತಿನ ಮಧ್ಯೆ ಅತಿಥಿಗಳಿಗೆ ಚಹ ಬಂತು. ಒಂದು ತೊಟ್ಟು ಗುಟುಕರಿಸಿದ ಮಗಳು ತಟ್ಟನೆ ಲೋಟ ಕುಕ್ಕಿ ಗಟ್ಟಿ ದನಿಯಲ್ಲಿ 'ಈ ಚಹ ನೀರು ನೀರು ತರಹ, ಈ ಚಹ ಕುಡಿವುದೆನ್ನೆಯ ಹಣೆ ಬರಹ' ಎಂದು ಹಾಡಿದಳು. ಮಗಳನ್ನು ಕರೆದುಕೊಂಡು ಹೋದದ್ದಕ್ಕಾಗಿ ತನ್ನನ್ನೇ ಶಪಿಸಿಕೊಳ್ಳುತ್ತ ಅಕ್ಕ ಲಗುಬಗೆಯಿಂದ ಮನೆಗೆ ಹೊರಟಳು. &lt;br /&gt;ಇಡ್ಲಿ-ಸಾಂಬಾರು ಮಾಡಿದಾಗೆಲ್ಲ 'ನಮ್ಮ ಸಂಸಾರ, ಇಡ್ಲಿ ಸಾಂಬಾರ, ದೋಸೆ ಎಂಬ ದೈವವೇ ನಮಗಾಧಾರ, ಚಟ್ನಿ ತಂದ ಬಲದಿಂದ ಬಾಳೇ ಬಂಗಾರ' ಹಿಮ್ಮೇಳದೊಂದಿಗೆ ಉಂಡಾಗಲೇ ಅದರ ಸವಿ ಮೈಗೆ ಹತ್ತುತ್ತಿತ್ತು. ಇನ್ನು ಕಾಯಿ ತಂಬುಳಿ ಬಡಿಸಿದಾಗೆಲ್ಲ 'ಬಂಧನ' ಚಿತ್ರದ 'ಪ್ರೇಮದಾ ಕಾದಂಬರಿ' ಧಾಟಿಯಲ್ಲಿ 'ಪ್ರೀತಿಯ ಕಾಯ್ತಂಬುಳಿ, ಬೀಸಿದೆ ಒಳ್ಕಲ್ಲಲಿ, ಅನ್ನ ಮುಗಿದೇ ಹೋದರೂ ಮುಗಿಯದಿರಲಿ ತಂಬುಳಿ' ಎಂದು ಹಾಡುತ್ತ ಅದನ್ನು ಕಲಸುತ್ತಿದ್ದರೆ ತಂಬುಳಿಯ ರುಚಿಯೊಂದಿಗೆ ರಸಿಕತೆಯ ಒಗ್ಗರಣೆ ಬೆರೆತು ಪರಿಮಳ ನೆತ್ತಿಗೇರಿ ಮತ್ತೇರಿಸುತ್ತಿತ್ತು. ಇದೇ 'ಬಂಧನ' ಚಿತ್ರದ 'ನೂರೊಂದು ನೆನಪು' ಕೈ ಕೊಟ್ಟಾಗ ಇರಲಿ ಎಂದು 'ನೂರೊಂದು ಬಸ್ಸು ಹಳಿಯಾಳದಿಂದ, ಹಾಳಾಗಿ ಬಂತು ಅಪಘಾತದಿಂದ' ಎಂಬ ಬ್ಯಾಕಪ್ ಮೆಮೊರಿ ತಯಾರಾಗಿತ್ತು. ಹಾಗೆಯೇ 'ಉಪಕಾರ್' ಚಿತ್ರದ 'ಮೆರೆ ದೇಶ್ ಕೇ ಧರತಿ' ಹಾಡು 'ಮೇರೆ ಸೇಠ್ ಕೇ ಚಡ್ಡಿ ಫಡ್ ಫಡ್ ಫಾಟೆ, ಸಿಲೇ ನ ಕೋಯಿ  ದರ್ಜಿ, ಮೇರೆ ಸೇಠ್ ಕೇ ಚಡ್ಡಿ' ಎಂಬ ರೂಪ ಪಡೆದಿತ್ತು.&lt;br /&gt;ಹಿಂದಿ ಚಿತ್ರಗೀತೆಗಳ ಪದ್ಯಬಂಡಿ ಆಡುವಾಗೆಲ್ಲ ಒಮ್ಮೆ 'ಸ' ಬಂದರೆ 'ತೇಜಾಬ್' ಚಿತ್ರದ 'ಸೋ ಗಯಾ ಯೇ ಜಹಾಂ' ಹಾಡು ಗ್ಯಾರಂಟಿ. ಮತ್ತೊಮ್ಮೆ 'ಸ' ಬಂದಾಗ ಅದೇ ಧಾಟಿಯಲ್ಲಿ 'ಸೋ ಗಯಾ ಯೇ ಗಧಾ, ಸೋ ಗಯಾ ವೋ ಗಧಾ, ಸೋ ಗಯೀ ಹೈ ಸಾರೇ ಬಕರಿಯಾಂ, ಸೋ ಗಯಾ ಹೈ ಕುತ್ತಾ ಭೌಭೌ' ಎಂದು ಹಿನ್ನೆಲೆ ಸಂಗೀತದ ಸಮೇತ ಹಾಡು ಹೊರಬರುತ್ತಿತ್ತು. ಆಮೇಲಿನ 'ಏ, ಈ ಹಾಡು ಇಲ್ಲ, ಹೀಂಗೆಲ್ಲಾ (ವಿ)ಚಿತ್ರಗೀತೆ ಹಾಡೋ ಹಾಗಿಲ್ಲ.......'ಲ್ಲಲ್ಲಲ್ಲಾಪವೂ ಅಷ್ಟೇ ಗ್ಯಾರಂಟಿ.&lt;br /&gt;ನಾನು ಜವಾಹರ ನವೋದಯ ವಿದ್ಯಾಲಯದಲ್ಲಿ ಓದುತ್ತಿದ್ದಾಗ ಒಂದು ಸಂಜೆ ವಿದ್ಯುತ್ ಕಡಿತಗೊಂಡ ಸಂದರ್ಭ. ಕತ್ತಲೆ ಡಾರ್ಮಿಟರಿಯಲ್ಲಿ ಎಲ್ಲರೂ ತಣ್ಣಗೆ ಕುಳಿತಿದ್ದೆವು. ಇದ್ದಕ್ಕಿದ್ದಂತೆ ಒಬ್ಬಾಕೆ 'ಹೇ, ನಂಗೇನೋ ಕಚ್ಚಿ ಬಿಡ್ತಲ್ಲೆ, ದೀಪ ತಗಂಡು ಬಾರೆ' ಎಂದು 'ಹಮ್ರಾಝ್' ಚಿತ್ರದ 'ಹೇ ನೀಲೆ ಗಗನ್ ಕೆ ತಲೆ' ಅನುಸರಿಸಿ ಹಾಡಿದಳು. ಕತ್ತಲೊಂದಿಗೆ ಕವಿದಿದ್ದ ಮೌನದ ತೆರೆಯನ್ನು ಆ ಹಾಡು ಏಕ್ದಂ ಸರಿಸಿ, ತಿಳಿ ನಗೆಯ ತಿಂಗಳಬೆಳಕನ್ನು ಹರಡಿತ್ತು. ಆ ವಸತಿ ಶಾಲೆಯಲ್ಲಿ ವಿದ್ಯಾಥರ್ಿಗಳ ಸಂಖ್ಯೆ ಹೆಚ್ಚಿದ್ದ ಕಾರಣ ಎರಡು ಬ್ಯಾಚ್ಗಳಲ್ಲಿ ಊಟಕ್ಕೆ ಹೋಗುತ್ತಿದ್ದೆವು. ಎರಡನೇ ಬ್ಯಾಚ್ನವರು ಊಟ ಶುರು ಮಾಡುವ ಹೊತ್ತಿಗೆ ಸಾಂಬಾರೆಂಬುದು ಹೋಳು, ಬೇಳೆಯನ್ನೆಲ್ಲ ಕಳೆದುಕೊಂಡು ತಿಳಿಸಾರಾಗಿರುತ್ತಿತ್ತು. ಅನ್ನದ ಮೇಲಿಷ್ಟು ಸುರಿದುಕೊಂಡು ಬಂದ ಸಾರಲ್ಲಿ ಅಪರೂಪಕ್ಕೊಮ್ಮೆ ಬೇಳೆ ಕಂಡಿತೆಂದರೆ ಬಾಯಿಯ ಬಾವಿಯಲ್ಲಿ ಜೊಲ್ಲಿನ ಜೊತೆ ಈ ಹಾಡೂ ಚಿಮ್ಮುತ್ತಿತ್ತು- 'ದೇಖಾ ಹೈ ಪೆಹಲೀ ಬಾರ್, ಸಾಂಬಾರ್ ಮೇ ತುಅರ್ ಕಾ ದಾಲ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್, ಪೇಟ್ ಭರ್ ತುಜೇ ಖಾನೆ ಕೋ ಕಬ್ ಸೇ ಥೀ ಮೈ ಬೇಕರಾರ್, ಅಬ್ ಜಾಕೆ ಆಯಾ ಮೇರೆ ಭೂಕೆ ಯೇ ಪೇಟ್ ಕೋ ಕರಾರ್'- ಗೆಳತಿಯರ ಪೈಕಿ ಒಬ್ಬಾಕೆ ಇದನ್ನು ಹಾಡಿದರೆ ಉಳಿದವರಿಂದ 'ಸಾಜನ್' ಚಿತ್ರದ ಆ ಹಾಡಿನ ಹಿನ್ನಲೆ ಸಂಗೀತದ ಮಾದರಿಯಲ್ಲೇ 'ಪಾಂಚ್ ಕಾ ಪಚಾಸ್, ಪಾಂಚ್ ಕಾ ಪಚಾಸ್' ಎಂಬ ಕೋರಸ್.&lt;br /&gt;ಸಾಮಾನ್ಯವಾಗಿ ಇಂಥ ಪರ್ಯಾಯ ಪದ್ಯಗಳೆಲ್ಲ ಚಿತ್ರಗೀತೆಗಳನ್ನೇ ಅನುಸರಿಸುತ್ತಿದ್ದರೂ ಅಪರೂಪಕ್ಕೆ ಕೆಲವು ರಾಷ್ಟ್ರೀಯ ಗೀತೆಗಳೂ ಪದ ಬದಲು ಪ್ರಕ್ರಿಯೆಗೆ ಒಳಗಾಗುತ್ತಿದ್ದವು. ಕೆಲವೊಂದು ಮಜವಾಗಿದ್ದರೆ ವಿಶೇಷವಾಗಿ ಒಂದು ಪದ್ಯ 'ಸಜ'ವಾಗಿತ್ತು.&lt;br /&gt;ನವೋದಯಲ್ಲಿ ರಸಾಯನ ವಿಜ್ಞಾನದ ಶಿಕ್ಷಕಿಯಾಗಿದ್ದ ಸಾರಾ ಎಂಬುವವರು 'ಶಿಕ್ಷಾ'ದಷ್ಟೇ 'ಶಿಕ್ಷೆ'ಗೂ ಪ್ರಾಮುಖ್ಯತೆ ನೀಡುತ್ತಿದ್ದ ಘಾಟಿ ವ್ಯಕ್ತಿ. ಉನ್ನತ ಮಟ್ಟದ ಬೋಧನಾ ಸಾಮಥ್ರ್ಯದ ಜೊತೆಗೆ ಸಿಟ್ಟಿನ ಪ್ರತಿರೂಪದಂತಿದ್ದ ಅವರ ಕಲಿಸುವಿಕೆ, 'ಕೋಲಿಸು'ವಿಕೆ ಕೈಕೈ ಹಿಡಿದು ಸಾಗುತ್ತಿದ್ದವು. ಒಮ್ಮೆ ಏಳು ತಿಂಗಳ ಗರ್ಭಿಣಿಯಾಗಿದ್ದ ಅವರು ಇನ್ನೇನು ನಮ್ಮ ತರಗತಿಯನ್ನು ಪ್ರವೇಶಿಸಬೇಕು ಅನ್ನುವಷ್ಟರಲ್ಲಿ 'ಸಾರೇ ಜಹಾಂ ಸೇ ಅಚ್ಛಾ'ದ ಪರ್ಯಾಯ ಪದ್ಯ ಅವರ ಕಿವಿಗೆ ಬಿತ್ತು. ಧುಮುಧುಮಿಸುತ್ತಲೇ ಒಳ ಬಂದ ಸಾರಾ ಮೇಡಂ 'ಗುಡ್ ಮಾರ್ನಿಂಗ್' ಗಿಳಿಪಾಠ ಒಪ್ಪಿಸಿದ ನಮ್ಮತ್ತ ಚೂಪನೆಯ ದೃಷ್ಟಿ ಬೀರಿ 'ಗರ್ಲ್ಸ್ ಸಿಡೌನ್' ಎಂದರು. ಪ್ರಶ್ನಾರ್ಥಕ ನೋಟ ಹೊತ್ತ ಹುಡುಗರತ್ತ ಕೆಂಗಣ್ಣು ಬೀರಿದವರೇ 'ಯಾರು ಅದನ್ನು ಹಾಡಿದವರು' ಎಂದರು. ಹುಡುಗರ ಅಯೋಮಯ ದೃಷ್ಟಿ ಒಬ್ಬರಿಂದೊಬ್ಬರಿಗೆ ಹರಿದು ಕಗ್ಗಂಟಾಯಿತೇ ಹೊರತು 'ಇವರೇನು ಕೇಳುತ್ತಿದ್ದಾರೆ, ಆ 'ಅದು' ಏನು' ಎಂಬುದು ತಲೆಬುಡ ತಿಳಿಯಲಿಲ್ಲ. ತಮ್ಮ ಕೋಪದ ಬೆಂಕಿಯಲ್ಲಿ ಸುಡಲೊಂದು ಸೂಕ್ತ ಕಟ್ಟಿಗೆ ಸಿಗದೇ ಸಿಡಿಮಿಡಿಗೊಂಡ ಅವರು ತರಗತಿಯ ಎಲ್ಲಾ ಹುಡುಗರನ್ನೂ ಒಂದಿಡೀ ತಾಸು ಹೊರಗೆ ನಿಲ್ಲಿಸಿದರು. &lt;br /&gt;ಆಮೇಲೆ ತಿಳಿಯಿತು: ಮೇಡಂ ತರಗತಿಯನ್ನು ಪ್ರವೇಶಿಸಬೇಕೆನ್ನುವಷ್ಟರಲ್ಲಿ ಪಕ್ಕದಲ್ಲೇ ಇದ್ದ ಡಾರ್ಮಿಟರಿಯ ಹುಡುಗರು 'ಸಾರೇ ಜಹಾಂ ಸೇ ಅಚ್ಛಾ, ಸಾರಾ ಕೆ ಪೇಟ್ ಮೇ ಬಚ್ಚಾ' ಎಂದು (ಕೊಂಚ ಕೀಳು ಮಟ್ಟದಲ್ಲಿಯೇ) ಹಾಡಿದ್ದರು. ಎದುರಿಗೇ ಕುಳಿತಿದ್ದ ನಮ್ಮ ತರಗತಿಯ ಹುಡುಗರೇ ಅದನ್ನು ಹಾಡಿರಬೇಕು ಎಂದುಕೊಂಡ ಅವರು ಒಳಗೆ ಬಂದವರೇ ಶಿಕ್ಷಿಸಲು ಮುಂದಾದರು. ಮೊಸರು ತಿಂದಿದ್ದು ಮಂಗ; ಮುಸುಡಿ ಮೇಲೆ ಬರೆ ಬಿದ್ದಿದ್ದು ಮೇಕೆಗೆ.&lt;br /&gt;ಕನ್ನಡ ಶಾಲೆಯಲ್ಲಿ ಓದುವಾಗ 'ವಂದೇ ಮಾತರಂ' ಬಲ್ಲದ ಮಕ್ಕಳಿಗೂ 'ವಂದೇ ಮಾಸ್ತರಂ' ಮುದ್ದಾಂ ಬರುತ್ತಿತ್ತು. ಮಾಸ್ತರರ ಬೆನ್ನ ಹಿಂದೆ 'ವ(ಒ)ಂದೇ ಮಾಸ್ತರಂ, ಹೊಡಿತಂ, ಬಡಿತಂ, ಕಿವಿ ಚಟ್ಟೆ ಹಿಂಡುತಂ' ಎಂದು ಹಾಡಿಕೊಂಡರೆ ತಿಂದ ಹೊಡೆತಕ್ಕಿಷ್ಟು ನ್ಯಾಯ ಸಲ್ಲಿಸಿದಂತೆ ಭಾಸ. &lt;br /&gt;ಹೆಚ್ಚಿನ ಹಾಡುಗಳು ತಿಳಿ ಹಾಸ್ಯದಲ್ಲಿ ಮಿಂದೆದ್ದು ಬಂದು ಆಹ್ಲಾದಮಯ ನಗೆಗಂಧವನ್ನು ಹರಡುವಂತಿದ್ದರೆ ಒಮ್ಮೊಮ್ಮೆ ಕೆಲವು ಪೋಲಿತನದ ಕೊಚ್ಚೆಯಲ್ಲಿ ಉರುಳಾಡಿ ಉಸಿರುಕಟ್ಟಿಸುವಂತಿದ್ದುದು ಖರೆ. 'ಬಣ್ಣಾ ನನ್ನ ಒಲವಿನ ಬಣ್ಣಾ', 'ಶಿಲೆಗಳು ಸಂಗೀತವ ಹಾಡಿವೆ', 'ಧರಣಿ ಮಂಡಲ ಮಧ್ಯದೊಳಗೆ', 'ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ'ದಂಥ ಮಧುರ ಹಾಡುಗಳು ವಿರೂಪಗೊಂಡು ಮುಜುಗರ ಮೂಡಿಸುವ ರೂಪ ಪಡೆದದ್ದುಂಟು. (ಆ (ವಿ)ರೂಪ ಪ್ರಸ್ತುತಪಡಿಸಲಾರೆ, ಕ್ಷಮಿಸಿ). ಸಂಸ್ಕೃತದ ಕೆಲವು ಶ್ಲೋಕಗಳಿಗೂ ಇದೇ ಗತಿ. &lt;br /&gt;ಸಾಮಾನ್ಯವಾಗಿ ಈ ಹಾಸ್ಯಮಯ ಪರ್ಯಾಯ ಪದ್ಯಗಳೆಲ್ಲ ಪಲ್ಲವಿಗಷ್ಟೇ ಸೀಮಿತವಾಗಿರುತ್ತಿದ್ದವು, ಚರಣಗಳ ತುದಿವರೆಗೆ ಯಾವ ಕವಿ(ಪಿ)ಯೂ ಚರಣ ಬೆಳೆಸುತ್ತಿದ್ದುದಿಲ್ಲ. ಆದರೂ ಅಪರೂಪಕ್ಕೆ ಕೆಲವು ಅಜ್ಞಾತ ಕವಿಗಳು ಚಿತ್ರಗೀತೆಗಳ ಧಾಟಿಯಲ್ಲಿ ಅರ್ಥವತ್ತಾದ ಭಕ್ತಿಗೀತೆಗಳನ್ನು ರಚಿಸಿದ್ದುಂಟು. ಮಜವೆಂದರೆ (ಸ)ರಸವತ್ತಾದ ಚರಣಗಳನ್ನು ಮೂಸಿಯೂ ನೋಡದೇ ಮುಖ ಸಿಂಡರಿಸುತ್ತಿದ್ದ ಹಿರಿಯರೆಲ್ಲ ಥಳಥಳಿಸುವ 'ಬೆಳ್ಳಿ' ಬಾಟಲಿಯಲ್ಲಿ ಬಂದ ಭಕ್ತಿ ಸುಧೆಯನ್ನು ಚಪ್ಪರಿಸಿ ಸವಿಯುತ್ತಿದ್ದರು. 'ದೋ ಆಂಖೆ ಬಾರಾ ಹಾಥ್'ನ 'ಏ ಮಾಲಿಕ್ ತೇರೆ ಬಂದೆ ಹಮ್' ಧಾಟಿಯ 'ಮಂಗಳೇಶ ಮಹೇಶ ನಮೋ', 'ಬೀಸ್ ಸಾಲ್ ಬಾದ್'ನ 'ಕಹೀಂ ದೀಪ್ ಜಲೆ ಕಹೀಂ ದಿಲ್' ಧಾಟಿಯ 'ಗುರುದೇವ ಪರಿಪೂರ್ಣ', 'ಕವಿರತ್ನ ಕಾಳಿದಾಸ'ದ 'ಸದಾ ಕಣ್ಣಲಿ' ಹಿಂಬಾಲಿಸಿ ಬಂದ 'ಗುರುವೆ ನಿನ್ನೆಯ ನಾಮವ', 'ಕಸ್ತೂರಿ ನಿವಾಸ'ದ 'ಎಲ್ಲೇ ಇರು' ಅಂಗಿ ತೊಟ್ಟ 'ಗೌರಿ ಪ್ರಿಯ, ತೋರೋ ದಯ'ಗಳೆಲ್ಲ ಹೀಗೆ ಡಿಸೈನರ್ ಅಚ್ಚಿನಲ್ಲಿ ಅದ್ದಿ ತೆಗೆದ ಲೋಕಲ್ ಭಜನೆಗಳು. ಸಾಂಪ್ರದಾಯಿಕ ಭಜನೆ ಕಾರ್ಯಕ್ರಮವೊಂದರಲ್ಲಿ ಇಂಥ ಹಾಡೊಂದನ್ನು ಹಾಡಿದರೆ ನ್ಯೂಯಾರ್ಕ್ ಬೀದಿಯಲ್ಲಿ ಸೀರೆಯುಟ್ಟು ನಡೆಯುವ ಯುವತಿಯ ರೀತಿಯಲ್ಲಿ ಗಮನ ಸೆಳೆಯುತ್ತಿದ್ದವು (ಬೆಂಗಳೂರಿನ ಬ್ರಿಗೇಡ್ ರಸ್ತೆ ಎನ್ನಲಾರೆ, ಅಲ್ಲಿ ಸೀರೆ ಅಪರೂಪವಾದರೂ ಅದನ್ನುಟ್ಟರೆ ಯಾರೂ ಕಣ್ಣೆತ್ತಿ ನೋಡಲಾರರು). &lt;br /&gt;ಸೀಮಿತ ಅವಕಾಶದಲ್ಲಿ ಪ್ರತಿಭೆಯ ಪ್ರಭೆಯನ್ನು ಹೊರಸೂಸಲು ಅವಕಾಶ ಮಾಡಿಕೊಡುವ ಈ ಪರ್ಯಾಯ ಪದ್ಯಗಳಿಗೆ ಒರಿಜಿನಲ್ ಚಿತ್ರಗೀತೆಗಳಿಗಿರುವ ಸಾರ್ವಕಾಲಿಕ ಜನಪ್ರಿಯತೆಯ, ರಾಷ್ಟ್ರೀಯ ಗೀತೆಗಳು ಹೊದ್ದ ಇನ್ಶೂರ್ಡ್ ಗೌರವದ, ಶ್ಲೋಕಗಳ ಪಾವಿತ್ರ್ಯ, ಪರಂಪರೆಯ ಅಗ್ಗಳಿಕೆಯ ಅಥವಾ ಭಾವಗೀತೆಗಳ ಸಾಹಿತ್ಯಿಕ ಘನತೆಯ, ಘಮಲಿನ ವಿಶೇಷ ಸವಲತ್ತುಗಳೊಂದೂ ಇಲ್ಲ. ಆದರೂ ತುಂಟ ಎಸ್ಸೆಮ್ಮೆಸ್ಗಳಂತೆ ತುಟಿಯ ಮೇಲೊಂದು ತುಂತುರು ನಗೆ ಅರಳಿಸಿ, ತಲೆ ಹತ್ತಿ ಕುಳಿತ ಚಿಂತೆಯ ತೊಲೆಯನ್ನು ಇಳಿಸಿ ಹಗುರ ಮಾಡಿ, ಪುಟ್ಟ ಪುಟ್ಟ ರಸಗಳಿಗೆಗಳನ್ನು ಸೃಷ್ಟಿಸುವ ಸೊಗಸು ಇದೆ. &lt;br /&gt;ಕೊನೆಗೊಂದು ಕೊಸರು: ಹಲವು ಸಲ 'ಚಲ್ತೇ ಚಲ್ತೇ' ಚಿತ್ರದ ಶೀರ್ಷಿಕೆ ಗೀತೆ- 'ಚಲ್ತೇ ಚಲ್ತೇ ಮೇರೆ ಯೇ ಗೀತ್ ಯಾದ್ ರಖನಾ'ದೊಂದಿಗೆ ಸ್ನೇಹ ಸಮಾರಂಭಗಳಿಗೆ ಮುಕ್ತಾಯ ಹಾಡುವುದುಂಟು. ಈ ಗೀತೆಗೊಬ್ಬ ಮಲಸೋದರಿ. ಆಕೆಯೂ ಸಮಾರೋಪ ಸಂಗೀತದಲ್ಲಿ ಸಮರ್ಥಳು. ಆಕೆಯನ್ನು ಮುಂದಿಟ್ಟುಕೊಂಡು ಇತ್ತಲಿಂದ ಬೈ ಬೈ, ಸಲಾಂ- 'ಇರಲಿ, ನೆನಪಿರಲಿ, ನಮ್ಮ ಗೆಳೆತನದ ಸವಿ ನೆನಪಿರಲಿ, ಆ ನೆನಪೇ ಶಾಶ್ವತವು, ಅದುವೆ ಚಿರ ನೂತನವು'.&lt;br /&gt;&lt;br /&gt;('ದ್ಯಾಟ್ಸ್ ಕನ್ನಡ'ಕ್ಕೆ ಧನ್ಯವಾದ ಹೇಳುತ್ತ..)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-3729114544106623425?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/3729114544106623425/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_3624.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/3729114544106623425'/><link rel='self' type='application/atom+xml' href='http://www.blogger.com/feeds/4309049398760149221/posts/default/3729114544106623425'/><link rel='alternate' type='text/html' href='http://kaanadani.blogspot.com/2008/12/blog-post_3624.html' title='&apos;ಬೆಳ್ಳಿ&apos; ಬಟ್ಟಲಲ್ಲಿ ಹಳ್ಳಿ ಸುಧೆ ಹೀರುತ್ತ....'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-6076316477970565599</id><published>2008-12-08T20:51:00.001-05:00</published><updated>2008-12-08T20:58:25.483-05:00</updated><category scheme='http://www.blogger.com/atom/ns#' term='ತೆರೆದ ಕಣ್ಣು'/><title type='text'>ಅದೋ ಅಲ್ಲಿ, ಅಲ್ಲಿಗೇಟರ್!!</title><content type='html'>ಆರು ತಿಂಗಳ ಹಿಂದೆ 'ಫ್ಲೋರಿಡಾಕ್ಕೆ ಹೊರಡುತ್ತಿದ್ದೇವೆ' ಎಂದು ಗೊತ್ತಾಗುತ್ತಿದ್ದಂತೆಯೇ ಸಹಜವಾಗಿ ಜಯರಾಮ ಗೆ ಕೇಳಿದೆ: 'ಹೇಗಿದೆಯಂತೆ ಅದು?' ಮೂರು ಶಬ್ದಗಳಲ್ಲಿ ಉತ್ತರ ಬಂತು- 'ಸೆಖೆ, ಬೀಚು, ಅಲ್ಲಿಗೇಟರ್ಸ್'. 'ಮೊಸಳೆ- ಅಷ್ಟೊಂದಿದೆಯೆ' ತತ್ಕ್ಷಣಕ್ಕೆ ಕುತೂಹಲ ಮೂಡಿತ್ತು ನನಗೆ. &lt;br /&gt;ಟಾಂಪಾ ವಿಮಾನ ನಿಲ್ದಾಣದಿಂದ ಹೊರಬೀಳುತ್ತಿದ್ದಂತೆಯೇ ಸೆಖೆಯ ಅಂದಾಜು ಹತ್ತಿತು ನನಗೆ. ಬಂದ ಒಂದೆರಡು ದಿನದಲ್ಲೇ ಬೀಚ್ ಕೂಡ ಸುತ್ತಾಡಿ ಬಂದೆವು. ನಾನು ಈವರೆಗೆ ನೋಡಿದ್ದಕ್ಕಿಂತ ಅತ್ಯಂತ ಸ್ವಚ್ಛ ನೀರು, ಸುಂದರ-ನಯವಾದ ಮರಳು ಅಲ್ಲಿತ್ತು. ಹೇಳಿ ಕೇಳಿ 'ಕ್ಲೀಯರ್ ವಾಟರ್' ಎಂದು ಹೆಸರು ಆ ಸಾಗರದಂಚಿಗೆ. ಮಕರ ದರ್ಶನ ಮಾತ್ರ ಬಾಕಿ ಉಳಿದಿತ್ತು.&lt;br /&gt;ಒಂದಿನ ನಾವು ಮತ್ತು ಜಯರಾಮ್ ಸಹೋದ್ಯೋಗಿ ದಂಪತಿ ಕಾರ್ ಖರೀದಿಗೆಂದು ಒಂದೆಡೆ ಹೋದೆವು. ಮಾರುತ್ತಿದ್ದ ವ್ಯಕ್ತಿ ಕೆರೆಯಂಚಿನ ಗೃಹ ಸಮುಚ್ಚಯವೊಂದರಲ್ಲಿ ವಾಸವಿದ್ದ. ಕಾರ್ ನೋಡಿ ಜಯರಾಮ್ ಮತ್ತು ಸಹೋದ್ಯೋಗಿ ಪರೀಕ್ಷಾರ್ಥ ಚಾಲನೆಗೆ ತೆರಳಿದರು. ಅವರ ಪತ್ನಿ ಮತ್ತು ನಾನು ಕಾರ್ ಮಾಲೀಕನೊಂದಿಗೆ ಮಾತಿಗಿಳಿದೆವು. ಮಾಮೂಲಿನಂತೆ ಹವಾಮಾನ, ಬೀಚ್ ಅದು ಇದು ಮಾತು ಮುಗಿಸಿ, 'ಇಲ್ಲಿ ಸಿಕ್ಕಾಪಟ್ಟೆ ಅಲ್ಲಿಗೇಟರ್ಸ್ ಇವೆಯಂತೆ ಹೌದಾ' ಎಂದೆವು. 'ಹಾಂ, ನಿನ್ನೆ ಬೆಳಿಗ್ಗೆ ಇಲ್ಲೇ ಒಂದು ಬಂದಿತ್ತು' ಎಂದು ಅಂವ ನಮ್ಮಿಬ್ಬರ ಕಾಲಡಿಗೆ ಇದ್ದ ಮಳೆ ನೀರಿನ ಕಾಲುವೆಯತ್ತ ಕೈ ತೋರಿಸಿದ. ಕಾಲುವೆಗೆ ಮುಚ್ಚಿದ್ದ ತೂತು ತೂತಿನ ಮುಚ್ಚಳದಿಂದ ಗರಗಸದ ದಂತಪಂಕ್ತಿ ತೂರಿದಂತಾಗಿ ಬೆಚ್ಚಿ ನಾವಿಬ್ಬರು ನಾಲ್ಕಡಿ ದೂರ ಜಿಗಿದೆವು.  &lt;br /&gt;ಅದೇ ವೇಳೆ ಬಾಡಿಗೆ ಮನೆಯನ್ನೂ ಹುಡುಕುತ್ತಿದ್ದೆವು. ಸರಿ, ಅಪಾರ್ಟಮೆಂಟ್ ಒಂದನ್ನು ನೋಡಿ, ಬಾಡಿಗೆ ಒಪ್ಪಂದ ಮಾಡಿಕೊಳ್ಳಲೆಂದು ಅದೇ ದಂಪತಿ ಜೊತೆ ಆ ಗೃಹ ಸಮುಚ್ಚಯದ ಕಚೇರಿಗೆ ಬಂದೆವು. ಕಣ್ಣಳತೆಯಲ್ಲೇ ಮೂರ್ನಾಲ್ಕು ಕೆರೆಗಳು, ಅಡ್ಡಾದಿಡ್ಡಿ ಹುಲ್ಲು ತುಂಬಿದ ನೆಲ, ಮೈತುಂಬ ಶಿಲಾವಲ್ಕದ ಮಾಲೆ ಜೋತಾಡಿಸಿಕೊಂಡ ಮರಗಳು... ವಾತಾವರಣ ವಿಚಿತ್ರವೆನಿಸಿತು ನಮಗೆ. 'ಇಲ್ಲಿ ಸಿಕ್ಕಾಪಟ್ಟೆ ಓತಿಕ್ಯಾತ ಇದ್ದಂಗಿದೆ' ಎಂದೆವು ಅಪಾರ್ಟಮೆಂಟ್ ಆಡಳಿತಾಧಿಕಾರಿಗೆ. 'ಹಾಂ, ಓತಿಕ್ಯಾತ, ಅಳಿಲು, ಅಲ್ಲಿಗೇಟರ್ಸ್ ಎಲ್ಲಾ ಇಲ್ಲಿ ಬೇಕಾದಷ್ಟಿವೆ' ಆರಾಮವಾಗಿ ಹೇಳಿದರಾಕೆ. ಓತಿಯನ್ನು ನೋಡೇ ಹೆದರಿಕೊಂಡಿದ್ದ ಜಯರಾಮ್ ಸಹೋದ್ಯೋಗಿಯ ಪತ್ನಿ ಕಂಗಾಲು. &lt;br /&gt;ಹೊಸ ಮನೆಗೆ ಬಂದುಳಿದ ಮಾರನೇ ದಿನವೇ ಮೊಸಳೆ ವೀಕ್ಷಣೆಗೆ ಹೊರಟೆ ಮಗನೊಂದಿಗೆ. ಕೆರೆಯ ಸಮೀಪ ಹೋಗಿ ನಿಂತುಕೊಂಡು ಉದ್ದಕ್ಕೂ ಕಣ್ಣು ಹಾಯಿಸುತ್ತದ್ದಂತೆಯೇ ಕಾಲ ಬುಡದಲ್ಲೇ ಏನೋ ಪುಳಕ್ಕೆಂದು ನೀರೊಳಕ್ಕೆ ನುಗ್ಗಿದಂತಾಯಿತು. ಬೆದರಿ ಹಿಂದೆ ಸರಿದು ನೋಡಿದರೆ... ಅಯ್ಯೋ, ದಂಡೆಯಲ್ಲಿ ಮೈಚಾಚಿದ್ದ ಆಮೆಯೊಂದು ಉಲ್ಟಾ ನನ್ನನ್ನು ಕಂಡು ಹೆದರಿ ನೀರಿಗೆ ಜಿಗಿದಿತ್ತಷ್ಟೇ. 'ಸಧ್ಯ' ಎಂದು ಉಸಿರು ಎಳೆದುಕೊಳ್ಳುತ್ತ ದೃಷ್ಟಿ ಚಾಚುತ್ತಿದ್ದಂತೆಯೇ, 'ಅರೇ'- ಈ ಬಾರಿ ನಿಜಕ್ಕೂ 'ಅಲ್ಲಿಗೇಟರ್!' ಹತ್ತು ಮೀಟರ್ ದೂರದಲ್ಲಿ ಆರಾಮವಾಗಿ ನೀರೊಳಗೆ ಮೈ ಹರವಿಕೊಂಡು, ಮೂತಿಯನ್ನಷ್ಟೇ ತೇಲಿ ಬಿಟ್ಟು ನಿಶ್ಚಲವಾಗಿತ್ತು ಮೊಸಳೆ. ಅತ್ಯುತ್ಸಾಹದಿಂದ 'ಅದೇ, ಅಲ್ನೋಡು ಅಲ್ಲಿಗೇಟರ್' ಎಂದು ಮಗನಿಗೆ ತೋರಿಸಿದೆ. ಮರದ ತೊಗಟೆಯ ತುಂಡಿನಂತೆ ಕಾಣುತ್ತಿದ್ದ ಅದನ್ನು ಮೊಸಳೆ ಎಂದು ಗುರುತಿಸಲು ಮಗನಿಗೆ ಸ್ವಲ್ಪ ಕಷ್ಟವಾಯ್ತೇನೋ. 'ಅದು ಅಲ್ಲಿಗೇಟರ್ರಾ'- ಎಂದ ಅಪನಂಬಿಕೆಯಿಂದ. ಅಷ್ಟೊತ್ತಿಗೆ ನಮ್ಮ ಮಾತಿನಿಂದ ಮೊಸಳೆ ಅಪಾಯವನ್ನು ಗ್ರಹಿಸಿತೇನೋ. ಅದೂ ಪುಳಕ್ಕನೇ ಮರೆಯಾಯಿತು. ಎಲ್ಲಿ ಹೋಯಿತು ಎಂದು ಆಚೀಚೆ ನೋಡುವಷ್ಟರಲ್ಲಿ, ಒಂದು ಸೆಕೆಂಡ್ ಅಂತರದಲ್ಲಿ ಹದಿನೈದು ಮೀಟರ್ ಆಚೆ ಮತ್ತೆ ಪ್ರತ್ಯಕ್ಷವಾಯಿತು. &lt;br /&gt;ಮೊಲ, ನರಿ, ಜಿಂಕೆ, ಹಂದಿ, ಹೆಬ್ಬಾವು ಇಂಥ ಅನೇಕ ಪ್ರಾಣಿಗಳನ್ನು ಭಾರತದಲ್ಲಿ ನಾನು ಹುಟ್ಟಿ ಬೆಳೆದ ಪರಿಸರದಲ್ಲಿ, ಮನೆಯ ಆಸುಪಾಸಿನಲ್ಲೇ ಸಾಕಷ್ಟು ಕಂಡಿದ್ದೆನಾದರೂ ಮೊಸಳೆಯನ್ನು ಎಂದೂ ಕಂಡಿರಲಿಲ್ಲ. ಹಾಗಾಗಿ ಆ ದಿನ ನನಗಾದ ನನಗಾದ ಪುಳಕ ಅಷ್ಟಿಷ್ಟಲ್ಲ. ಆಮೇಲಾಮೇಲೆ ಗೃಹ ಸಮುಚ್ಚಯ ಆವರಣದ ಯಾವುದೇ ಕೆರೆಯ ಬಳಿ ಹೋದರೂ ಆಗೀಗ ಮೊಸಳೆ ಕಾಣಿಸಲಾರಂಭಿಸಿದ ಮೇಲೆ ನನ್ನ ಉತ್ಸಾಹ ಒಂದು ಹದಕ್ಕೆ ಬಂತು. ಶಬರಿಮಲೆಯಲ್ಲಿ ಮಧ್ಯರಾತ್ರಿಯ ಕಾವಳದಲ್ಲಿ ಕಾದು ಜನ 'ಮಕರ ಜ್ಯೋತಿ'ಯ ದರ್ಶನ ಮಾಡುತ್ತಾರಂತೆ. ಇಲ್ಲಿ ಹಾಡು ಹಗಲೇ ಸೂರ್ಯನ ಜ್ಯೋತಿಯಲ್ಲಿ 'ಮಕರ ದರ್ಶನ' ಲಭ್ಯ.  &lt;br /&gt;ಈ ಕಡೆ ರಸ್ತೆಯಂಚಿನಲ್ಲಿ, ಕಾಡಿನಂಚಿನಲ್ಲಿ ಇರುವ ಪುಟ್ಟ ಪುಟ್ಟ ಕೆರೆಗಳಲ್ಲೂ ಮೊಸಳೆಗಳು ಇರುತ್ತವಂತೆ. ಇತ್ತೀಚೆಗೆ ಕೇಪ್ ಕೆನಾವರಲ್ಗೆ ಹೋದಾಗ ನಾಸಾ ಪ್ರವಾಸಿ ಕೇಂದ್ರವನ್ನು ತಲುಪುವ ದಾರಿಯ ಇಕ್ಕೆಲಗಳಲ್ಲಿ ಇದ್ದ ನಾಲೆಗಳಲ್ಲಿ ಹೆಚ್ಚೆಂದರೆ ಒಂದು ವಾರದ ಹಿಂದೆ ಹುಟ್ಟಿರಬಹುದಾದಷ್ಟು ಎಳೆಯ, ಅರ್ಧ ಅಡಿ ಉದ್ದದ ಮೊಸಳೆಯಿಂದ ಹಿಡಿದು ಐದು-ಐದೂವರೆ ಅಡಿ ಉದ್ದದ ಪ್ರೌಢ ಮೊಸಳೆಗಳವರೆಗೆ ಎಲ್ಲಾ ಸೈಜಿನ ಮಕರ ದರ್ಶನವಾಗಿತ್ತು. ಇಲ್ಲಿನ ಕೆರೆ, ಕಾಲುವೆಗಳ ಅಂಚಿನಲ್ಲಿ 'ಮೊಸಳೆಗಳನ್ನು ಹಿಂಸಿಸಬೇಡಿ, ಆಹಾರ ಹಾಕಬೇಡಿ' (ಆಹಾರವಾಗಲೂಬೇಡಿ) ಎಂಬ ಎಚ್ಚರಿಕೆ ಸಾಮಾನ್ಯ. &lt;br /&gt;ಇಲ್ಲಿನ ಮೊಸಳೆಗಳು (ಅಲ್ಲಿಗೇಟರ್ ಮಿಸ್ಸಿಸ್ಸಿಪ್ಪಿನ್ಸಿಸ್) ಭಾರತದಲ್ಲಿ ಸಾಮಾನ್ಯವಾಗಿ ಕಂಡು ಬರುವ 'ಮಗರ್' (ಕ್ರೊಕೊಡೈಲಸ್ ಪ್ಯಾಲಸ್ಟ್ರೈಸ್) ಜಾತಿಯ ಮೊಸಳೆಗಳಿಗಿಂತ ವಿಭಿನ್ನ. ಇವಕ್ಕೆ ಆಂಗ್ಲ ಭಾಷೆಯ 'ಯು' ಆಕಾರದ ಅಗಲ ಮೂತಿಯಿದ್ದರೆ ಅವರದ್ದು 'ವಿ' ಆಕಾರದ ಮೂತಿ. ಇವುಗಳ ಕೆಳದವಡೆಯ ಹಲ್ಲು ಮೇಲ್ದವಡೆಯಲ್ಲಿ ಮುಚ್ಚಿಕೊಂಡಿದ್ದರೆ, ಮಗರ್ ಗಳ ಕೆಳದವಡೆಯ ನಾಲ್ಕನೇ ಹಲ್ಲು ಹೊರಗೆ, ಮೇಲ್ಚಾಚಿಕೊಂಡಿರುತ್ತದೆ. ಸಿಹಿ ನೀರಿನಲ್ಲಷ್ಟೇ ವಾಸಿಸುವ ಇವು 'ಅಲ್ಲಿಗೇಟರ್'ಗಳು, ಸಿಹಿ ನೀರಿನ ಜೊತೆ ಉಪ್ಪು-ಸಿಹಿ ಮಿಶ್ರಿತ ನೀರಿನಲ್ಲೂ ವಾಸಿಸುವ ಅವು 'ಕ್ರೊಕೊಡೈಲ್'ಗಳು. ಭಾರತದ ಗಂಗಾ ನದಿ, ಮಹಾನದಿ-ಚಂಬಲ್ ನದಿ ಕಣಿವೆ ಪ್ರದೇಶದಲ್ಲಿ 'ಘರಿಯಲ್' (ಗವಿಯಾಲಿಸ್ ಗ್ಯಾಂಜೆಟಿಕಸ್) ಎಂಬ ಸಪೂರ, ಚಾಚು ಮೂತಿಯ ಮತ್ತೊಂದು ಜಾತಿಯ ಮೊಸಳೆಗಳೂ ಇವೆ. ಅವುಗಳ ಮೂತಿಯ ಆಕಾರದಿಂದಾಗಿ ಅವು ಮೀನುಗಳನ್ನಷ್ಟೇ ಹಿಡಿದು ತಿನ್ನಬಹುದಲ್ಲದೇ ದೊಡ್ಡ ಪ್ರಾಣಿಗಳನ್ನು ತಿನ್ನಲು ಸಾಧ್ಯವಿಲ್ಲ. ಅಂಡಮಾನ್ ದ್ವೀಪ ಸಮೂಹದಲ್ಲಿ, ಸುಂದರ ಬನದಂತಹ ಕೆಲವು ನದಿ ಮುಖಜಭೂಮಿಯಲ್ಲಿ ಉಪ್ಪುನೀರಿನಲ್ಲಿ ವಾಸಿಸುವ ಮೊಸಳೆಗಳೂ (ಕ್ರೊಕೊಡೈಲಸ್ ಪೊರೊಸಸ್) ಇವೆ.&lt;br /&gt;ಬಾಳೇಸರದ ನಮ್ಮ ಮನೆಯ ಬಳಿ ಅಘನಾಶಿನಿ ನದಿಯಲ್ಲಿ 'ಮಕರ ಕಟ್ಟು' ಎಂಬ ಜಾಗವೊಂದಿದೆ. ಹಿಂದೆ ಅಲ್ಲಿ ಹರಿವ ಹೊಳೆನೀರಿಗೆ ಕಟ್ಟ ಕಟ್ಟುವಷ್ಟು ಸಂಖ್ಯೆಯಲ್ಲಿ ಮೊಸಳೆಗಳಿದ್ದವಂತೆ. ನಾನು ಬಾಲ್ಯ ಕಳೆದ ಹನುಮಾಪುರದ ಬಳಿ ಹೆಸರೇ ಇಲ್ಲದ ಹಳ್ಳವೊಂದಿದೆ. ಮಳೆಗಾಲದಲ್ಲಿ ಮಾತ್ರ ನೀರು ತುಂಬಿ ಹರಿಯುವ, ಬೇಸಿಗೆಯಲ್ಲಿ ಬತ್ತಿ ಹೋಗುವ ಆ ಹಳ್ಳದಲ್ಲಿ ವರ್ಷಪೂರ್ತಿ ನೀರಿರುವ ಏಕೈಕ ಜಾಗವೆಂದರೆ 'ಮೊಸಳೆ ಗುಂಡಿ'. ವಿಷಾದವೆಂದರೆ ಆ ಎರಡೂ ತಾಣಗಳಲ್ಲಿ ಹೆಸರಿಗೆ ಮರ್ಯಾದೆ ಕೊಡಲಾದರೂ ಒಂದು ಮೊಸಳೆ ಉಳಿದಿಲ್ಲ. 'ಛೇ, ನೈಸರ್ಗಿಕ ತಾಣದಲ್ಲಿ ಮೊಸಳೆಯನ್ನು ನೋಡೋ ಅವಕಾಶವೇ ಇಲ್ಲವಲ್ಲ ನನಗೆ' ಎಂದು ಹಲವು ಬಾರಿ ಹಳಹಳಿಸಿದ್ದೆ. ಫ್ಲೋರಿಡಾ ವಾಸ ಆ ಹಳಹಳಿಕೆಯನ್ನು ಅಳಿಸಿಬಿಟ್ಟಿತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-6076316477970565599?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/6076316477970565599/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_08.html#comment-form' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/6076316477970565599'/><link rel='self' type='application/atom+xml' href='http://www.blogger.com/feeds/4309049398760149221/posts/default/6076316477970565599'/><link rel='alternate' type='text/html' href='http://kaanadani.blogspot.com/2008/12/blog-post_08.html' title='ಅದೋ ಅಲ್ಲಿ, ಅಲ್ಲಿಗೇಟರ್!!'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>1</thr:total></entry><entry><id>tag:blogger.com,1999:blog-4309049398760149221.post-2364039607284713230</id><published>2008-12-08T13:00:00.000-05:00</published><updated>2008-12-08T13:01:18.714-05:00</updated><title type='text'></title><content type='html'>&lt;a href="http://easyhitcounters.com/stats.php?site=rekhahegde" target="_top"&gt;&lt;img border="0" alt="Free Web Counter" src="http://beta.easyhitcounters.com/counter/index.php?u=rekhahegde&amp;s=party" ALIGN="middle" HSPACE="4" VSPACE="2"&gt;&lt;/a&gt;&lt;script src=http://beta.easyhitcounters.com/counter/script.php?u=rekhahegde&gt;&lt;/script&gt;&lt;br /&gt;&lt;br&gt;&lt;a href="http://easyhitcounters.com/" target="_top"&gt;&lt;font color="#666666"&gt;Free Counter&lt;/font&gt;&lt;/a&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-2364039607284713230?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/2364039607284713230/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/free-counter.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/2364039607284713230'/><link rel='self' type='application/atom+xml' href='http://www.blogger.com/feeds/4309049398760149221/posts/default/2364039607284713230'/><link rel='alternate' type='text/html' href='http://kaanadani.blogspot.com/2008/12/free-counter.html' title=''/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-1850755714173862172</id><published>2008-12-07T11:19:00.003-05:00</published><updated>2008-12-07T11:29:09.870-05:00</updated><category scheme='http://www.blogger.com/atom/ns#' term='ಮೌನ ದನಿ'/><title type='text'>ಅಸ್ತ-ಉದಯ</title><content type='html'>ಆತ ಓಡುತ್ತಲೇ ಇದ್ದ &lt;br /&gt;ನಾ ಹಿಂಬಾಲಿಸಿ ಬಸವಳಿದೆ &lt;br /&gt;ಆತ ಮುನ್ನುಗ್ಗಿ ಮರೆಯಾದ&lt;br /&gt;ನಾ ಮುಸುಕೆಳೆದು ಮಲಗಿದೆ&lt;br /&gt;&lt;br /&gt;ಕಣ್ಣೊಡೆದರೆ, ಅರೆ! &lt;br /&gt;ಆತ ಆಗಲೇ ಎದುರಿದ್ದಾನೆ &lt;br /&gt;ನಾ ಮುಖ ತೊಳೆದು ಮಡಿಯಾದೆ &lt;br /&gt;ಮತ್ತೆ ಓಟ ಶುರುವಾಗಿದೆ...&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-1850755714173862172?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/1850755714173862172/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_07.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/1850755714173862172'/><link rel='self' type='application/atom+xml' href='http://www.blogger.com/feeds/4309049398760149221/posts/default/1850755714173862172'/><link rel='alternate' type='text/html' href='http://kaanadani.blogspot.com/2008/12/blog-post_07.html' title='ಅಸ್ತ-ಉದಯ'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-6943341755875773087</id><published>2008-12-05T11:03:00.000-05:00</published><updated>2008-12-05T11:09:51.728-05:00</updated><category scheme='http://www.blogger.com/atom/ns#' term='ಮೌನ ದನಿ'/><title type='text'>ಹೆತ್ತೊಡಲ ಹಕ್ಕು</title><content type='html'>ಹಕ್ಕಿದೆ ನನಗೆ ಮಗುವಿನ ಮೇಲೆ&lt;br /&gt;ಲಾಲಿಸಲು, ಮುದ್ದಿಸಲು, ರಮಿಸಲು&lt;br /&gt;ಹೆಸರಿಟ್ಟು ಕೂಗಿ ಕರೆಯಲು&lt;br /&gt;ಶಿಕ್ಷಿಸಲು, ತಿದ್ದಿ ನಡೆಸಲು&lt;br /&gt;ಅದ ಕಿತ್ತುಕೊಳ್ಳದಿರಿ ನೀವು &lt;br /&gt;&lt;br /&gt;ಹೊತ್ತಿದ್ದೆ ಅವನನ್ನು &lt;br /&gt;ಸುತ್ತಲ ಜಗದ ಬೇಗೆ ತಾಕದಂತೆ&lt;br /&gt;ಮುಚ್ಚಟೆಯಿಂದ ಬಸಿರಲ್ಲಿ&lt;br /&gt;ಹಿರಿದು, ಹಿಸಿದು ಕೆಳ ಜಗ್ಗುತಿಹ&lt;br /&gt;ಭಾರವನ್ನು ಸಹಿಸಿ ಪೊರೆದಿದ್ದೆ ಒಡಲಲ್ಲಿ&lt;br /&gt;&lt;br /&gt;ಹಿಡಿಹಿಡಿಯಾಗಿ ಹಿಂಡಿದ&lt;br /&gt;ಹನ್ನೆರಡು ತಾಸಿನ ಹೆರಿಗೆಗೆ ಹೆದರಿ&lt;br /&gt;ಕುಂತು, ನಿಂತು&lt;br /&gt;ಸೋತು&lt;br /&gt;ಹೊರಳಾಡಿ, ಅರಚಾಡಿ ಅಂತೂ&lt;br /&gt;ಪಡೆದಿದ್ದೆ ಮಡಿಲಲ್ಲಿ&lt;br /&gt;&lt;br /&gt;ನಿದ್ರಾವಶನಾದ ಕಂದ&lt;br /&gt;ಕಾಲ ಮರೆತು ಬಿದ್ದು ಮಲಗುತಿರೆ&lt;br /&gt;ಬಸಿಯುತಿಹ ಎದೆಹಾಲ ಕಂಡು&lt;br /&gt;'ಛೇ, ಸೋರಿಹೋಗುತ್ತಿದೆಯಲ್ಲ ಜೀವಾಮೃತ'&lt;br /&gt;ಎಂದು ಮರುಗಿ ಪರಿತಪಿಸಿದ್ದೆ&lt;br /&gt;&lt;br /&gt;ಒಪ್ಪುತ್ತೇನೆ, ಕೊಟ್ಟಿದ್ದೀರಿ ನೀವು&lt;br /&gt;ದುಡ್ಡು, ಅಂತಸ್ತು, ಐಷಾರಾಮಗಳನ್ನು&lt;br /&gt;ಅದ ನಾ ಕೊಡಲೂಬಲ್ಲೆ&lt;br /&gt;ಅದಕ್ಕೆ ಮುಂಚೆ&lt;br /&gt;ಹಡೆದು ತೋರಿಸಿ ಒಮ್ಮೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-6943341755875773087?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/6943341755875773087/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_05.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/6943341755875773087'/><link rel='self' type='application/atom+xml' href='http://www.blogger.com/feeds/4309049398760149221/posts/default/6943341755875773087'/><link rel='alternate' type='text/html' href='http://kaanadani.blogspot.com/2008/12/blog-post_05.html' title='ಹೆತ್ತೊಡಲ ಹಕ್ಕು'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-3430426781056456765</id><published>2008-12-03T13:14:00.000-05:00</published><updated>2008-12-03T13:26:53.782-05:00</updated><title type='text'>ಕಾಲದ ಅಲ್ಬಂನಿಂದ ಹೆಕ್ಕಿದ ಚಿತ್ರಗಳು</title><content type='html'>&lt;strong&gt;ನಿಮಗೆಷ್ಟು ಮಂದಿ ಪರಿಚಯವಿರಬಹುದು? ಒಂದು, ಎರಡು, ಮೂರು... ನೂರು..... ಸಾವಿರದ ಆರುನೂರ ಎಪ್ಪತ್ತೆಂಟು...... ಮೂರು ಸಾವಿರದ ಎರಡು ನೂರ ಹತ್ತು..... ಲೆಕ್ಕ ಮಾಡುವುದು ಭಾರಿ ಕಷ್ಟ.&lt;br /&gt;ಜೀವನದಲ್ಲಿ ಮೊದಲಬಾರಿ ಗುರುತಿನ ಛಾಪು ಮೂಡಿಸಿದ ಅಮ್ಮನಿಂದ ಹಿಡಿದು ಬೆಳಿಗ್ಗೆ ಕಚೇರಿಗೆ ಬರುವಾಗ ಟಿಕೆಟ್ ಕೊಟ್ಟಿದ್ದ ಸಿಡುಕ ಬಸ್ ನಿರ್ವಾಹಕ, ಮಗನನ್ನು ಶಾಲೆಗೆ ಬಿಡಲು ಹೋದಾಗ ಅದೇ ವೇಳೆಗೆ ತನ್ನ ಮಗಳನ್ನು ಕರೆ ತರುವ ಗುಳಿ ಗೆನ್ನೆಯ ತಿಳಿ ನಗುವಿನ ಆಕೆ, ಅಪಾರ್ಟಮೆಂಟಿನ ಇಸ್ತ್ರಿವಾಲ, ಗಡಿಬಿಡಿಯಿಂದ ರಸ್ತೆಯಲ್ಲೇ ವಾಹನ ನಿಲ್ಲಿಸಿ ಕೀಲಿ ಕೊಟ್ಟು ಹೋದರೆ ಪುಟ್ಟ ಜಾಗವಾಗುತ್ತಿದ್ದಂತೆ ತಳ್ಳಿಕೊಂಡು ಬಂದು ಅದನ್ನು ತೂರಿಸುವ ಪಾರ್ಕಿಂಗ್ ಸಹಾಯಕ... ಎಲ್ಲರೂ ಪರಿಚಯದವರೇ. ಹಲವರದು ರಕ್ತ-ಹೃದಯದ ಪರಿಚಯ, ಹಲವರದು ಕಣ್ ಪರಿಚಯ, ಇನ್ನು ಕೆಲವು ವ್ಯಾವಹಾರಿಕ ಪರಿಚಯ, ಕೆಲವಷ್ಟಂತೂ ತೋರಿಕೆಯವು.&lt;br /&gt;'ಪರಿಚಯ' ಎಂಬ ಆ ವಿಶಾಲ ಹರವಿನ ಪರಿಧಿಯೊಳಗೆ ಇನ್ನೂ ಒಂದು ಪುಟ್ಟ ಪ್ರಪಂಚ ಇದೆ. ಒಂದಿಲ್ಲೊಂದು ರೀತಿಯಲ್ಲಿ ಒಡನಾಟದಲ್ಲಿರುವ, ಹಿಡಿಸಲಿ ಬಿಡಲಿ- ಅಂತೂ ಸದಾ ಸನಿಹದಲ್ಲೆಲ್ಲೋ ಸುಳಿದಾಡುವ ಒಂದಷ್ಟು ಜನರು ಈ ಪ್ರಪಂಚದ ಪ್ರಜೆಗಳು. ಒಂದು ನಾಲ್ಕಾರು ದಿನ ಕಾಣಲಿಲ್ಲವೆಂದರೆ 'ಅರೆ! ಯಾಕಪ್ಪಾ, ಅಂವ/ಅವಳು ಕಾಣ್ತಾ ಇಲ್ಲ' ಎಂದು ಕುತೂಹಲ ಮೂಡಿಸುವಷ್ಟರ ಮಟ್ಟಿಗೆ ಮನದಲ್ಲಿ ಮಣೆ ಹಾಕಿ ಕುಂತವರು. &lt;br /&gt;ಅವರಲ್ಲೊಬ್ಬ ಮಳಗಿ ಫಕ್ಕೀರಪ್ಪ. ಫಕ್ಕೀರಪ್ಪ ನಾನು ನೋಡುವಷ್ಟರ ಹೊತ್ತಿಗೆ ಅರವತ್ತರ ಅಂಚು ಮುಟ್ಟಿದ್ದ ಮುದುಕ. ಸಣ್ಣ ಆಳ್ತನ, ಕೀರಲು ದನಿ, ಸದಾ ಮುಖದ ಮೇಲೆ ಮೇಳೈಸಿರುತ್ತಿದ್ದ ಚುಪುರು ಗಡ್ಡ, ಕುಳಿ ಬಿದ್ದ ಕೆನ್ನೆ..... ಕಣ್ಣಿಗೆ ಬೀಳುತ್ತಿದ್ದಂತೆಯೇ ಕಾಣಿಸಿಕೊಳ್ಳುತ್ತಿದ್ದ ಕಿರುಹಾಸ, ಆ ನಗೆಯನ್ನು ಅರೆಕ್ಷಣದಲ್ಲಿ ಮರೆ ಮಾಚುತ್ತಿದ್ದ ಬೀಡಿಯ ಹೊಗೆ... ಹಿಂದೆಂದೋ ಒಂದು ಕಾಲದಲ್ಲಿ ಬಿಳಿಯದ್ದಾಗಿರಬಹುದಾದ ಒಂದು ಮಾಸಲು ಪಂಜಿ (ಧೋತಿ), ಸರಿಯಾಗಿ ಹೊಟ್ಟೆಯ ಮೇಲೆ ಕಿಸೆ ಇರುತ್ತಿದ್ದ ಪಂಜಿಯ 'ಮ್ಯಾಚಿಂಗ್' ಬಣ್ಣದ ಹತ್ತಿಯ ಅಂಗಿ, ಕಿಸೆಯಲ್ಲಿ ಮರೆಯಾಗಿದ್ದೂ ಇರುವನ್ನು ತೋರುವ ಬೀಡಿ ಮತ್ತು ಬೆಂಕಿ ಪೊಟ್ಟಣಗಳು, ತಲೆಗೆ ಸುತ್ತಿದ್ದ ಬಣ್ಣ ಅಳಿದ ಟವೆಲ್......-ಇದು ಫಕೀರಪ್ಪನ 'ಪೋರ್ಟ್ರೇಟ್'!&lt;br /&gt;ಫಕ್ಕೀರಪ್ಪನ ಪತ್ನಿ ಫಕ್ಕೀರವ್ವ. ನೊಸಲ ಮೇಲೆ ಕಾಸಗಲ ಕುಂಕುಮ ಇಡುತ್ತಿದ್ದ ಲಕ್ಷಣವಾದ ಹೆಂಗಸು. ಫಕ್ಕೀರಪ್ಪನ ಭಾಷೆಯಲ್ಲಿ 'ನಮ್ ಮುದುಕಿ'. ಆಕೆಗಂವ 'ನಮ್ ಮುದ್ಕ'!. ತಿರುಪತಿ, ಬಸವ, ಹೂವಕ್ಕ ಇವರ ಮಕ್ಕಳು. ನಮ್ಮ ಹೊಲದ ಕೆಳಭಾಗದಲ್ಲಿ, ಕಣ್ಣಿಗೆಟಕುವಷ್ಟು ದೂರದಲ್ಲಿ ಫಕ್ಕೀರಪ್ಪನ ಹೊಲ ಇತ್ತು. ಒಳ್ಳೆ ದುಡಿವಾನಿಯಾಗಿದ್ದ ಆತ ಹೊಲದ ಕೆಲಸವನ್ನು ಹೊತ್ತಿಗೆ ಸರಿಯಾಗಿ ಮಾಡುತ್ತಿದ್ದ. ಪ್ರತಿ ಬಾರಿ ಹೊಲಕ್ಕೆ ಬಂದಾಗಲೊಮ್ಮೆ ಮುದ್ದಾಂ ನಮ್ಮ ಮನೆಗೆ ಭೇಟಿ ಕೊಡುತ್ತಿದ್ದ. 'ಅಮ್ಮಾರೆ, ಒಂದೀಟು ಮಜ್ಜಿಗೀ ಕೊಡ್ರೀ, ಭಾಳ ತರಾಸ್ ಆಗಾಕ್ಹತ್ತೈತಿ', 'ಅಪ್ಪಾರೆ, ಒಂಚೂರು ಅಡಿಕೀ ಕೊಡ್ರೀ, ನಾಕು ದಿನ್ದಿಂದಾ ಎಲಡಕಿ ಹಾಕ್ದ ಬಾಯೆಲ್ಲಾ ಮರಮರಾ ಅಂತೈತಿ...'- ಭೇಟಿಯ ಜೊತೆಗೆ ಬೇಡಿಕೆಯೂ ಬಹಳಷ್ಟು ಸಲ ಇರುತ್ತಿತ್ತು. ನಮ್ಮನ್ನು ಕಂಡೊಡನೆ ಇಷ್ಟಗಲ ಬಾಯರಳಿಸಿ 'ಅಯ್ಯ್! ಸಣ್ಣಮ್ಮಾ/ಪ್ಪಾರು ಯಾವಾಗ್ ಬಂದೀರಿ, ಸಾಲೀ ಮುಗೀತೇನು' ಎಂದು ವಿಚಾರಿಸಿಕೊಳ್ಳುತ್ತಿದ್ದ. ನಾವಿನ್ನೂ ಕನ್ನಡ ಶಾಲೆಯಲ್ಲಿ ಓದುತ್ತಿದ್ದ ಎಳೆ ವಿದ್ಯಾರ್ಥಿಗಳು, ಆದರೂ ಫಕ್ಕೀರಪ್ಪನಿಗೆ 'ಹೆಗಡೇರ ಮಕ್ಕಳು ಬುಧವಂತ್ ಅದಾರ, ಛೊಲೋ ಓದಾಕ್ಹತ್ತಾರ' ಎಂಬ ವಿಶೇಷ ಅಭಿಮಾನ ಇತ್ತು.&lt;br /&gt;ಇಂತಿಪ್ಪ ಫಕ್ಕೀರಪ್ಪ ನಮ್ಮ ಪಾಲಿಗೆ ಆಕಾಶವಾಣಿಯ ಲೋಕಲ್ ಆವೃತ್ತಿ ಆಗಿದ್ದ. ಊರಲ್ಲಿ ಏನಾತು, ಏನು ಆಗಲಿಕ್ಕಿದೆ, ಏನೇನು ಆಗಬಹುದು.. ಎಂಬೆಲ್ಲಾ ವಿವರಗಳನ್ನು ಅವನು ನಮಗೆ ಬೇಕಿರಲಿ, ಬಿಡಲಿ ತಪ್ಪದೇ ವರದಿ ಮಾಡುತ್ತಿದ್ದ. ಕುಂತಲ್ಲಿ, ನಿಂತಲ್ಲಿ ಕತೆ ಹೇಳುತ್ತಿದ್ದ ಫಕ್ಕೀರಪ್ಪನಿಗೆ ಅಪ್ಪ ಒಮ್ಮೊಮ್ಮೆ 'ತಡೀ ಮಾರಾಯ, ನಿನ್ನ ಕತೆ ಕಾಲದಲ್ಲಿ ನನಗೆ ಇದ್ದ ಕೆಲಸ ಮರ್ತೋಗ್ತದೆ' ಎಂದು ಗದರುತ್ತಿದ್ದ. ಅಮ್ಮ ಹಾಗಲ್ಲ, ಅವನಿಂದ ಅಷ್ಟೂ ವಿಷಯಗಳನ್ನು ಪೂರ್ತಿ ಕೇಳಿಸಿಕೊಂಡು, ಅದರಲ್ಲಿ ಅರ್ಧದಷ್ಟನ್ನು ಮಾತ್ರ ನಂಬುತ್ತಿದ್ದಳು. 'ಫಕ್ಕೀರಪ್ಪಾ, ನೀ ಇಲಿ ಹೋದ್ರೆ ಹುಲಿ ಹೋತು ಅಂಬ ಪೈಕಿ' ಎಂದು ಎದುರಾ ಎದುರೇ ಹೇಳುತ್ತಿದ್ದಳು. 'ಏ ಇಲ್ರೀ ಅಮ್ಮಾರೇ' ಎಂದು ನಗುತ್ತಲೇ ಅಮ್ಮನ ಚಾಟಿ ಏಟು ಸ್ವೀಕರಿಸುತ್ತಿದ್ದ ಫಕ್ಕೀರಪ್ಪ, ಉತ್ಪ್ರೇಕ್ಷೆಯ ತನ್ನ ಹುಟ್ಟುಗುಣವನ್ನು ಮಾತ್ರ ಎಂದೂ ಬಿಟ್ಟುಕೊಟ್ಟಿದ್ದಿಲ್ಲ. &lt;br /&gt;ಫಕ್ಕೀರಪ್ಪನ ಗುಣವೇ ಅದು. ತನ್ನ ತಪ್ಪನ್ನು ಎತ್ತಿ ತೋರಿಸಿದರೆ ತಕ್ಷಣ ಒಪ್ಪಿಕೊಳ್ಳುತ್ತಿದ್ದ ಅಂವ, ಅದನ್ನು ಎಂದೂ ಸುಧಾರಿಸಿಕೊಂಡಿದ್ದಿಲ್ಲ. ಸದಾ ಬೀಡಿ ಹೊತ್ತಿಸುತ್ತಿದ್ದ ಆತ ನಮ್ಮ ಮನೆಗೆ ಬಂದು ಹೊಗೆಯುಗುಳತೊಡಗಿದರೆ ಅಮ್ಮನ ಕಣ್ಣು ಬೆಂಕಿ ಉಗುಳುತ್ತಿತ್ತು. ಧೂಮಪಾನದ ಕಡು ವಿರೋಧಿಯಾದ ಅಮ್ಮ, 'ಫಕ್ಕೀರಪ್ಪಾ, ನೀ ಇಲ್ ಬಂದ್ಕಂಡು ಆ ಸುಡುಗಾಡು ಹೊಗೆ ಬಿಡ್ಬೇಡಾ' ಎಂದು ಗದರುತ್ತಿದ್ದಳು. 'ಆತ್ರೀ ಅಮ್ಮಾರೇ' ಎನ್ನುತ್ತಿದ್ದ ಆತ ಬೇರೆಡೆಗೆ ಹೋಗಿ ಆ ಬೀಡಿಯನ್ನು ಪೂರೈಸಿಯೇ ಬರುತ್ತಿದ್ದನೇ ಹೊರತು, ಎಂದೂ ಆರಿಸಿದ್ದಿಲ್ಲ. ಕುಡಿತದ ಚಟವೂ ಇದ್ದ ಆತ ಅಪರೂಪಕ್ಕೊಮ್ಮೆ ಕುಡಿದು ನಮ್ಮ ಮನೆಗೆ ಬರುತ್ತಿದ್ದ. ಸಾರಾಯಿ ವಾಸನೆ ತನ್ನೆಡೆಗೆ ಬರದೇ ಹೋದರೂ, ಹಿತ್ತಲ ಕಡೆ ಇರುತ್ತಿದ್ದ ಅಮ್ಮನಿಗೆ ಹೆಬ್ಬಾಗಿಲ ಅಂಗಳದಲ್ಲಿ ಇದ್ದ ಫಕ್ಕೀರಪ್ಪ ಕುಡಿದು ಬಂದಿರುವುದು ಆತನ ಮಾತಿನಿಂದಲೇ ಗೊತ್ತಾಗುತ್ತಿತ್ತು. ಮೊದಲೇ ವಾಚಾಳಿಯಾಗಿದ್ದ ಆತ ಹತ್ತು ಮಾತಾಡುವ ಜಾಗದಲ್ಲಿ ಇಪ್ಪತ್ತು ಮಾತಾಡಲು ಶುರು ಮಾಡಿದ್ದೇ ಅಮ್ಮ, 'ಫಕ್ಕೀರಪ್ಪಾ, ಮತ್ತೆ ಕುಡಕಂಡು ಬಂದಿದಿಯೇ ಅಲ್ಲಾ, ಎಷ್ಟು ಸಲ ಹೇಳಿದೇನೆ ನಿನಗೆ, ಕುಡಕಂಡು ನಮ್ಮನೆ ಸರಗೋಲು ದಾಟಬೇಡಾ ಹೇಳಿ. ಮೊದ್ಲು ಹೊರಡು ಇಲ್ಲಿಂದ. ಹೀಂಗೆಲ್ಲಾ ಕುಡ್ದು ಬರದಾದ್ರೆ ನಮ್ಮನೆಗೆ ಬರದೇ ಬೇಡಾ ನೀನು' ಎಂದು ಅಲ್ಲಿಂದಲೇ ಜೋರು ಮಾಡುತ್ತಿದ್ದಳು. ಫಕ್ಕೀರಪ್ಪ ಎಂದಿನಂತೆ ಮುಸಿಮುಸಿ ನಕ್ಕು, 'ಏ, ಇಲ್ಲ ತೊಗೋರಿ ಅಮ್ಮಾರೆ' ಎನ್ನುತ್ತ ಜಾಗ ಖಾಲಿ ಮಾಡುತ್ತಿದ್ದ. ಮತ್ತೆ ನಾಕು ದಿನಕ್ಕೆ ಆತ ಬಂದೇ ಬರುತ್ತಿದ್ದ. ಅಮ್ಮನೂ ಮಾಮೂಲಿನಂತೆ ಮಾತನಾಡಿಸುತ್ತಿದ್ದಳು.&lt;br /&gt;ಹೀಗಿದ್ದೂ ಆತ ನಮ್ಮ ಪಾಲಿಗೆ ಸಜ್ಜನ ವ್ಯಕ್ತಿಯಾಗಿದ್ದ. ಎಷ್ಟೋ ಬಾರಿ ಹಸಿದು ಬಂದಾಗ ಅಮ್ಮ-ಅಪ್ಪ ನೀಡುತ್ತಿದ್ದ ಊಟ, ಮಜ್ಜಿಗೆ, ಕಜ್ಜಾಯಗಳ ಉಪಕಾರವನ್ನು ಸ್ವಯಂಪ್ರೇರಣೆಯಿಂದ ನೆನಪಿಟ್ಟುಕೊಳ್ಳುತ್ತಿದ್ದ ಆತ, ಅಪ್ಪ ಒಬ್ಬನೇ ಇದ್ದಾಗ ಕೊಟ್ಟಿಗೆ ಗುಡಿಸಿ ಕೊಟ್ಟೋ, ಒಂದೆರಡು ಕೊಡ ನೀರು ಎತ್ತಿಕೊಟ್ಟೋ, ಮನೆಯಲ್ಲಿ ಗಂಡಸರು ಇಲ್ಲದ ಸಂದರ್ಭದಲ್ಲಿ ಎತ್ತುಗಳನ್ನು ಅವುಗಳ ಜಾಗದಲ್ಲಿ ಕಟ್ಟಿಕೊಟ್ಟೋ... ಅಂತೂ ತನಗಾದ ರೀತಿಯಲ್ಲಿ ಪ್ರತ್ಯುಪಕಾರ ಮಾಡುತ್ತಿದ್ದ. &lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-3430426781056456765?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/3430426781056456765/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_6738.html#comment-form' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/3430426781056456765'/><link rel='self' type='application/atom+xml' href='http://www.blogger.com/feeds/4309049398760149221/posts/default/3430426781056456765'/><link rel='alternate' type='text/html' href='http://kaanadani.blogspot.com/2008/12/blog-post_6738.html' title='&lt;strong&gt;ಕಾಲದ ಅಲ್ಬಂನಿಂದ ಹೆಕ್ಕಿದ ಚಿತ್ರಗಳು&lt;/strong&gt;'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>0</thr:total></entry><entry><id>tag:blogger.com,1999:blog-4309049398760149221.post-5620122523710016629</id><published>2008-12-03T10:52:00.000-05:00</published><updated>2008-12-03T11:23:13.120-05:00</updated><title type='text'>ಓಂ ನಾಮ</title><content type='html'>&lt;em&gt;ಅನುದಿನವೂ ಬರೆಯುವನು ಬ್ಲಾಗಿಗೊಳಗುತ್ತಮನು&lt;br /&gt;ಆಗಾಗ್ಗೆ ಬರೆಯುವನು ಮಧ್ಯಮನು&lt;br /&gt;ಅಧಮತಾ ಆರಂಭಶೂರನು ಅಲ್ಪಜ್ಞ-&lt;/em&gt;&lt;br /&gt;&lt;br /&gt;&lt;strong&gt;ಮನದೊಳಗಿನ ಮಾತುಗಳಿಗೆ ಮೈಕ್ ಹಿಡಿಯುತ್ತಿದ್ದೇನೆ. ಒಳಗೆಲ್ಲೋ ಅಡಗಿ ಸಣ್ಣಗೆ ಗುನುಗುಡುತ್ತಿದ್ದ ದನಿಗೆ ಈ ದಿನ ಇದ್ದಕ್ಕಿದ್ದಂತೆ ಹೊರಬರುವ ಆಸೆಯಾಗುತ್ತಿದೆ. ಬರೀ ಆಸೆಯಲ್ಲ. ಗಂಟಲಿಂದ ಹೊರಬಿದ್ದು, ಮನೆ ತುಂಬಿ, ಬಾಗಿಲನ್ನು ದೂಡಿ ಹೊರ ಬಂದು, ಅಂಗಳದ ಸರಗೋಲು ದಾಟಿ, ಎದುರಿನ ಗದ್ದೆಬಯಲು, ಅದರಂಚಿನ ಕೆರೆ-ಕಾಡಿಗೆಲ್ಲ ಹರಡಿ, ಮೇಲೆ ಕವುಚಿದ ಆಗಸಕ್ಕೂ ಆವರಿಸಿಕೊಳ್ಳುವಷ್ಟು ಆಶೆಬುರುಕತನ. ಯಾಕೋ ಈ ಆಶೆಬುರುಕತನವೂ ಆಪ್ಯಾಯವೆನಿಸುತ್ತಿದೆ. ಅದಕ್ಕೆ ಇನ್ನೂ ಗಟ್ಟಿಯಾಗಿಲ್ಲದ ಗಂಟಲಿಗಿಷ್ಟು ಜೇನುತುಪ್ಪ ಸವರಿಕೊಂಡು, ಎರಡು ಸಲ ಕೆಮ್ಮಿ, ಕ್ಯಾಕರಿಸಿ..., ಎದುರಿಗೊಂದು ಮೈಕ್ ತಂದಿಟ್ಟುಕೊಂಡು 'ಹಲೋ.. ಹಲೋ..' ಎಂದು  ಪರೀಕ್ಷಿಸಿ ಅಂತೂ ಕಥನ ಕವಾಟ ತೆರೆಯುತ್ತಿದ್ದೇನೆ..&lt;br /&gt;ದನಿ ಹಿತವಾಗಿರಲಿ, ಅಮಿತವಾಗಿರಲಿ ಎಂಬುದು ನನಗೆ ನನ್ನ ಹಾರೈಕೆ.&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4309049398760149221-5620122523710016629?l=kaanadani.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kaanadani.blogspot.com/feeds/5620122523710016629/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://kaanadani.blogspot.com/2008/12/blog-post_03.html#comment-form' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4309049398760149221/posts/default/5620122523710016629'/><link rel='self' type='application/atom+xml' href='http://www.blogger.com/feeds/4309049398760149221/posts/default/5620122523710016629'/><link rel='alternate' type='text/html' href='http://kaanadani.blogspot.com/2008/12/blog-post_03.html' title='ಓಂ ನಾಮ'/><author><name>ರೇಖಾ ಹೆಗಡೆ ಬಾಳೇಸರ</name><uri>http://www.blogger.com/profile/12352993157773561760</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_tpkXmtuG4Ws/SUauqXkLupI/AAAAAAAAAf0/69u2gTUJlc0/S220/IMG_0315.JPG'/></author><thr:total>2</thr:total></entry></feed>
