ಗುರುವಾರ, ಜುಲೈ 30, 2009

ಕ್ಷಮೆ ಇರಲಿ

ಪ್ರಿಯ ಸ್ನೇಹಿತರೇ,
ಬಹಳ ದಿನಗಳಿಂದ ಬಳಸದೇ 'ಪೆನ್ನು' ಧೂಳು ಹಿಡಿದಿತ್ತು. ಒಳಗಣ ಶಾಯಿಯೂ ಒಣಗಿ ಗಟ್ಟಿಯಾಗಿತ್ತು. ರಾಶಿ ಸೋಮಾರಿತನ, ಒಂಚೂರು ಸಿನಿಕತನ, ಮೇಲಿಂದ ಮುತ್ತಿಕೊಂಡ ಗೊಂದಲದ ಬಿಂಜಲುಬಲೆ.... ನಿಜ ಹೇಳಬೇಕೆಂದರೆ ನನ್ನ ಬಳಿ 'ಪೆನ್ನು' ಇರುವುದೇ ಮರೆತು ಹೋಗಿತ್ತು. ಇವತ್ತೇಕೋ ನೆನಪಾಯಿತು. ಎತ್ತಿ ತೊಳೆದು, ಶಾಯಿ ತುಂಬುತ್ತಿದ್ದೇನೆ. ಈ ಬಾರಿ ಯಾವ '....ತನ'ದ ಗಾಳಿಯೂ ಅದನ್ನು ಒಣಗಗೊಡದಿರಲಿ ಎಂಬುದೊಂದು ಹಾರೈಕೆ.

1 ಕಾಮೆಂಟ್‌:

  1. ನನ್ನ ಕಥೆನು ಅದೇ ಆಗಿದೆ, ತುಂಬಾ ದಿನದಿಂದ ಬರೆಯೋಕೆ ಆಗ್ತಾ ಇಲ್ಲ. ನಿಮ್ಮ ಬ್ಲಾಗ್ ನೋಡಿ ಎಅಗ ಉತ್ಸಾಹ ಬಂದಿದೆ. ಬರೆಯುತ್ತಿರಿ

    ಪ್ರತ್ಯುತ್ತರಅಳಿಸಿ